ಮರಗಳ ಸಂಖ್ಯೆ ಕಡಿಮೆಯಿಂದಾಗಿ ಅಂತರ್ಜಲ ಕುಸಿತ: ಸದ್ಗುರು ವಿಷಾದ
Team Udayavani, Sep 6, 2019, 5:11 AM IST
ಮೈಸೂರು: ದೇಶದೆಲ್ಲೆಡೆ ಮರಗಳ ಸಂಖ್ಯೆ ಕಡಿಮೆಯಾಗಿದ್ದು, ಭೂಮಿಗೆ ಬಿದ್ದ ಮಳೆ ನೀರು ಹರಿದು ಹೋಗುತ್ತಿರುವ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದೆ ಎಂದು ಸದ್ಗುರು ಹೇಳಿದರು.
ಗುರುವಾರ ನಗರದ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆದ ‘ಕಾವೇರಿ ಕೂಗು’ ಅಭಿಯಾನದಲ್ಲಿ ಮಾತನಾಡಿದ ಅವರು, ಮರಗಳಿಲ್ಲದಿದ್ದರೆ ಮಳೆಯಿಲ್ಲ. ರೈತರಿಗೆ ಆದಾಯವಾಗುವ ರೀತಿಯಲ್ಲಿ ಯೋಜನೆ ರೂಪಿಸಿದರೆ ಮಾತ್ರ ದೇಶದ ಹಸಿರು ಹೊದಿಕೆ ಹೆಚ್ಚಿಸಬಹುದು.
ರೈತರು ತಮ್ಮಿಷ್ಟದ ಮರಗಳನ್ನು ಬೆಳೆದು, ತಮ್ಮಿಷ್ಟದಂತೆ ಕಡಿದು, ಮಾರುಕಟ್ಟೆಯಲ್ಲಿ ಮಾರುವಂತಾಗಬೇಕು. ರೈತನಿಗೆ ಮರ ಬೆಳೆಸುವುದು ಆದಾಯದ ಮೂಲ ಎಂದು ತಿಳಿಸುವ ತನಕ ಅರಣ್ಯ ಕೃಷಿ ಅಸಾಧ್ಯ. ಇದಕ್ಕಾಗಿ ಸರ್ಕಾರ ಸದ್ಯದ ಕಾನೂನನ್ನು ತಿದ್ದುಪಡಿ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಈಗಾಗಲೆ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ. ಕೆಲವೇ ದಿನಗಳಲ್ಲಿ ಹೊಸ ಕಾನೂನು ಜಾರಿಗೆ ಬರಲಿದೆ ಎಂದರು.
ಬಳಿಕ ಮಾತನಾಡಿದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ದೇಶದ ಎಲ್ಲ ನದಿಗಳ ಪಾತ್ರದಲ್ಲಿ ನೀರಿನ ಸಂರಕ್ಷಣೆ ಮಾಡದ ಕಾರಣ ನದಿಗಳು ನಶಿಸುತ್ತಿವೆ. ಇದು ಮುಂದುವರಿದರೆ ಮುಂದಿನ ಪೀಳಿಗೆಗೆ ಜೀವನದಿಗಳನ್ನು ವಿಡಿಯೋಗಳಲ್ಲಿ ತೋರಿಸಬೇಕಾಗಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ನದಿಯ ಪಾತ್ರಗಳನ್ನು ರಕ್ಷಣೆ ಮಾಡಬೇಕು. ನೀರಿನ ಬಳಕೆಯ ಪ್ರಮಾಣ ಶೇ. 10ರಷ್ಟು ಹೆಚ್ಚಾಗಿದೆ. ನೀರಿನ ಮಿತ ಬಳಕೆಗೆ ಜನರು ಎಚ್ಚರಿಕೆ ವಹಿಸಬೇಕು. ಮರಗಳನ್ನು ನೆಡಬೇಕು. ಇದರಿಂದಾಗಿ ಮಣ್ಣಿನ ಸವಕಳಿಯನ್ನು ತಡೆಯಬಹುದಾಗಿದೆ. ಇದೇ ರೀತಿ ನೇತ್ರಾವತಿ ನದಿ ಉಳಿವಿಗಾಗಿ ಕರೆ ಕೊಡಬೇಕಿದೆ ಎಂದರು.
