ಅನಧಿಕೃತ ಬಡಾವಣೆಯ ಕಟ್ಟಡಗಳಿಗೆ ಕಾಯಂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ


Team Udayavani, Sep 15, 2021, 10:12 PM IST

hunasuru news

ಹುಣಸೂರು:ಅನಧಿಕೃತ ಬಡಾವಣೆಯ ಕಟ್ಟಡಗಳಿಗೆ ಕಾಯಂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲವೆಂದು ಚೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಸುನಿಲ್‌ಕುಮಾರ್ ತಿಳಿಸಿದರು.

ನಗರದ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಸಾರ್ವಜನಿಕರಿಂದ ಬಂದ ಹಲವಾಲು ಆಲಿಸಿ ಮಾತನಾಡಿದ ಅವರು ನಗರದಲ್ಲಿ ಸಾಕಷ್ಟು ಅನಧಿಕೃತ ಬಡಾವಣೆಗಳಿಗೆ, ನಗರಸಭೆವತಿಯಿಂದ ಎನ್.ಓ.ಸಿ.ಪಡೆದಿದ್ದಲ್ಲಿ ಮಾತ್ರ ಸಂಪರ್ಕ ಕಲ್ಪಿಸಲು ಅವಕಾಶವಿದೆ ಇಲ್ಲದಿದ್ದಲ್ಲಿ ಬಡಾವಣೆ ಅಧಿಕೃತಗೊಳಿಸಿಕೊಂಡಲ್ಲಿ ಮಾತ್ರ ಸಂಪರ್ಕ ನೀಡಲು ಸಾಧ್ಯವೆಂದರು.

ಹುಣಸೂರಿನ ನರಸಿಂಹಸ್ವಾಮಿ ಬಡಾವಣಿಯ ಮನೆಗಳಿಗೆ ಕಾಯಂ ವಿದ್ಯುತ್ ಸಂಪರ್ಕ ನೀಡಬೇಕೆಂದು ಬಡಾವಣೆಯ ಸದಾನಂದರ ಕೋರಿಕೆಗೆ ಅನಧಿಕೃತ ಬಡಾವಣೆಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಿಲ್ಲ, ಬಡಾವಣೆ ನಿರ್ಮಾಣ ಮಾಡಿದವರ ಮೇಲೆ ಒತ್ತಡ ಹಾಕಿ ಸಕ್ರಮ ಗೊಳಿಸಿಕೊಳ್ಳಿ ಆನಂತರ ಅರ್ಜಿಸಲ್ಲಿಸಿದಲ್ಲಿ ಸಂಪರ್ಕ ನೀಡಬಹುದಾಗಿದೆ ಎಂದರು.

ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿ:

ಹುಣಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್ ಮಾತನಾಡಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಎಸ್.ಸಿ-ಎಸ್.ಟಿ.ಫಲಾನುಭವಿಗಳಿಗೆ ನೀರಾವರಿಗಾಗಿ ಪಂಪ್‌ಸೆಟ್ ಸೌಲಭ್ಯ ಕಲ್ಪಿಸಿದೆ. ಆದರೆ 2019ರಿಂದಲೂ ಕೊಳವೆಬಾವಿ ಕೊರೆಸಿ, ಪೈಪ್ ಅಳವಡಿಸಿದ್ದಾರೆ. ಆದರೆ ಈವರೆವಿಗೂ 42 ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲವೆಂಬ ದೂರಿಗೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನಿಗಮದಿಂದ ಅಂದಾಜುಪಟ್ಟಿ ಮಾತ್ರ ನೀಡಲಾಗುವುದು. ಉಳಿದ ಎಲ್ಲಾ ಕಾಮಗಾರಿಗಳನ್ನು ಅವರೇ ನಿರ್ವಹಿಸಲಿದ್ದು, ಪೂರ್ಣಗೊಂಡ ಮಾಹಿತಿ ನೀಡಿದಲ್ಲಿ ಪರಿಶೀಲಿಸಿ ವಿದ್ಯುತ್ ಸಂಪರ್ಕ ನೀಡಲಾಗುವುದೆಂದು ಇ.ಇ.ಸುನಿಲ್ ಸ್ಪಷ್ಟಪಡಿಸಿದರು.

ಲೈನ್ ಬಲಾಯಿಸಲು ಸೂಚನೆ:

ಸರಕಾರದ ಇತ್ತೀಚಿನ ಸೂಚನೆಯಂತೆ ಶಾಲಾ-ಕಾಲೇಜು ಆವರಣದಲ್ಲಿರುವ ಟಿ.ಸಿ ಮತ್ತು ಶಾಲಾ ಕಟ್ಟಡಗಳ ಮೇಲೆ ಹಾದು ಹೋಗಿರುವ ವಿದ್ಯುತ್ ಲೈನ್ ಮಾರ್ಗಗಳನ್ನು ತೆರವುಗೊಳಿಸಲು ಶಾಲಾ ಮುಖ್ಯಸ್ಥರು ಅಥವಾ ಬಿಇಓ ಮೂಲಕ ಲಿಖಿತವಾಗಿ ಮಾಹಿತಿ ನೀಡಿದ್ದಲ್ಲಿ ಆದ್ಯತೆ ಮೇರೆಗೆ ತೆರವು ಗೊಳಿಸಲಾಗುವುದು. ಈ ಸಂಬಂಧ ಎಲ್ಲಾ ವಲಯಗಳ ಇಂಜಿನಿಯರ್‌ಗಳಿಗೆ ಶಾಲಾ-ಕಾಲೇಜುಗಳ ಮೇಲೆ ಹಾದು ಹೋಗಿರುವ ವಿದ್ಯುತ್ ಲೈನ್‌ಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಸೌರ ಗೃಹ ಯೋಜನೆಗೆ ಆದ್ಯತೆ:

