ಫ್ರಾನ್ಸ್‌ ತಂಡಕ್ಕೆ ದೇಸಿ ಸಂಸ್ಕೃತಿ ಅರಿವು


Team Udayavani, Aug 26, 2018, 11:42 AM IST

m5-france.jpg

ಹುಣಸೂರು: ದೂರದ ದೇಶ ಫ್ರಾನ್ಸ್‌ನ ಇಂಜಿನಿಯರ್‌ಗಳು ಭಾರತದ ಸಂಸ್ಕೃತಿಯನ್ನು ಅರಿಯಲು ಕರ್ನಾಟಕಕ್ಕೆ ಆಗಮಿಸಿರುವುದೂ ಅಲ್ಲದೆ ಹಾಡಿಯೊಂದರಲ್ಲಿ ಶೌಚಾಲಯ ಹಾಗೂ ಸ್ನಾನಗೃಹವನ್ನು ನಿರ್ಮಿಸಿಕೊಡುವ ಮೂಲಕ ಪರಿಸರ ಜಾಗೃತಿ ಮೂಡಿಸುವಲ್ಲಿ ಮಾದರಿಯಾಗಿದ್ದಾರೆ. 

ಫ್ರಾನ್ಸ್‌ನ ಹಿಲಾಪ್‌ ಗ್ರೂಪ್‌ ನೆರವಿನೊಂದಿಗೆ ಇಎಸ್‌ಟಿಪಿ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಸ್ವಯಂಸೇವಕರಾದ ಜಿನಾಥನ್‌, ಸಲೋಮಿ ತಂಡದ ನಾಯಕರಾಗಿದ್ದು, ನೆವಿರಿನಾ, ಅಮಾಂಡಿನ್‌, ಅಲೀಸ್‌, ಲಿಯಾ, ಅಗೆತ್‌,ರಾಬಿನ್‌, ಕೂಮ್ಸನ್‌, ಬ್ಯಾಟಿಸ್ಟೆ, ಲುಕಾಸೊ, ಕೌಸನ್‌, ಕಿಮಿ, ಅಡ್ರಿಯೋನ್‌ ದೇಶದ ಸಂಸ್ಕೃತಿ, ಪರಿಸರ, ಕೃಷಿ ಪದ್ಧತಿ ಸೇರಿದಂತೆ ದೇಶದ ಸಮಗ್ರ ಅಧ್ಯಯನಕ್ಕೆ ಆಗಮಿಸಿದೆ.

ಫ್ರಾನ್ಸ್‌ನ ಪ್ಯಾರೀಸ್‌ನ ಇಂಜಿನಿಯರ್ ಸ್ಕೂಲ್‌ ಸ್ಪೆಷಲ್‌ ಫಾರ್‌ ಪಬ್ಲಿಕ್‌ ಕಾಲೇಜಿನ ಹಿಲಾಪ್‌ ಗ್ರೂಪ್‌ ನ 15 ವಿದೇಶಿ ವಿದ್ಯಾರ್ಥಿಗಳ ತಂಡಕ್ಕೆ ಇಲ್ಲಿನ ಎಫ್‌ಎಸ್‌ಎಲ್‌ ಸ್ವಯಂಸೇವಾ ಸಂಸ್ಥೆ, ಹುಣಸೂರು ತಾಲೂಕು ಬಲ್ಲೇನಹಳ್ಳಿ ಗಿರಿಜನರು ನೆರವಾಗಿದ್ದಾರೆ.

ಹಾಡಿಯಲ್ಲಿ 6 ಕುಟುಂಬಗಳಿಗೆ ಬಿಡುವಿನ ವೇಳೆಯಲ್ಲಿ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡಿ ಉಳಿಸಿದ ಹಣದಲ್ಲಿ ತಲಾ 50 ಸಾವಿರ ವೆಚ್ಚದಡಿ ತಾವೇ ಶ್ರಮದಾನ ನಡೆಸಿ, ಸುಂದರವಾದ ಸ್ನಾನಗೃಹ ಸಹಿತ ಶೌಚಾಲಯವನ್ನು ನಿರ್ಮಿಸಿಕೊಟ್ಟಿರುವುದಲ್ಲದೆ ಬಣ್ಣದ ಚಿತ್ತಾರ ಬಿಡಿಸಿ ಅಚ್ಚುಕಟ್ಟು ಮಾಡಿದ್ದಾರೆ.

