ಮೃಗಾಲಯದಲ್ಲಿ ಜಿರಾಫೆ, ನೀರು ಕುದುರೆ ಮರಿಗಳ ಜನನ
Team Udayavani, May 30, 2018, 11:52 AM IST
ಮೈಸೂರು: ಮೈಸೂರು ಮೃಗಾಲಯದಲ್ಲಿ ಹೆಣ್ಣು ಜಿರಾಫೆ ಹಾಗೂ ನೀರು ಕುದುರೆಯ ಮರಿಗಳ ಜನನವಾಗಿದೆ. ಮೈಸೂರು ಮೃಗಾಲಯದ ಕೃಷ್ಣ ಮತ್ತು ಜಲೇಶಿ ನೀರು ಕುದುರೆಗಳಿಗೆ ಒಂದು ಮರಿ ಜನಿಸಿದ್ದು, ಕೃಷ್ಣರಾಜ ಮತ್ತು ಖುಷಿ ಜಿರಾಫೆಗಳಿಗೆ ಒಂದು ಹೆಣ್ಣು ಮರಿ ಜನಿಸಿದೆ.
ಜಲೇಶಿ ನೀರು ಕುದುರೆ ಹಾಗೂ ಖುಷಿ ಜಿರಾಫೆಯು ತಂತಮ್ಮ ಮರಿಗೆ ಹಾಲುಣಿಸುವುದರ ಮೂಲಕ ಚೆನ್ನಾಗಿ ಆರೈಕೆ ಮಾಡುತ್ತಿದ್ದು, ತಮ್ಮ ಮರಿಗಳನ್ನು ಪೋಷಿಸುವುದಾಗಿ ಆಶಿಸಲಾಗಿದೆ. ಮರಿಗಳು ಹಾಗೂ ತಾಯಂದಿರ ಆರೈಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಸಿ.ರವಿಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