ಚೆಸ್ಕಾಂವತಿಯಿಂದ ಸಬ್ಸಿಡಿ-ರಿಯಾಯತಿ ದರದಲ್ಲಿ ಮನೆಗಳ ಸೋಲಾರ್ ಮೇಲ್ಚಾವಣಿ ಅಳವಡಿಸುವ ಸೌರ ಗೃಹ ಯೋಜನೆ ಜಾರಿಗೆ ತಂದಿದ್ದು, ಮನೆಗಳವರು ತಮ್ಮ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಸಿಕೊಂಡು ಉಪಯೋಗಿಸಿ, ಉಳಿತಾಯವಾದ ವಿದ್ಯುತ್‌ನ್ನು ಚೆಸ್ಕಾಂಗೆ ಮಾರಾಟ ಮಾಡಬಹುದಾಗಿದೆ. ಇದರಿಂದ ನಿಮ್ಮ ಮನೆಗೆ ನೀವೇ ವಿದ್ಯುತ್ ಉತ್ಪಾದಿಸಿಕೊಳ್ಳಬಹುದು, ಮಾಸಿಕ ವಿದ್ಯುತ್ ಉಳಿತಾಯವಾಗಲಿದೆ. ಕಡಿಮೆ ಬಂಡವಾಳದ ವೆಚ್ಚದ ಮೇಲ್ಚಾವಣಿಯ ಸುರಕ್ಷತೆಗೂ ನೆರವಾಗಲಿದೆ.

ಇದಕ್ಕಾಗಿ ಆಸಕ್ತರು ಚೆಸ್ಕಾಂನ ಆನ್‌ಲೈನ್ ಅಥವಾ ಆಫ್ ಲೈನ್ ಮೂಲಕವೂ ಅರ್ಜಿಸಲ್ಲಿಸಬಹುದಾಗಿದೆ. ಆದ್ಯತೆ ಆಧಾರದ ಮೇಲೆ ಹಾಗೂ ತಾಂತ್ರಿಕ ಕಾರ್ಯದ ಸಾಧ್ಯತೆ ಅನುಸಾರ ಪರಿಗಣಿಸಲಾಗುವುದು. ಈ ಯೋಜನೆ ಚೆಸ್ಕಾಂನ ಗೃಹ ಬಳಕೆದಾರರು, ಗೃಹೋಪಯೋಗಿ ಅಪಾರ್ಟ್ಮೆಂಟ್‌ಗಳು ಹಾಗೂ ಗುಂಪುವಸತಿಗಳ ಗ್ರಾಹಕರಿಗೆ ಮಾತ್ರ ಅವಕಾಶವಿದ್ದು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ:ಸುರಕ್ಷಿತವಾಗಿ ಪಾಕಿಸ್ಥಾನ ತಲುಪಿದ ಅಫ್ಘಾನ್‌ ವನಿತಾ ಫುಟ್ಬಾಲಿಗರು

ನಿಲುವಾಗಿಲಿನ ಸುಭಾಷ್ ನಮ್ಮ ಮನೆಗೆ ಕಲ್ಪಿಸಿರುವ ವಿದ್ಯುತ್ ಲೈನ್ಅನ್ನು ಪಕ್ಕದ ಮನೆಯವರು ತಮ್ಮ ಮನೆ ಮೇಲಿಂದ ಹಾದು ಹೋಗಿದೆ ಎಂದು ಕಟ್ ಮಾಡುತ್ತಿರುವುದರಿಂದ ತೊಂದರೆಯಾಗಿದ್ದು, ಮನೆ ಬಳಿ ಕಂಬ ಅಳವಡಿಸಿ ಲೈನ್ ನೀಡಬೇಕೆಂಬ ಮನವಿಗೆ ನಿಗಮದಿಂದ ಪ್ರತ್ಯೇಕ ಕಂಬ-ಲೈನ್ ನೀಡಲು ಸಾಧ್ಯವಿಲ್ಲ, ಹಣ ಪಾವತಿಸಿದಲ್ಲಿ ಮಾತ್ರ ಸೌಲಭ್ಯ ಕಲ್ಪಿಸಲಾಗುವುದೆಂದರು.

ಹರವೆರಾಮೇನಹಳ್ಳಿಯ ಮೂಗನಾಯ್ಕರು ಪಕ್ಕದ ಜಮೀನಿನವರಿಗೆ ನಮ್ಮ ಭೂಮಿ ಮೂಲಕ ಲೈನ್ ಹೋಗಿದ್ದು, ತಂತಿಗಳು ಜೋತು ಬಿದ್ದಿದ್ದು, ಅಪಾಯ ಕಾದಿದೆ. ಅವರಿಗೆ ಬೇರೆಡೆಯಿಂದ ಸಂಪರ್ಕ ನೀಡುವಂತೆ ಮಾಡಿದ ಮನವಿಗೆ ಆರೀತಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೂ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಎಇಇ ಸಿದ್ದಪ್ಪರಿಗೆ ಇ.ಇ.ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಇಂಜಿನಿಯರ್ ಸೋಮಶೇಖರ್, ಜೆ.ಇ.ಗಳಾದ ಯಶಸ್ವಿನಿ, ವಿಜಯಕುಮಾರ್, ಮಲ್ಲಪ್ಪ ಸೇರಿದಂತೆ ಹಲವಾರು ಗ್ರಾಹಕರಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.