ಬಿರುಗಾಳಿ ಮಳೆಗೆ ಬಾಳೆ ನಾಶ
Team Udayavani, Jun 9, 2019, 3:00 AM IST
ನಂಜನಗೂಡು: ಶುಕ್ರವಾರ ರಾತ್ರಿ ಸುರಿದ ಮಳೆ ಹಾಗೂ ಬೀಸಿದ ಬಿರುಗಾಳಿಗೆ ತಾಲೂಕಿನ ಕೃಷಿ ವಲಯ ತತ್ತರಿಸುವಂತಾಗಿದೆ. ಮಳೆಗಾಗಿ ಕಾತರಿಸುತ್ತಿದ್ದ ತಾಲೂಕಿನ ಜನತೆ ಗುರುವಾರ ಹಾಗೂ ಶುಕ್ರವಾರ ಸುರಿದ ಮಳೆಯಿಂದಾಗಿ ನೆಮ್ಮದಿ ಕಾಣುವಂತಾದರೂ ಅಲ್ಲಲ್ಲಿ ಸಾಕಷ್ಟು ಹಾನಿಯಾಗಿದೆ.
ಶುಕ್ರವಾರದ ಮಳೆ ಗಾಳಿಗೆ ತಾಲೂಕಿನ ಶಿರಮಳ್ಳಿ ರಾಂಪುರ ಕಸುನಹಳ್ಳಿ ಏಲಚಗೆರೆ ಮುಂತಾದ ಗ್ರಾಮಗಳಲ್ಲಿನ ಬಾಳೆ, ಹತ್ತಿ, ಕಬ್ಬು ಸಂಪೂರ್ಣ ನಾಶವಾಗಿವೆ. ಗ್ರಾಮದಲ್ಲಿ ನಾಲ್ಕಾರು ಮನೆಗಳು ಕುಸಿದು ಬಿದ್ದಿದ್ದು ಆ ಕುಟುಂಬಗಳು ಬೀದಿಗೆ ಬಂದಿವೆ.
ಶನಿವಾರ ಬೆಳಗ್ಗೆ ತಹಶೀಲ್ದಾರ್ ಮಹೇಶಕುಮಾರ್ ನೇತೃತ್ವದಲ್ಲಿ ತಾಲೂಕಿನ ಅಧಿಕಾರಿಗಳ ತಂಡ ಈ ಎಲ್ಲಾ ಗ್ರಾಮಗಳಿಗೆ ತೆರಳಿ ಸರ್ಕಾರ ನಿಮ್ಮೊಂದಿಗೆದೆ ಎಂದು ಧೈರ್ಯ ತುಂಬಿದರು.
ಬಿರುಗಾಳಿ ಮಳೆಗೆ ತಾಲೂಕಿನ 100ಕ್ಕೂ ಹೆಚ್ಚು ಎಕರೆ ಪ್ರದೇಶಗಳಲ್ಲಿನ ಫಸಲಿಗೆ ಹಾನಿಯಾಗಿದ್ದು ಅವುಗಳ ನಷ್ಟದ ಅಂದಾಜಿನ ಲೆಕ್ಕ ಹಾಕಲಾಗುತ್ತಿದೆ ಎಂದ ಅವರು ಬೆಳೆ ನಷ್ಟವನ್ನು ಸ್ಥಳ ಪರೀಕ್ಷೆ ಮೂಲಕ ತಿಳಿದು ನಂತರ ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ಕಳಿಸಲಾಗುವದು ಎಂದರು.
ತಾಲೂಕಿನ ಬೆಳಲೆ ಹಾಗೂ ಶಿರಮಳ್ಳಿಯಲ್ಲಿ ನಾಲ್ಕು ಗುಡಿಸಲುಗಳು ಭಾಗಶಃ ಕುಸಿದಿದೆ ಎಂದು ಮಹೇಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