ಸಾಂಸ್ಕೃತಿಕ ನಗರಿಯಲ್ಲಿ ಶ್ವಾನ ಲೋಕ ಅನಾವರಣ


Team Udayavani, Oct 3, 2022, 3:41 PM IST

ಸಾಂಸ್ಕೃತಿಕ ನಗರಿಯಲ್ಲಿ ಶ್ವಾನ ಲೋಕ ಅನಾವರಣ

ಮೈಸೂರು: ನಾನಾ ಬಣ್ಣದ, ಸಣ್ಣ ಗಾತ್ರದಿಂದ ಆಳೆತ್ತರದವರೆಗಿನ ವಿಭಿನ್ನ ತಳಿಯ ಶ್ವಾನಗಳ ಲೋಕ ನಗರದ ಮೈಸೂರು ವಿಶ್ವವಿದ್ಯಾ ಲಯದ ನ್ಪೋರ್ಟ್ಸ್ ಅಂಡ್‌ ಫೆವಿಲಿಯನ್‌ ಮೈದಾನದಲ್ಲಿ ಅನಾವರಣಗೊಂಡಿತ್ತು.

ತರಹೇವಾರಿ ತಳಿಯ ನಾಯಿಗಳು ತಮ್ಮ ಒಡೆಯನೊಂದಿಗೆ ಇಡೀ ಮೈದಾನದಲ್ಲಿ ಅತ್ತಿಂದಿತ್ತ ಬಿಂಕು ಬಿನ್ನಾಣದಿಂದ ಓಡಾಡುತ್ತಾ ಶ್ವಾನ ಪ್ರಿಯರ ಮನಸೂರೆಗೊಳಿಸುವ ದೃಶ್ಯ ಒಂದೆಡೆಯಾದರೆ, ಮೈದಾನಕ್ಕೆ ಆಗಮಿಸಿದ್ದ ನೂರಾರು ಯುವತಿಯರು ಮುದ್ದಾದ ಶ್ವಾನಗಳ ವಯ್ನಾರ, ನಜೂಕಿಗೆ ಮನಸೋತು ತಬ್ಬಿ, ಮುದ್ದಾಡುವ ದೃಶ್ಯ ನೋಡುಗರಿಗೆ ಶ್ವಾನ ಪ್ರೇಮವನ್ನು ಇಮ್ಮಡಿಯಾಗಿಸುವಂತಿತ್ತು. ನಾಡಹಬ್ಬ ಮೈಸೂರು ದಸರಾ ಉತ್ಸವ ಅಂಗವಾಗಿ ರೈತ ದಸರಾ ಉಪಸಮಿತಿಯಿಂದ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಅಂಡ್‌ ಫೆವಿಲಿಯನ್‌ ಮೈದಾನದಲ್ಲಿ ಆಯೋಜಿಸಿದ್ದ ಸಾಕು ಪ್ರಾಣಿ ಗಳ ಪ್ರದರ್ಶನದಲ್ಲಿ ಮೈಸೂರು ನಗರ, ಗ್ರಾಮೀಣ ಭಾಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ 23 ತಳಿಯ, ಸಾವಿರಕ್ಕೂ ಹೆಚ್ಚು ಶ್ವಾನಗಳು ಹಾಗೂ 50ಕ್ಕೂ ಹೆಚ್ಚು ಬಗೆ ಬಗೆಯ ತಳಿಯ ಬೆಕ್ಕುಗಳು ಗಮನ ಸೆಳೆದವು.

ಗಮನ ಸೆಳೆದ ಚಾರ್ಲಿ: ಇತ್ತೀಚೆಗೆ ತೆರೆಕಂಡ ಚಾರ್ಲಿ 777 ಚಲನ ಚಿತ್ರದ ಶ್ವಾನ ಚಾರ್ಲಿ ಸಾಕು ಪ್ರಾಣಿಗಳ ಪ್ರದರ್ಶನ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಚಿತ್ರನಟ, ನಟಿ ಯರು ಹಾಗೂ ಸೆಲಿಬ್ರೆಟಿಗಳಿನ್ನು ನೋಡಲು ಜನ ಮುಗಿಬೀಳುವ ದೃಶ್ಯ ಸಾಮಾನ್ಯ. ಚಾರ್ಲಿ ಕಂಡೊಂಡನೆ ನೂರಾರು ಮಂದಿ ಅದ ರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರೆ, ಇನ್ನೂ ಕೆಲವರು ಚಾರ್ಲಿಯನ್ನು ಸ್ಪರ್ಶಿಸಿ, ಮೈದಡವಿ ಸಂಭ್ರಮಿಸಿದರು.

