ಐತಿಹಾಸಿಕ ಚೆನ್ನಕೇಶವ ದೇಗುಲ, ಕೋಟೆ ಕಂದಕಗಳ ಪರಿಶೀಲನೆ
Team Udayavani, Apr 21, 2021, 3:16 PM IST
ಪಿರಿಯಾಪಟ್ಟಣ: ಪಟ್ಟಣದ ಒಳಕೋಟೆ ಮತ್ತುರಾಜ್ಯ ಸಂರಕ್ಷಿತ ಪ್ರದೇಶದ ಚೆನ್ನಕೇಶವ ದೇವಾಲಯಕ್ಕೆ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕಿಡಾ.ಮಂಜುಳಾ ಹಾಗೂ ತಂಡ ಮಂಗಳವಾರಭೇಟಿ ನೀಡಿ ಪರಿಶೀಲನೆ ನಡೆಸಿತು.ಪಟ್ಟಣದ ಐತಿಹಾಸಿಕ ತಾಣಗಳಾದ ಕೋಟೆಕಂದಕ ಮತ್ತು ಬತೇರಿಗಳನ್ನು ನಾಶಪಡಿಸಲಾಗುತ್ತಿದೆಎಂಬ ಸಾರ್ವಜನಿಕರ ಆರೋಪದ ಮೇರೆಗೆಪಟ್ಟಣದ ಒಳಕೋಟೆ, ಚೆನ್ನಕೇಶವ ದೇವಾಲಯ,ಮತ್ತು ಕೋಟೆ ಬತೇರಿಗಳು ಕಂದಕಗಳನ್ನುನಡೆದುಕೊಂಡು ತಮ್ಮ ತಂಡದ ಸದಸ್ಯರೊಂದಿಗೆವೀಕ್ಷಣೆ ಮಾಡಿ ದಾಖಲೆಗಳನ್ನು ಪರಿಶೀಲಿಸಿದರು.
ಪಿರಿಯಾಪಟ್ಟಣ ತಾಲೂಕಿನಲ್ಲಿ ರಾಜ್ಯ ಸಂರಕ್ಷಿತಸ್ಮಾರಕವಾಗಿ ಪಟ್ಟಣದ ಚೆನ್ನಕೇಶವದೇವಾಲಯಘೋಷಣೆಯಾಗಿದ್ದು ನಮ್ಮ ಇಲಾಖೆಯ ವ್ಯಾಪ್ತಿಗೆಬರುವುದರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗಿದೆ.ಪಟ್ಟಣದ ಒಳಕೋಟೆಯಲ್ಲಿ ಎರಡು ಕೋಟೆದ್ವಾರಗಳಿದ್ದು ಕಲ್ಲಿನ ಮತ್ತು ಮಣ್ಣಿನಿಂದ ನಿರ್ಮಿಸಿದ ಗೋಡೆಗಳು ಪಳೆಯುಳಿಕೆಗಳು ಕಂಡುಬಂದಿವೆ.
ಆರೋಪ ಮಾಡಿರುವಂತೆ ಸ್ಥಳದಲ್ಲಿ ಕೋಟೆಮತ್ತಿತರ ಪಾರಪಂಪರಿಕ ಕಟ್ಟಡ ಇರುವ ಬಗ್ಗೆಎಂಎಆರ್ ಸರ್ವೆ ಮೂಲಕ ಮತ್ತು ಕಂದಾಯಇಲಾಖೆ ಹಾಗೂ ಪುರಸಭಾ ದಾಖಲೆಗಳನ್ನುಪರಿಶೀಲಿಸಿ ಈ ಬಗ್ಗೆ ಸಂಪೂರ್ಣ ವರದಿಯನ್ನುಆಯುಕ್ತರಿಗೆ ಸಲ್ಲಿಸಲಾಗುವುದು ಎಂದುಸಹಾಯಕ ನಿರ್ದೇಶಕಿ ಮಂಜುಳಾ ತಿಳಿಸಿದರು.
