ಹುಣಸೂರು : ಆಕಸ್ಮಿಕ ಬೆಂಕಿ ಬಿದ್ದು ಅಂಗಡಿ ಪದಾರ್ಥಗಳು ಭಸ್ಮ
Team Udayavani, Jul 23, 2022, 9:24 PM IST
ಹುಣಸೂರು : ಆಕಸ್ಮಿಕ ಬೆಂಕಿ ಬಿದ್ದು ಚಿಲ್ಲರೆ ಅಂಗಡಿಯ ಪದಾರ್ಥಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ತಾಲೂಕಿನ ಬೆಂಕಿಪುರದಲ್ಲಿ ನಡೆದಿದೆ.
ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದ ಚಿಕ್ಕನಾಯಕರ ಪತ್ನಿ ಲಕ್ಷ್ಮಮ್ಮರಿಗೆ ಸೇರಿದ ಚಿಲ್ಲರೆ ಅಂಗಡಿಗೆ ಶುಕ್ರವಾರ ರಾತ್ರಿ ಬೆಂಕಿ ಬಿದ್ದಿದ್ದು, ಅಂಗಡಿಯ ದಿನಸಿ ಪದಾರ್ಥ, ಸೆಲ್ಪ್, ಚಿಲ್ಲರೆ ಸಾಮಾನುಗಳು ಸುಟ್ಟು ಭಸ್ಮವಾಗಿದ್ದು, ಸುಮಾರು 1 ಲಕ್ಷರೂ ನಷ್ಟ ಸಂಭವಿಸಿದೆ.
ಜೀವನೋಪಾಯಕ್ಕಾಗಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದಲಕ್ಷ್ಮಮ್ಮನವರ ಕುಟುಂಬ ಅತಂತ್ರವಾಗಿದೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪುತ್ತೂರು: ಮಗುವಿಗೆ ಜನ್ಮ ನೀಡಿ ಒಂದು ದಿನದಲ್ಲೇ ಮೃತಪಟ್ಟ ತಾಯಿ