ಅತೃಪ್ತ ಶಾಸಕರ ಸಹಕಾರ ಇಲ್ಲದಿದ್ರೆ ನಿಮ್ಮ ಸರಕಾರ ರಚನೆ ಆಗ್ತಿತ್ತಾ? ಬಿಜೆಪಿಗೆ ಪ್ರಸಾದ್
Team Udayavani, Aug 27, 2019, 1:38 PM IST
ಮೈಸೂರು:ಸರಕಾರ ರಚಿಸಲು ನಿಮಗೆ ಬಹುಮತ ಇದೆಯಾ? ಡಿಸಿಎಂ ಸ್ಥಾನ, ಖಾತೆಗಾಗಿ ಜಗಳ ಬಿಡಿ. ಅತೃಪ್ತ ಶಾಸಕರ ಬಗ್ಗೆ ನಿಮಗೆ ಗಮನ ಬೇಡ್ವಾ? ಇದು ಬಿಜೆಪಿ ಮುಖಂಡ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನೀಡಿದ ಪ್ರತಿಕ್ರಿಯೆ.
ಮಂಗಳವಾರ ನೂತನ ಸಚಿವ ಸಂಪುಟದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಹಾಗೂ ಖಾತೆಗಾಗಿ ನಡೆಯುತ್ತಿರುವ ಒಳಜಗಳದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಅಸಹ್ಯಕರ ಬೆಳವಣಿಗೆ ನಡೆಯುತ್ತಿದೆ. ಅಸಮಾಧಾನಿತರನ್ನು ಸಮಾಧಾನಪಡಿಸಲು ಡಿಸಿಎಂ ಹುದ್ದೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಈ ಸರಕಾರದಲ್ಲಿ ಡಿಸಿಎಂ ಹುದ್ದೆ ಬೇಕಾಗಿರಲಿಲ್ಲ. ನಿಮ್ಮ ಸರಕಾರಕ್ಕೆ ಬಹುಮತ ಇಲ್ಲಾ..ಅತೃಪ್ತ ಶಾಸಕರ ಬಗ್ಗೆ ಗಮನ ಕೊಡಿ. ಅವರು ಇಲ್ಲದಿದ್ದರೆ ನಿಮ್ಮ ಸರಕಾರ ರಚನೆ ಆಗುತ್ತಿತ್ತಾ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!