ಒಳಕೋಟೆ ಭಾಗದಲ್ಲಿ ಇರುವ ಕೋಟೆಗಳಹೆಬ್ಟಾಗಿಲು ಸೇರಿದಂತೆ ಮತ್ತಿತರರ ಅಳಿವಿನಅಂಚಿನಲ್ಲಿ ಇರುವ ಸ್ಮಾರಕಗಳ ರಕ್ಷಣೆ ಮಾಡುವಬಗ್ಗೆಯೂ ಇಲಾಖೆಯ ಅಧಿಕಾರಿಗಳೊಂದಿಗೆಚರ್ಚಿಸಿ ಕ್ರಮವಹಿಸಲಾಗುವುದು. ದೇವಾಲಯದ ಸುತ್ತಲು ಸ್ವತ್ಛತೆ ಕಾಪಾಡಬೇಕು ಮತ್ತುಸುತ್ತಮುತ್ತಲಿನ ಜನರನ್ನು ಒಕ್ಕಲೆಬ್ಬಿಸುವ ಅಥವಾತೆರುವುಗೊಳಿಸುವ ಯಾವುದೇ ಕಾರ್ಯಮಾಡಲಾಗುವುದಿಲ್ಲ.
ಈ ಬಗ್ಗೆ ಪುರಸಭೆಅಧಿಕಾರಿಗಳೂ ಸೂಕ್ತ ಕ್ರಮಕೈಗೊಂಡು ಇಲಾಖೆಗೆಸಹಕಾರ ನೀಡಬೇಕು ಎಂದು ತಿಳಿಸಿದರು.ಪುರಸಭೆ ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ ಮಾತನಾಡಿ, ಇಲಾಖೆ ಜಾಗದ ಬಗ್ಗೆ ಇರುವ ದಾಖಲೆಗಳನ್ನು ಒದಗಿಸುವಂತೆ ಲಿಖೀತ ಮನವಿ ಮಾಡಿದಲ್ಲಿಈ ಬಗ್ಗೆ ಕ್ರಮವಹಿಸಲಾಗುವುದು ಎಂದು.ಈ ಸಂದರ್ಭದಲ್ಲಿ ಆಕ್ಯಾìಲಿಜಿಸ್ಟ್ ಗೌಡ,ಕ್ಯೂರಿಯೇಟರ್ ಸುನಿಲ್ ಕುಮಾರ್, ಆರ್ಐಪಾಂಡುರಂಗ, ವಿ.ಎ.ಸ್ವಾತಿ ಜೋಸೆಫ್, ಪುರಸಭಾಸದಸ್ಯರಾದ ಪಿ.ರವಿ, ಅರ್ಚಕ ಶ್ರೀವಿಷ್ಣು,ಮುಖಂಡರಾದ ಡಿ.ದೇವಣ್ಣ, ಮೀಸೆರವಿ, ಎಚ್.ಡಿ.ರಮೇಶ್, ಕಿಶೋರ್, ಬಿಜೆಪಿ ಮಾಜಿ ತಾ ಅಧ್ಯಕ್ಷಪಿ.ಜೆ.ರವಿ, ಪಿ.ಪಿ.ಮಹದೇವ್, ಆರ್.ಡಿ.ಮಹದೇವ್, ಕೇಬಲ್ ಕುಮಾರ್ ಇತರರಿದ್ದರು.
ಕ್ರಿಮಿನಲ್ ಪ್ರಕರಣ ದಾಖಲಿಸಿ: ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಎದುರುಗಿನ ರಸ್ತೆಯಲ್ಲಿ ಇರುವಸರ್ವೆ ನಂಬರ್ 322/1 ರ ಜಮೀನು ಸೇರಿದಂತೆಸುತ್ತಮುತ್ತಲ ಜಮೀನಿನಲ್ಲಿ ಇರುವ ಕಂದಕಮತ್ತು ಕೋಟೆಯನ್ನು ಹಾಳು ಮಾಡಿದ್ದು,ಪುರಾತನ ವಸ್ತುಗಳನ್ನು ನಾಶಪಡಿಸಲಾಗಿದೆ.ಅಲ್ಲದೆ ಇವುಗಳನ್ನು ಮಣ್ಣಿನಿಂದ ಮುಚ್ಚಿಸಲಾಗಿದ್ದುಈ ಪುರಾತನ ಕಾಲದ ಕೋಟೆ ಮತ್ತಿತರರಪ್ರದೇಶಗಳನ್ನು ನಾಶಪಡಿಸಿರುವುದರ ವಿರುದ್ಧಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು.
