ನಾಪತ್ತೆಯಾಗಿದ್ದ ಲಕ್ಷ್ಮೀಶ ಆನೆ ಸಾವು
Team Udayavani, Sep 21, 2018, 6:45 AM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಸಾಕಾನೆ ಶಿಬಿರದಿಂದ 20 ದಿನಗಳ ಹಿಂದೆ
ಮೇಯಲು ಬಿಟ್ಟಿದ್ದ ವೇಳೆ ಮದವೇರಿ ನಾಪತ್ತೆಯಾಗಿದ್ದ ಆನೆ ಲಕ್ಷ್ಮೀಶ, ಕಲ್ಲಳ್ಳ ವಲಯದಲ್ಲಿ ಮೃತಪಟ್ಟಿದೆ. ಉಡುಪಿ ಶಿರೂರು ಮಠಕ್ಕೆ ಸೇರಿದ ಆನೆಯಾಗಿದ್ದ ಲಕ್ಷ್ಮೀಶನನ್ನು ಪುಂಡಾಟ ತಾಳಲಾರದೆ 5 ವರ್ಷಗಳ ಹಿಂದೆ ಕರೆ ತಂದು ಮತ್ತಿಗೋಡು ಶಿಬಿರದಲ್ಲಿ ಆಶ್ರಯ ನೀಡಲಾಗಿತ್ತು.
20 ದಿನಗಳ ಹಿಂದೆ ಮೇಯಲು ಬಿಟ್ಟಿದ್ದ ವೇಳೆ ನಾಪತ್ತೆಯಾಗಿತ್ತು. ಮದವೇರಿದ್ದ ಆನೆ, ಕಾಡಾನೆಗಳ ಹಿಂಡಿನಲ್ಲಿ ಸೇರಿಕೊಂಡು, ಗುದ್ದಾಡಿ ಸಾಕಷ್ಟು ಪೆಟ್ಟು ಮಾಡಿಕೊಂಡಿತ್ತು. ಈ ಮಧ್ಯೆ, ಮಂಗಳವಾರ ಸಂಜೆ ವೇಳೆ ಕಲ್ಲಳ್ಳ ವಲಯದ ಕೊಳಂಗೇರಿ ಹಾಡಿ ಬಳಿ ಆನೆಯನ್ನು ಪತ್ತೆ ಹಚ್ಚಲಾಗಿತ್ತು. ಆನೆಯನ್ನು ಮತ್ತೆ ಸೆರೆ ಹಿಡಿದು, ಶಿಬಿರಕ್ಕೆ ಕರೆ ತರುವ ಸಲುವಾಗಿ ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಅವರು ಅರವಳಿಕೆ ಚುಚ್ಚುಮದ್ದು ನೀಡಿದ್ದರು. ಇದರಿಂದ ಜ್ಞಾನತಪ್ಪಿ, ನಂತರ ಎಚ್ಚರಗೊಂಡಿದ್ದ ಆನೆ, ಮತ್ತೆ ಅಸ್ವಸ್ಥಗೊಂಡು ಮೃತಪಟ್ಟಿದೆ. ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಆರ್.ರವಿಶಂಕರ್, ಎ.ಸಿ.ಎಫ್. ಪ್ರಸನ್ನಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಶವ ಪರೀಕ್ಷೆ ವರದಿ ನಂತರವಷ್ಟೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Bangaluru cafe ಸ್ಫೋಟದ ಸಂಚುಕೋರ ಎನ್ಐಎ ಬಲೆಗೆ: ಯಾರಿದು ಷರೀಫ್?
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್