ಅಪರೂಪದ ತಳಿಗಳ ದರ್ಶನ: ಮೈದಾನದಲ್ಲಿ ಜರ್ಮನ್‌ ಶಫ‌ರ್ಡ್‌, ಡಾಬರ್‌ ಮೆನ್‌, ಗೋಲ್ಡನ್‌ ರಿಟ್ರವರ್‌, ಲ್ಯಾಬ್‌, ಸೈಬೀರಿ ಯನ್‌ ಹಸ್ಕಿ, ರ್ಯಾಟ್‌ವ್ಹೀಲರ್‌ ತಳಿಯ ನೂರಾರು ಶ್ವಾನ ಗಳು ಕಂಡು ಬಂದವು. ಇವುಗಳ ಜೊತೆಗೆ ಚೈನೀಸ್‌ ತಳಿಯ ಪೀಕಿಂಗೀಸ್‌ ನಾಯಿ ಪ್ರಮುಖ ಆಕರ್ಷಣೆ ಯಾಗಿತ್ತು. ಮೈತುಂಬ ಉದ್ದದ ರೋಮಗ ಳೊಂದಿಗೆ ಆಕರ್ಷ ಮುಖ ಚಹರೆ ಹೊಂದಿದ್ದ ಈ ಶ್ವಾನ ಇಡೀ ಮೈಸೂರಿನಲ್ಲಿ ಇರುವುದು ಒದೊಂದೆ ಎಂಬುದು ಗಮನಾರ್ಹ.

ಗ್ರೇಟ್‌ ಡೆನ್‌, ಸೆಂಟ್‌ ಬರ್ನಾಡ್‌, ಅಮೆರಿಕನ್‌ ಬುಲ್ಲಿ, ಮಿನ್‌ಪಿನ್‌, ಬೀಗಲ್‌, ಫ್ರೆಂಚ್‌ ಬುಲ್‌, ಡೂಡಲ್‌ ರೆಡ್‌ ರಿಟನ್‌, ಮೆಲ್ಜಿಯನ್‌ ಮೆಲಿಯೋಸ್‌, ಡ್ಯಾಶೂಂಡ್‌, ಪೂಡಲ್‌, ಚೌ ಚೋ, ಶಿಟ್ಝೂ, ಲ್ಯಾಶೋಪ್ಸ್‌, ಪಿಟ್‌ ಬುಲ್‌, ಬೆಲ್ಜಿಯಂ ಶಫ‌ರ್ಡ್‌ ಪ್ರಮುಖ ಆಕರ್ಷಣೆಯಾಗಿದ್ದವು. ಇದರ ಜತೆಗೆ ದೇಶಿ ತಳಿಯಾದ ಮುಧೋಳ್‌ ಮತ್ತು ರಾಜುಪಲ್ಲಿ ನಾಯಿಗಳು ಗಮನ ಸೆಳದವು.

ಮಾರ್ಜಾಲಗಳ ವಯ್ನಾರ : ಸಾಕುಪ್ರಾಣಿಗಳ ಪ್ರದರ್ಶನದಲ್ಲಿ ಶ್ವಾನಗಳಷ್ಟೇ ಅಲ್ಲದೆ ಮನೆಯ ಮುದ್ದಿನ ಪ್ರಾಣಿ ಎಂದೇ ಹೆಸರಾದ ಬೆಕ್ಕುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನೋಡುಗರನ್ನು ಬೆರಗುಗೊಳಿಸಿದವು. ಬೆಂಗಾಲ್‌ ಕ್ಯಾಟ್‌, ಬಾಂಬೆ ಕ್ಯಾಟ್‌, ಹಿಮಾಲಯನ್‌ ಕ್ಯಾಟ್‌, ಮೈನ್‌ ಕೂನ್‌, ಬ್ರಿಟೀಷ್‌ ಶಾರ್ಥಾçರ್‌, ಪಶಿಧಯನ್‌ ಕ್ಯಾಟ್‌ ಸೇರಿದಂತೆ ನಾಲ್ಕೈದು ತಳಿಯ 50ಕ್ಕೂ ಹೆಚ್ಚು ಬೆಕ್ಕುಗಳು ಬಿಂಕು, ಬಿನ್ನಾಣದಿಂದ ಓಡಾಡುತ್ತ ತಮ್ಮ ವಯ್ನಾರ ಪ್ರದರ್ಶಿಸಿದವು.

 

-ಸತೀಶ್‌ ದೇಪುರ

ಟಾಪ್ ನ್ಯೂಸ್

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಚತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Mysore; ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಛತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು

Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು

ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದ ಹುಣಸೂರಿನ ಮಹಿಳೆ ಮೃತ್ಯು… ಆತಂಕದಲ್ಲಿ ಕುಟುಂಬ

ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದ ಹುಣಸೂರಿನ ಮಹಿಳೆ ಮೃತ್ಯು… ಆತಂಕದಲ್ಲಿ ಕುಟುಂಬ

Congress ಲೂಟಿ ತಪ್ಪಿಸಲು ಬಿಜೆಪಿ ಜತೆ ಮೈತ್ರಿ: ಎಚ್‌.ಡಿ. ದೇವೇಗೌಡ

Congress ಲೂಟಿ ತಪ್ಪಿಸಲು ಬಿಜೆಪಿ ಜತೆ ಮೈತ್ರಿ: ಎಚ್‌.ಡಿ. ದೇವೇಗೌಡ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.