ಹುಣಸೂರು : ಮನೆಯಿಂದ ಹೊರಹೋದ ವ್ಯಕ್ತಿ ನಾಪತ್ತೆ… ಹುಡುಕಿಕೊಟ್ಟವರಿಗೆ ಬಹುಮಾನ
Team Udayavani, Sep 21, 2022, 12:00 PM IST
ಹುಣಸೂರು : ಮನೆಯಿಂದ ಹೊರಗೆ ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು. ಪತ್ತೆಮಾಡಿಕೊಡುವಂತೆ ಅವರ ಪುತ್ರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಹುಣಸೂರು ತಾಲೂಕಿನ ಕಟ್ಟೆಮಳವಾಡಿ ಗ್ರಾಮದ ಮೈಲಾರಿ(60) ನಾಪತ್ತೆಯಾದವರು.
ಇವರ ಪುತ್ರ ಶೇಖರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸೆ.8 ರಂದು ಬೆಳಗ್ಗೆ ಮನೆಯಿಂದ ಹೊರಗೆ ಹೋಗಿದ್ದ ಮೈಲಾರಿಯವರು ಈವರೆಗೂ ವಾಪಸ್ ಬಂದಿಲ್ಲ. ಸಂಬಂಧಿಕರ ಮನೆಗಳಿಗೂ ತೆರಳಿಲ್ಲ. ಹೀಗಾಗಿ ತಮ್ಮ ತಂದೆಯನ್ನು ಹುಡುಕಿಕೊಡುವಂತೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಚಹರೆ; ಕೋಲುಮುಖ.5.5 ಅಡಿ ಎತ್ತರ. ಸಾಧಾರಣ ಶರೀರ. ನೀಲಿ ಚುಕ್ಕೆಯುಳ್ಳ ಶಟ್೯ ಹಾಗೂ ನೀಲಿ ಚೌಕುಳಿಲುಂಗಿ. ಲಾಡಿ ನಿಕ್ಕರ್ ಧರಿಸಿದ್ದು. ಮಾಹಿತಿಯುಳ್ಳವರು. 9480805056 ಅಥವಾ 9743027310 ಗೆ ಮಾಹಿತಿ ನೀಡುವಂತೆ.
ಪುತ್ರ ಶೇಖರ್ ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುದೆಂದು ತಿಳಿಸಿದ್ದಾರೆ.
ಇದನ್ನೂ ಓದಿ : ವಿನೋದ್ ಪ್ರಭಾಕರ್ ಎದುರು ತೊಡೆ ತಟ್ಟಿದ ಶ್ರೀನಗರ ಕಿಟ್ಟಿ!