ಸಚಿವರೇ, ಅಧಿಕಾರಿಗಳ ಮಾತು ಕೇಳಬೇಡಿ, ಆಸ್ಪತ್ರೆಗೆ ಹೋಗಿ
Team Udayavani, May 8, 2021, 5:44 PM IST
ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಬರಿ ಅಧಿಕಾರಿಗಳ ಮಾತು ಕೇಳಬಾರದು. ನೀವೇ ನೇರವಾಗಿ ಆಸ್ಪತ್ರೆಗೆ ಹೋಗಿ ನೋಡಿ ಎಂದುಎಂಎಲ್ಸಿ ಎಚ್.ವಿಶ್ವನಾಥ್ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಹೇಳಿದ್ದೇ ಸತ್ಯ ಅಂದುಕೊಂಡರೆ ಅನಾಹುತ ವಾಗುತ್ತದೆ. ಡಿಎಚ್ಒ ಕೂಡ ಅಸಹಾಯಕರಾಗಿರೆ. ಕರ್ನಾಟಕದ ಆಡಳಿತಕ್ಕೆ ಪಕ್ಕದ ರಾಜ್ಯದವರು ನಮಗೆ ಮಾದರಿಯಾಗಿದ್ದಾರೆ ಎಂದರು.
ಚಾ.ನಗರ ಜಿಲ್ಲಾಧಿಕಾರಿಗೆ ಬುದ್ಧಿ ಹೇಳುವ ಶಕ್ತಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಳೆದುಕೊಂಡಿದ್ದಾರೆ. ಹೊಗಳು ಭಟ್ಟರು, ಪುತ್ರ ವ್ಯಾಮೋಹ ಹಾಗೂ ರೈಲು ಹತ್ತಿಸುವವರಿಂದ ನೀವು ದೂರ ಇರಬೇಕು.ಇಂತ ಸಂಕಷ್ಟದ ಸಂದರ್ಭದಲ್ಲಿ ಮಠ ಮಾನ್ಯಗಳು ನೆರವಿಗೆ ಬರುವಂತೆ ಮನವಿ ಮಾಡಿ. ಏಕೆಂದರೆ ರಾಜ್ಯದ ಹಲವು ಮಠಗಳಿಗೆ ನೂರಾರು ಕೋಟಿ ಹಣವನ್ನು ಸರ್ಕಾರದ ಬೊಕ್ಕಸದಿಂದ ನೀಡಿದ್ದೀರಿ. ಅವರಿಂದ ವಾಪಾಸು ಸಹಾಯ ಕೇಳಿ ಎಂದು ಒತ್ತಾಯಿಸಿದರು.