ಹೆಲ್ಮೆಟ್ನಂತೆ ಸುರಕ್ಷತೆಗಾಗಿ ಹಿಜಾಬ್ ಧಾರಣೆ : ಜಮೀರ್ ಅಹ್ಮದ್
ಹಿಂದೂ-ಮುಸ್ಲಿಂ ಅಂತ ಯಾಕೆ ಬೇರೆ ಮಾಡುತ್ತೀರಿ ?
Team Udayavani, Mar 20, 2022, 7:17 PM IST
ಮೈಸೂರು : ಹಿಜಾಬನ್ನು 1400 ವರ್ಷಗಳಿಂದ ಧರಿಸುತ್ತಿದ್ದಾರೆ, ಹೆಲ್ಮೆಟ್ ಧರಿಸಿದಂತೆ ತಮ್ಮ ಸುರಕ್ಷತೆಗಾಗಿ ಹಿಜಾಬ್ ಧಾರಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಭಾನುವಾರ ಹೇಳಿಕೆ ನೀಡಿದ್ದಾರೆ.
ಹಿಜಾಬ್ ವಿವಾದದ ಬಳಿಕ ಮರು ಪರೀಕ್ಷೆಗೆ ಸರ್ಕಾರ ನಿರಾಕರಿಸಿದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಇಂತಹ ವಿಚಾರಗಳಿಂದಲೇ ಅಧಿಕಾರಕ್ಕೆ ಬರಲು ಸಾಧ್ಯ.ಸರ್ಕಾರ ಮನಸ್ಸು ಮಾಡಿದರೆ ಮರು ಪರೀಕ್ಷೆ ಮಾಡಬಹುದು. ದಯಮಾಡಿ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಸೋಮವಾರ ಈ ಬಗ್ಗೆ ಸಿಎಂ ಭೇಟಿಯಾಗಿ ಚರ್ಚೆ ಮಾಡುತ್ತೇವೆ ಎಂದರು.
ರಾಜ್ಯ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ , ಬಿಜೆಪಿ ಭಾವನೆಗಳಲ್ಲಿ ರಾಜಕೀಯ ಮಾಡುವುದು, ನಾನು ಈ ಬಗ್ಗೆ ಹೆಚ್ಚು ಮಾತನಾಡಲ್ಲ. ವಿಧಾನಸಭೆಯಲ್ಲಿ ಚರ್ಚೆಗೆ ಬಂದಾಗ ಮಾತನಾಡುತ್ತೇನೆ ಎಂದರು.
ಸಾಫ್ಟ್ ಹಿಂದುತ್ವಕ್ಕೆ ಡಿ.ಕೆ. ಶಿವಕುಮಾರ್ ಆಂತರಿಕ ಸೂಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದು, ಮುಸ್ಲಿಂ, ಸಿಖ್ ಎಲ್ಲರೂ ಒಂದಾಗಿರೋದು ಅಂದರೆ ಅದು ಭಾರತದಲ್ಲಿ. ಹಿಂದೂ-ಮುಸ್ಲಿಂ ಅಂತ ಯಾಕೆ ಬೇರೆ ಮಾಡುತ್ತೀರಿ ಎಂದು ಪರೋಕ್ಷ ಅಸಮಧಾನ ಹೊರ ಹಾಕಿದರು.
ಹಿಜಾಬ್ ವಿಚಾರದಲ್ಲಿ ನನ್ನ ಹೇಳಿಕೆ ತಿರುಚಿದ್ದಾರೆ ಎಂಬ ಹೆಚ್ ಡಿಕೆ ಹೇಳಿಕೆ ಹಿನ್ನೆಲೆ, ಕುಮಾರಸ್ವಾಮಿ ಅಧಿಕಾರಕ್ಕಾಗಿ ಏನ್ ಬೇಕಾದರೂ ಮಾಡುತ್ತಾನೆ. ಹಿಜಾಬ್ ಗಿಜಾಬ್ ಯಾವುದೂ ಬೇಕಿಲ್ಲ ಅಂದವನು ಕುಮಾರಸ್ವಾಮಿ. ಒಂದೂವರೆ ತಿಂಗಳ ಬಳಿಕ ಮುಸ್ಲಿಂರ ಮೇಲೆ ಇದ್ದಕ್ಕಿದ್ದಂತೆ ಪ್ರೀತಿ ಯಾಕೆ. ಕುಮಾರಸ್ವಾಮಿಗೆ ಯಾವ ಸೆಕ್ಯುಲರ್ ಇಲ್ಲ.ಕುಮಾರಸ್ವಾಮಿಗೆ ಅಧಿಕಾರನೇ ಮುಖ್ಯ. ದೇವೆಗೌಡರು ಹಾಗಲ್ಲ, ಅವರ ತತ್ವ ಸಿದ್ದಾಂತನೇ ಬೇರೆ ಎಂದು ವಾಗ್ದಾಳಿ ನಡೆಸಿದರು.
ಚಾಮರಾಜಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದಾರಾಮಯ್ಯಗೆ ಕ್ಷೇತ್ರ ತ್ಯಾಗ ಮಾಡುತ್ತಿಲ್ಲ, ರಾಜ್ಯದ ಒಳಿತಿಗಾಗಿ . ಇಡೀ ರಾಜ್ಯದಲ್ಲಿ ಎಲ್ಲಿಗೆ ಹೋದರೂ ಸಿದ್ದರಾಮಯ್ಯ ಕೊಟ್ಟ ಕಾರ್ಯಕ್ರಮ ನೆನೆಯುತ್ತಾರೆ.ಸಿದ್ದರಾಮಯ್ಯನವರಿಂದ ಮಾತ್ರ ರಾಜ್ಯಕ್ಕೆ ಒಳಿತು. ಹೀಗಾಗಿ ಚಾಮರಾಜಪೇಟೆಗೆ ಬಂದರೆ ಹೆಚ್ಚು ಲೀಡ್ನಲ್ಲಿ ಗೆಲ್ಲಿಸಿಕೊಂಡು ಬರುತ್ತೇವೆ.ಮುಂದಿನ ಸಿಎಂ ಕುರಿತು ನಮ್ಮ ಅಭಿಪ್ರಾಯ ಹೇಳಿದರೂ ಹೈಕಮಾಂಡ್ ತೀರ್ಮಾನ ಅಂತಿಮ ಎಂದರು.
ಏಕ್ ದಿಲ್ ದೋ ಜಾನ್ ಇದ್ದಂತೆ ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಸ್ನೇಹ. ನಮ್ಮ ಇಹಿಬ್ರಾಹಿಂ ಸಾಹೆಬ್ರು ಪಕ್ಷ ಬಿಡಲ್ಲ. ಅವರ ಜೊತೆ ನಮಗೂ ಅಸಮಧಾನ ಇದೆ. ಇಬ್ರಾಹಿಂ ಸೀನಿಯರ್, ಪವರ್ ಫುಲ್ ಲೀಡರ್. ನಾನು ಅವರನ್ನ ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಅವರು ಪಕ್ಷ ಬಿಡಲ್ಲ ಅಂತ ನಮಗೂ ನಿರೀಕ್ಷೆ ಇದೆ. ಸಿದ್ದರಾಮಯ್ಯ,ಇಬ್ರಾಹಿಂ ಸ್ನೇಹ ತುಂಬಾ ಚೆನ್ನಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