ಶೌಚಾಲಯ ನಿರ್ಮಾಣವಾಗಿದ್ದು ಹೀಗೆ: ಮಳೆ-ಬಿಸಿಲಿನ ನಡುವೆ ಶ್ರಮದಾನದ ಮೂಲಕ ಶೌಚಾಲಯ ಕಟ್ಟಡದ ಪಿಟ್‌ ತೋಡಿದರು. ಕಟ್ಟಡ ನಿರ್ಮಾಣ-ಗಿಲಾವ್‌ನ ಗಾರೆ ಕಲಸಿ, ಸ್ಥಳೀಯ ಗಾರೆ ಕೆಲಸಗಾರರ ಸಹಕಾರದಲ್ಲಿ ಇಡೀ ಕಟ್ಟಡ ನಿರ್ಮಿಸಿದರು. ಕ್ಯೂರಿಂಗ್‌ ಸಹ ಮಾಡಿದರು. ಇಷ್ಟೆ ಅಲ್ಲದೆ ಕಟ್ಟಡಕ್ಕೆ ಬಣ್ಣ ಹಚ್ಚಿ, ಶೌಚಾಲಯ ಬಳಕೆ ಹಾಗೂ ಶುಚಿತ್ವದ ಮಹತ್ವವನ್ನು ಚಿತ್ರ ಸಮೇತ ಅರಿವು ಮೂಡಿಸಿದರು. 

ಮಕ್ಕಳಿಗೆ ಇಂಗ್ಲಿಷ್‌ ಪಾಠ: ಗ್ರಾಮದ ಸರಕಾರಿ ಹಿರಿಯ ಫ್ರಾಥಮಿಕ ಶಾಲೆಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಿಗೆ ಶುಚಿತ್ವದ ಮಹತ್ವ, ಪರಿಸರದ ಅರಿವು, ಇಂಗ್ಲಿಷ್‌, ಗಣಿತ, ಸಮಾಜಶಾಸ್ತ್ರದ ಬಗ್ಗೆ ಜಾಗೃತಿ ಮೂಡಿಸಿದರು ಹಾಗೂ ಶಾಲೆಯ ಗೋಡೆಗಳ ಮೇಲೆ ನೀರು ಮತ್ತು ಪರಿಸರದ ಮಹತ್ವ ಸಾರುವ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. 

ಹಾಡಿ ಜನರು, ರೈತರು ಇಲ್ಲಿನ ಕೃಷಿ, ಸಂಸ್ಕೃತಿ, ಸಾಂಸ್ಕೃತಿಕ, ಹಬ್ಬ-ಹರಿದಿನಗಳ ಬಗ್ಗೆ ವಿವರಿಸಿದರು. ವಿದೇಶಿ ತಂಡ ಕೆಸರುಗದ್ದೆಗಿಳಿದು ಭತ್ತದ ನಾಟಿ ಮಾಡಿ ದೇಸಿ ಭತ್ತದ ನಾಟಿ ಬಗ್ಗೆ ತಿಳಿದುಕೊಂಡರು.

ಪ್ರವಾಸ: ಶ್ರಮದಾನದ ಜೊತೆಗೆ ವೀಕೆಂಡ್‌ಗಳಲ್ಲಿ ನಾಗರಹೊಳೆ ಉದ್ಯಾನ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಮಡಿಕೇರಿ, ಮೈಸೂರು, ಚಾಮುಂಡಿಬೆಟ್ಟ ಮತ್ತಿತರ ಕಡೆ ಪ್ರವಾಸ ಮಾಡಿ ಇಲ್ಲಿನ ವೈವಿದ್ಯಮಯ ಸಂಸ್ಕೃತಿ ಪರಿಚಯ ಮಾಡಿಕೊಂಡರು.