ಈ ಬಗ್ಗೆಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದುದಸಂಸ ಮುಖಂಡ ಅಣ್ಣಯ್ಯ ಒತ್ತಾಯಿಸಿದರು.ಪಿರಿಯಾಪಟ್ಟಣ ಬಿ.ಎಂ.ರಸ್ತೆಯ ಬದಿಯಲ್ಲಿ ಇರುವಕಂದಕ ಸ್ಥಳಕ್ಕೆ ಪುರಾತತ್ವಇಲಾಖೆ ಸಹಾಯಕನಿರ್ದೇಶಕಿ ಡಾ.ಮಂಜುಳಭೇಟಿ ಮಾಡಿಪರಿಶೀಲಿಸಿದರು.
ಗ್ರಾಮಗಳಲ್ಲಿ ಲಸಿಕೆಪಡೆಯಲು ಮನವೊಲಿಸಿಕೊಳ್ಳೇ ಗಾಲ: ತಾಲೂ ಕಿನ ಮಧು ವ ನ ಹಳ್ಳಿ ಮತ್ತುಸತ್ತೇ ಗಾಲ ಪ್ರಾಥ ಮಿಕ ಆರೋಗ್ಯ ಕೇಂದ್ರ ಗ ಳಿಗೆ ತಹಶೀ ಲ್ದಾರ್ ಕೆ.ಕು ನಾಲ್ ಮಂಗಳವಾರ ಭೇಟಿ ನೀಡಿಕೋವಿಡ್ ಲಸಿಕೆ ವಿತರಣೆಯನ್ನು ಬಿರುಸುಗೊಳಿಸಲು ಸಿಬ್ಬಂದಿಗೆ ಸೂಚನೆ ನೀಡಿದರು. ಲಸಿ ಕೆ ಪಡೆಯಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆಎಂಬ ಮಾಹಿ ತಿ ಮೇರೆಗೆ ತಹ ಶೀ ಲ್ದಾರ್ ಎರಡೂಪ್ರಾಥ ಮಿಕ ಆರೋಗ್ಯ ಕೇಂದ್ರ ಗ ಳಿಗೆ ಭೇಟಿ ನೀಡಿಗ್ರಾಮ ಸ್ಥ ರಿಗೆ ಲಸಿ ಕೆಯ ಬಗ್ಗೆ ಅರಿವು ಮೂಡಿಸಿ ಪ್ರತಿಯೊ ಬ್ಬರಿಗೂ ವ್ಯಾಕ್ಸಿನ್ ಹಾಕಿಸಬೇಕು ಎಂದರು.
ಆಸ್ಪ ತ್ರೆ ಗ ಳಿಗೆ ಗ್ರಾಪಂ ಅಭಿ ವೃದ್ಧಿ ಅಧಿ ಕಾ ರಿ ಗ ಳನ್ನುಆಹ್ವಾ ನಿಸಿ, ಗ್ರಾಮ ಗ ಳಲ್ಲಿ ಸಂಚ ರಿಸಿ ಲಸಿಕೆ ಪಡೆ ದುಕೊ ಳ್ಳು ವಂತೆ ಜನ ರಲ್ಲಿ ಮನವೊಲಿಸಬೇಕು. ಗ್ರಾಮಸ ಭೆ ಗ ಳಲ್ಲೂ ಸಹ ಲಸಿಕೆಯನ್ನು ಗ್ರಾಮ ಸ್ಥ ರಿಗೆ ಪೂರೈಸುವ ನಿರ್ಣ ಯ ವನ್ನು ಕೈಗೊಂಡು ಆರೋ ಗ್ಯಾ ಧಿ ಕಾ ರಿಗ ಳಿಗೆ ಸಹ ಕಾ ರಿ ಯಾ ಗ ಬೇಕು ಎಂದರು.ತಾಲೂಕಿನಲ್ಲಿ ಇದುವರೆಗೆ ಸುಮಾರು 30 ಸಾವಿರÊ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