ಸ್ನೇಹಿತನ ಮನೆಯಲ್ಲೇ ಚಿನ್ನ ಕದ್ದು ಸಿಕ್ಕಿಬಿದ್ದ!
Team Udayavani, Sep 25, 2021, 5:10 PM IST
ಸಾಂದರ್ಭಿಕ ಚಿತ್ರ.
ಎಚ್.ಡಿ.ಕೋಟೆ: ಸ್ನೇಹಿತನ ಮನೆಯಲ್ಲೇ ಚಿನ್ನ ಕದ್ದ ಆರೋಪಿಯನ್ನು ಸರಗೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಸಾಗರೆ ಗ್ರಾಮದ ನಿವಾಸಿ ಅಶೋಕ ಬಂಧಿತ ಅರೋಪಿ. ಮತ್ತೂಬ್ಬ ಅರೋಪಿ ಕುಮಾರ ಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಘಟನೆ ವಿವರ: ತಾಲೂಕಿನ ಆಗತ್ತೂರು ಗ್ರಾಮದ ಕೃಷ್ಣ, ಅಶೋಕ ಹಾಗೂ ಕುಮಾರ್ ಸ್ನೇಹಿತರಾಗಿದ್ದರು.ಕೃಷ್ಣನ ಮನೆಯಲ್ಲಿ 18 ಗ್ರಾಂ ಚಿನ್ನ ಇರುವುದನ್ನು ತಿಳಿದಿದ್ದ ಅಶೋಕ್ ಹಾಗೂ ಕುಮಾರ್ ಕಳ್ಳತನಕ್ಕೆ ತಂತ್ರ ರೂಪಿಸಿದ್ದರು. ಅದರಂತೆಯೇ ಕೃಷ್ಣನ ಪತ್ನಿ ತವರು ಮನೆಗೆ ಹೋದಾಗ ಮನೆಯ ಬೀಗದ ಕೀ ಅನ್ನು ಕೃಷ್ಣನ ಬಳಿ ನೀಡಿದ್ದರು.
ಕೃಷ್ಣ ತನ್ನ ಮನೆಯ ಬೀಗ ಕೀಯನ್ನು ಬೈಕ್ನ ಜೇಬಿನಲ್ಲಿರಿಸಿದ್ದನ್ನು ಗಮನಿಸಿದ ಸ್ನೇಹಿತರು, ಆತನಿಗೆ ಅರಿವಿಲ್ಲದಂತೆ ಬೀಗದ ಕೀಯನ್ನು ಅಪಹರಿಸಿದ್ದರು. ಬಳಿಕ ಬೀಗ ಕೀಗಾಗಿ ಕೃಷ್ಣ ಹುಡಿಕಾಡಿದರೂ ಸಿಗದ ಕಾರಣ ತವರಿಗೆ ಹೋಗಿದ್ದ ಪತ್ನಿಯ ಬಳಿ ಇದ್ದ ಮತ್ತೂಂದು ಕೀಯನ್ನು ಪಡೆದು ಕೊಂಡು ಬರುವುದಾಗಿ ಸ್ನೇಹಿತರಿಗೆ ತಿಳಿಸಿ ಅಲ್ಲಿಂದ ತೆರಳಿದ್ದರು.
ಇದನ್ನೂ ಓದಿ:ರವಿವಾರ ಪಂಜಾಬ್ ನೂತನ ಸಚಿವ ಸಂಪುಟ ರಚನೆ: ಕ್ಯಾಪ್ಟನ್ ಆತ್ಮೀಯರಿಗೆ ಕೊಕ್ ಸಾಧ್ಯತೆ
ಅದನ್ನೇ ಸದಾವಕಾಶವಾಗಿ ಮಾಡಿಕೊಂಡ ವಂಚಕ ಸ್ನೇಹಿತರು ಅಂದೇ ತಮ್ಮ ಬಳಿ ಇದ್ದ ಬೀಗದ ಕೀಯಿಂದ ಮನೆಗೆ ನುಗ್ಗಿ ಚಿನ್ನ ಅಪಹರಿಸಿದ್ದರು. ಬಳಿಕ ತನ್ನ ಮನೆಯಲ್ಲಿ ಚಿನ್ನ ಕಳುವಾಗಿರುವುದಾಗಿ ಕೃಷ್ಣ ಸರಗೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪಿಎಸ್ಐ ಶ್ರವಣ ದಾಸರೆಡ್ಡಿ ಮಾಹಿತಿ ಕಲೆಹಾಕಿ ಸ್ನೇಹಿತ ಅಶೋಕ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಹೊರ ಬಿದ್ದಿದ್ದು, ಕದ್ದಿದ್ದ ಚಿನ್ನ ವಶಕ್ಕೆ ಪಡೆದು ಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.