ಎಲ್ಲರಿಗೂ ಒಳಿತಾಗಲಿ ಎಂದರೆ ದೇವರಿಗೆ ಮೆಚ್ಚು


Team Udayavani, Nov 10, 2019, 3:00 AM IST

ellarigu

ಹುಣಸೂರು: ಮೊದಲೆಲ್ಲ ಧರ್ಮ ಕಾರ್ಯಗಳಿಗೆ ಪ್ರಸಿದ್ಧಿಯಿತ್ತು. ಈಗ ದಾನ-ಧರ್ಮ ಮಾಡುವವರೇ ಕಡಿಮೆಯಾಗಿದ್ದಾರೆ. ನನಗೆ-ನಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡು ಎನ್ನುವ ಬದಲು ಎಲ್ಲರಿಗೂ, ಊರಿಗೆ ಒಳಿತಾಗಲಿ ಎಂದರೆ ಮಾತ್ರ ದೇವರು ಮೆಚ್ಚುತ್ತಾನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ತಾಲೂಕಿನ ಧರ್ಮಾಪುರದಲ್ಲಿ 1,115 ವರ್ಷಗಳ ಇತಿಹಾಸವಿರುವ ಹೊಯ್ಸಳರ ಕಾಲದ ಚನ್ನಕೇಶವಸ್ವಾಮಿ ದೇವಾಲಯದ ಪುನರ್‌ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಮಾತನಾಡಿದರು.

ದೇಶದಲ್ಲಿ ಭವ್ಯ ಪರಂಪರೆಯಿದ್ದು, ಸಾವಿರಾರು ದೇವಾಲಯಗಳಿವೆ, ದೇವನೊಬ್ಬ ನಾಮ ಹಲವು ಎನ್ನುವಂತೆ ನಂಬಿಕೆಗನುಗುಣವಾಗಿ ಪೂಜೆ ನಡೆಯುತ್ತವೆ. ನಮ್ಮ ನಂಬಿಕೆ ಬದಲಾಗಬಾರದು. ಅಪನಂಬಿಕೆ ಇರಬಾರದು. ದೇವಸ್ಥಾನ ಕಟ್ಟಿ ಅನಾಚಾರ ಮಾಡಿದರೆ ಒಳ್ಳೆಯದಾಗಲ್ಲ. ಜನ ಸೇವೆ, ಬೇರೆಯವರಿಗೆ ಕೇಡು ಬಯಸದೇ ಇರುವುದು, ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದೇ ನಿಜದ ದೇವರು ಎಂದು ಹೇಳಿದರು.

ಮಂಜುನಾಥ್‌ಗೆ ಆಶೀರ್ವದಿಸಿ: ಈ ಕ್ಷೇತ್ರ ಪ್ರತಿನಿಧಿಸಿದ್ದ ಮಂಜುನಾಥ್‌ ಒಬ್ಬ ಜನಪರ-ಬದ್ಧತೆಯುಳ್ಳ ವ್ಯಕ್ತಿ. ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈತನನ್ನು ಆಶೀರ್ವದಿಸಿ, ಬುರುಡೆ ಬಿಡುವವರನ್ನು ಸೋಲಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಮಾತನಾಡಿ, ತಮ್ಮ ಅವಧಿಯಲ್ಲಿ ಸಿದ್ದರಾಮಯ್ಯ ಕರುಣಿಸಿದ ಸಂಸದೀಯ ಕಾರ್ಯದರ್ಶಿಯಾಗಿದ್ದ ವೇಳೆ ಪ್ರವಾಸೋದ್ಯಮ ಇಲಾಖೆಯಿಂದ ಧರ್ಮಾಪುರ ಚನ್ನಕೇಶವ ದೇವಾಲಯಕ್ಕೆ ಒಂದು ಕೋಟಿ, ತರಿಕಲ್‌ ಸಾವಿರ ಕಂಬದ ಬಸದಿ ಅಭಿವೃದ್ಧಿಗೆ 2.5 ಕೋಟಿ ರೂ, ಇನ್ನುಳಿದಂತೆ ಗೋಮಟಗಿರಿ ಕ್ಷೇತ್ರ ಅಭಿವೃದ್ಧಿ, ನಗರಕ್ಕೆ ಸಮೀಪದ ಚಿಕ್ಕಹುಣಸೂರು ಕೆರೆ ಅಭಿವೃದ್ಧಿ ಸೇರಿದಂತೆ 9 ಕೋಟಿ ರೂ. ತಾಲೂಕಿಗೆ ಅನುದಾನ ಬಿಡುಗಡೆಯಾಗಿತ್ತು ಎಂದು ಹೇಳಿದರು.

ಗಾವಡಗೆರೆಮಠದ ನಟರಾಜ ಸ್ವಾಮೀಜಿ, ವಿಶ್ವಕರ್ಮ ಸಮಾಜದ ನೀಲಕಂಠಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಪುನರ್‌ ಪ್ರತಿಷ್ಠಾಪನೆ ಸಮಿತಿ ಅಧ್ಯಕ್ಷ ಧರ್ಮಾಪುರ ನಾರಾಯಣ್‌ ಜೀರ್ಣೋದ್ಧಾರಕ್ಕೆ ನೆರವಾದ ಸಿದ್ದರಾಮಯ್ಯ ಹಾಗೂ ಮಂಜುನಾಥರನ್ನು ಅಭಿನಂದಿಸಿದರು. ಉಪನ್ಯಾಸಕ ಲಕ್ಷ್ಮಿಕಾಂತ್‌ ಧರ್ಮಾಪುರದ ಇತಿಹಾಸ ತಿಳಿಸಿದರು.