ಕಳೆದ ನಾಲ್ಕು ವರ್ಷಗಳಿಂದ ಫ್ರಾನ್ಸ್‌ನ ಇ.ಎಸ್‌.ಟಿ.ಪಿ ಕಾಲೇಜಿನ ಇತರೆ ವಿದ್ಯಾರ್ಥಿಗಳ ತಂಡ ಉಚಿತವಾಗಿ ಎರಡು ಮನೆ ಹಾಗೂ ಈವರೆವಿಗೆ 30 ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ. ಜತೆಗೆ ಶಾಲೆಗೂ ನೆರವಾಗಿದೆ ಎಂದು ಎಫ್‌ಎಸ್‌ಎಲ್‌ ಸಂಸ್ಥೆಯ ಮಂಜು ತಿಳಿಸಿದರು.

ಭಾರತದ ಸಂಸ್ಕೃತಿ ಅರಿವಿಗೆ ಪ್ರವಾಸ: ಫ್ರಾನ್ಸ್‌ನ ಪ್ಯಾರೀಸ್‌ನ ಇಂಜಿನಿಯರ್ ಸ್ಕೂಲ್‌ ಸ್ಪೆಷಲ್‌ ಫಾರ್‌ ಪಬ್ಲಿಕ್‌ ವರ್ಕ್‌ ಇಂಜಿನಿಯರಿಂಗ್‌ ಕಾಲೇಜಿನ 15 ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಮಾಲ್‌ಗ‌ಳಲ್ಲಿ ಕೆಲಸ ಮಾಡಿ ಸಂಪಾದಿಸಿ ಉಳಿತಾಯ ಮಾಡಿದ್ದ ಹಣದಲ್ಲಿ ವಿಶ್ವಾದ್ಯಂತ ತನ್ನ ಶಾಖೆಗಳನ್ನು ಹೊಂದಿರುವ ಹಿಲಾಪ್‌ ಗ್ರೂಪ್‌ಸಂಪರ್ಕಿಸಿ ಭಾರತದ ಸಂಸ್ಕೃತಿಯನ್ನು ಅರಿಯಲು ಪ್ರವಾಸ ಕೈಗೊಂಡಿದ್ದರು.

ಆದರೆ, ಭಾರತಕ್ಕಾಗಮಿಸಿದ ವೇಳೆ ನೆರವಿಗೆ ಬಂದಿದ್ದು, ಬೆಂಗಳೂರು ಮೂಲದ ಎಫ್‌ಎಸ್‌ಎಲ್‌ ಸ್ವಯಂಸೇವಾ ಸಂಸ್ಥೆಯ ಮಂಜುರವರ ಸಹಕಾರದಿಂದ ಹುಣಸೂರು ತಾಲೂಕು ಬಲ್ಲೇನಹಳ್ಳಿ ಗಿರಿಜನ ಹಾಡಿಯ ಜನರ ಆಚಾರ ವಿಚಾರ ಅರಿಯಲು ಬಂದಿರುವುದಾಗಿ ತಂಡದ ನಾಯಕ ಜಿನಾಥನ್‌ ಹೇಳಿದರು.

* ಸಂಪತ್‌ಕುಮಾರ್‌

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಾಲ್ಕೇ ದಿನದಲ್ಲಿ ಮ್ಯಾಜಿಕ್‌ ಆಗುತ್ತೆ, ನೋಡ್ತಾ ಇರಿ: ಬಿ.ವೈ.ವಿಜಯೇಂದ್ರ

ನಾಲ್ಕೇ ದಿನದಲ್ಲಿ ಮ್ಯಾಜಿಕ್‌ ಆಗುತ್ತೆ, ನೋಡ್ತಾ ಇರಿ: ಬಿ.ವೈ.ವಿಜಯೇಂದ್ರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.