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹಾಗೂ ಸಂಸದ ಪ್ರತಾಪ್ ಸಿಂಹ ಮಾತನಾಡಿ, ರೈತರು ಅರಣ್ಯ ಕೃಷಿ ಮಾಡುವುದರಿಂದ ಆದಾಯದೊಂದಿಗೆ ನದಿಗಳನ್ನು ರಕ್ಷಿಸ ಬಹುದಾಗಿದೆ. ಹಾಗಾಗಿ, ನದಿಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಇದೇ ಸಂದರ್ಭದಲ್ಲಿ ‘ಉದಯವಾಣಿ’ ಜತೆ ಮಾತನಾಡಿದ ಸದ್ಗುರು, ಸಸಿಗಳನ್ನು ಬೆಳೆಸಿ ರೈತರಿಗೆ ಆರ್ಥಿಕವಾಗಿ ಲಾಭ ಮಾಡಿಕೊಳ್ಳುವುದರ ಜತೆಗೆ ಪರಿಸರ ಮತ್ತು ನದಿಗಳ ಸಂರಕ್ಷಣೆ ಅಭಿಯಾನದ ಉದ್ದೇಶವಾಗಿದೆ. ರೈತರು ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಸೆ.4ರಂದು 3.5 ಲಕ್ಷ ಮತ್ತು ಸೆ.5ರಂದು 2.5 ಲಕ್ಷ ಸಸಿಗಳು ದೇಣಿಗೆ ಸಿಕ್ಕಿವೆ. ಈ ಪ್ರಗತಿಯನ್ನು ಗಮನಿಸಿದರೆ ಅಭಿವೃದ್ಧಿ ಖಂಡಿತ. ಇದು ಒಂದು ದಿನದ ಕೆಲಸವಲ್ಲ, 12 ವರ್ಷಗಳ ಕಾಲ ನಡೆಯಲಿರುವ ಸುದೀರ್ಘ ಕೆಲಸವಾಗಿದೆ ಎಂದರು.
32 ನರ್ಸರಿಗಳು ನಮ್ಮ ಬಳಿ ಈಗಾಗಲೇ ಇವೆ. ಇನ್ನುಳಿದಂತೆ 5ರಿಂದ 10 ಸಾವಿರ ರೈತರನ್ನು ನರ್ಸರಿ ಅಭಿವೃದ್ಧಿಗೆ ಬಳಸಲು ತೀರ್ಮಾನಿಸಿದ್ದೇವೆ. ರೈತ ತನ್ನ ನರ್ಸರಿಯಲ್ಲಿ ಬೆಳೆಸಿದ ಸಸಿಗಳನ್ನು ಕೊಳ್ಳದಿದ್ದರೆ ಅವರಿಗೆ ನಷ್ಟವಾಗುವ ಸಾಧ್ಯತೆಯಿದ್ದು, ಮೊದಲಿಗೆ ಹಣ ಸಂಗ್ರಹದ ಕೆಲಸ ಮಾಡುತ್ತಿದ್ದೇವೆ. ನಮ್ಮ ಬಳಿ ಸಂಗ್ರಹವಾಗಿರುವಷ್ಟು ಹಣಕ್ಕೆ ಅನುಗುಣವಾಗಿ ನರ್ಸರಿಗಳ ಅಭಿವೃದ್ಧಿ ಕೆಲಸ ಮಾಡಲಿದ್ದೇವೆ ಎಂದು ಸದ್ಗುರು ಹೇಳಿದರು.
ಸಣ್ಣ ರೈತರಿಗೆ ಟಿಂಬರ್ ಬೋರ್ಡ್ನಿಂದ ಸಾಕಷ್ಟು ಅನುಕೂಲವಾಗಲಿದೆ. ದೊಡ್ಡ ರೈತರು ಬೆಳೆದ ಮರಗಳನ್ನು ಬೃಹತ್ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಶಕ್ತಿ ಇರುತ್ತದೆ. ಸಣ್ಣ ರೈತರಿಗೆ ಇದು ಕಷ್ಟ. ಈ ಕಾರಣದಿಂದ ಟಿಂಬರ್ ಬೋರ್ಡ್ ನಿಂದ ಮಾರಾಟ ಮಾಡಲು ಅವಕಾಶ ಸಿಗಲಿದೆ. ಟಿಂಬರ್ ಬೋರ್ಡ್, ಅರಣ್ಯ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮಾರಾಟ, ಸಾಗಾಟ, ಬೆಲೆ ನಿಯಂತ್ರಣ ಸೇರಿದಂತೆ ರೈತಪರ ಕೆಲಸವನ್ನು ಮಾಡಲಿದೆ ಎಂದು ವಿವರಿಸಿದರು.
-ಲೋಕೇಶ್ ರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…