ಜಿಪಂ ಸದಸ್ಯ ಡಾ. ಪುಷ್ಪಾ ಅಮರ್‌ನಾಥ್‌, ಕಟ್ಟನಾಯಕ, ಸುರೇಂದ್ರ, ಡಿ.ರವಿಶಂಕರ್‌, ಮಾಜಿ ಅಧ್ಯಕ್ಷ ಮರೀಗೌಡ, ಮಾಜಿ ಸದಸ್ಯ ಕುನ್ನೇಗೌಡ, ತಾಪಂ ಉಪಾಧ್ಯಕ್ಷ ಪ್ರೇಮೇಗೌಡ, ಸದಸ್ಯ ಪ್ರಭಾಕರ್‌, ಗ್ರಾಪಂ ಅಧ್ಯಕ್ಷ ರಾಜು, ಐಶ್ವರ್ಯಾ ಮಹದೇವ್‌, ತಹಶೀಲ್ದಾರ್‌ ಬಸವರಾಜ್‌, ಇಒ ಗಿರೀಶ್‌, ನಾಡಯಜಮಾನ ಚಂದ್ರನಾಯಕ, ಮುಖಂಡ ಮಂಜುಳಾ ಮಾನಸ, ಶಿವರಾಂ, ಆನಂದ್‌, ವೆಂಕಟೇಶ್‌ ರಮೇಶ್‌, ಗೋವಿಂದೇಗೌಡ, ನಿಂಗರಾಜು ವಸಂತಕುಮಾರ್‌, ಕೃಷ್ಣ, ಚೆಲುವಯ್ಯ, ಪುಟ್ಟಮಾದಯ್ಯ, ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಿದ್ದರು.

ಭವ್ಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಆದಿಶಕ್ತಿ ಮಹಾಕಾಳಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಮಂಗಳವಾದ್ಯ, ಗುಡ್ಡರ ಕುಣಿತದೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಕನಕಭವನಕ್ಕೆ ಭೇಟಿ ನೀಡಿದಾಗ ಯುವಪಡೆ ಸೇಬಿನ ಹಾರ ಹಾಕಿ ಅಭಿನಂದಿಸಿತು.

ಆಣೆ ಪ್ರಮಾಣ ದೇವರು ಕೇಳಿದ್ರಾ…: ಕೆಲವರು ಒಳಗೊಳಗೆ ಏನೇನೋ ಮಾಡಿಕೊಂಡು, ಸತ್ಯ ಪ್ರಮಾಣಕ್ಕೆ ದೇವಾಲಯಕ್ಕೆ ಹೋಗುತ್ತಾರೆ. ಆಣೆ ಪ್ರಮಾಣ ಎನ್ನೋದು ಪಾಪದ ಕೆಲಸ. ಇಂಥವ್ರನ್ನ ಆ ದೇವರೂ ಒಪ್ಕೋಳ್ಳಲ್ಲ. ಮನುಷ್ಯನಲ್ಲಿ ಉಪಕಾರ ಸ್ಮರಣೆಯಿರಬೇಕು. ಅದನ್ನ ರಾಜಕಾರಣದಲ್ಲೂ ಪಾಲಿಸಬೇಕು. ಆದರೆ ತಾವು ಐದು ವರ್ಷ ಅಧಿಕಾರದಲ್ಲಿದ್ದಾಗ ಬಡವರಿಗಾಗಿ ಹಲವಾರು ಭಾಗ್ಯಗಳನ್ನು ಕಲ್ಪಿಸಿದೆ. ವಿದ್ಯಾರ್ಥಿಗಳಿಗೆ ನೆರವಾದೆ.

ಸಣ್ಣಪುಟ್ಟ ಸಮಾಜಗಳ ಅಭಿವೃದ್ಧಿಗೆ ನಿಗಮ ಮಾಡಿದೆ. ಆದರೆ ನನ್ನನ್ನೇ ಸೋಲಿಸಿಬಿಟ್ರಾ ಎಂದು ಸಿದ್ದರಾಮಯ್ಯ ಬೇಸರಿಸಿದರು. ನಾನು ಸಿಎಂ ಆಗಿದ್ದಾಗ ಪರಿವಾರ-ತಳವಾರ ಜನಾಂಗವನ್ನು ಎಸ್‌ಟಿಗೆ ಸೇರಿಸಲು ಎರಡು ಬಾರಿ ಶಿಪಾರಸು ಮಾಡಿದೆ. ಇದನ್ನ ಕೇಂದ್ರ ಸರ್ಕಾರ ಆದೇಶಿಸಬೇಕು. ಅದಾಗಲಿಲ್ಲ. ಆದರೆ ಈಗ ಬಂದವರು ನಾನು ಹೇಳಿದೆ ಅಂತ ಹೇಳಿಕೊಳ್ಳುತ್ತಿದ್ದಾರೆ ಎಂದು ಛೇಡಿಸಿದರು.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.