ಹುಣಸೂರು: ಉಡುವೆಪುರದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ


Team Udayavani, Oct 10, 2021, 1:56 PM IST

Untitled-1

ಹುಣಸೂರು : ಒಂದೆಡೆ ಕಾಲುಬಾಯಿ ಜ್ವರ,ಮತೊಂದೆಡೆ ಗಂಟು ರೋಗದಿಂದಾಗಿ ರಾಸುಗಳು ಹೈರಾಣಾಗಿದ್ದರೆ, ಹಾಲಿನ ಕಡಿಮೆ ಉತ್ಪಾದನೆಯ ಭೀತಿಯಲ್ಲಿ ಹೈನುಗಾರರದ್ದಾಗಿದೆ.

ನಾಗರಹೊಳೆ ಉದ್ಯಾನವನದಂಚಿನ ತಾಲೂಕಿನ ಹನಗೋಡು, ಗಾವಡಗೆರೆ, ಕಸಬಾ ಹೋಬಳಿಯ ಹಳ್ಳಿಗಳಲ್ಲಿ ಕಾಲು-ಬಾಯಿ ಜ್ವರ ಕಾಣಿಸಿಕೊಂಡಿದ್ದು, ಹನಗೋಡು ಭಾಗದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಇದರೊಟ್ಟಿಗೆ ನಿಧಾನವಾಗಿ ಗಂಟುರೋಗವೂ ಸೇರಿಕೊಂಡಿದೆ.

ಹನಗೋಡು ಹೋಬಳಿಯ ಕಡೇಮನುಗನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಉಡುವೆಪುರ ಒಂದೇ ಗ್ರಾಮದಲ್ಲಿ 50ಕ್ಕೂ ಹೆಚ್ಚು ರಾಸುಗಳಿಗೆ ರೋಗ ಕಾಣಿಸಿಕೊಂಡಿದೆ. ಅಲ್ಲದೇ ನೇರಳಕುಪ್ಪೆ, ಚಿಲ್ಕುಂದ, ನಾಗಮಂಗಲ, ರತ್ನಪುರಿ, ಹುಣಸೂರು ಟೌನ್‌ನ ಕಲ್ಕುಣಿಕೆ ಹಾಗೂ ಗಾವಡಗೆರೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದ್ದು, ನರಕಯಾತನೆ ಅನುಭವಿಸುತ್ತಿವೆ ಹೀಗಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಹೈನೋದ್ಯಕ್ಕೂ ಹೊಡೆತ-ಸಾಕಾಣಿಕೆದಾರಿಗೆ ಆರ್ಥಿಕ ಸಂಕಷ್ಟ:

ಈ ಕಾಯಿಲೆಯಿಂದ ಹೈನುಗಾರಿಕೆಗೆ ತೊಂದರೆ ಇಲ್ಲದಿದ್ದರೂ ರಾಸುಗಳಿಗೆ ಕಾಯಿಲೆ ಬಂದAದಿನಿAದ ಹಾಲು ಕರೆಯಲು ಆಗುತ್ತಿಲ್ಲ. ಕಾಯಿಲೆ ತಗುಲಿದ ರಾಸುಗಳ ಹಾಲನ್ನು ಯಾರು ಉಪಯೋಗಿಸುವುದೂ ಇಲ್ಲ. ಇದರಿಂದ ನಿತ್ಯ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುವ ನೂರಾರು ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ತೊಳಲಾಡುತ್ತಿವೆ.

ರೋಗ ಲಕ್ಷಣಗಳಿವು;

ಕಾಲುಬಾಯಿ ಜ್ವರ ರೋಗಕ್ಕೆ ತುತ್ತಾದ ರಾಸುಗಳ ಕಾಲಿನ ಗೊರಸಿನ ಹುಣ್ಣಾಗಿ ನಡೆಯಲಾಗದ ಸ್ಥಿತಿಗೆ ತಲುಪಲಿದೆ., ಬಾಯಿ ಹುಣ್ಣಾಗಿ ಜೊಲ್ಲು ಸುರಿಸುವುದಲ್ಲದೇ ಮೇವು ತಿನ್ನಲು, ನೀರನ್ನೂ ಸಹ ಕುಡಿಯಲಾಗದೆ ಪರಿತಪಿಸುತ್ತವೆ. ಹೀಗಾಗಿ ಜಾನುವಾರು ಕೊಟ್ಟಿಗೆಯಲ್ಲೇ ರೋಧಿಸುತ್ತಾ, ಮೂಕ ವೇದನೆ ಅನುಭವಿಸುತ್ತವೆ.

ಗಂಟುರೋಗವೂ ಕಾಣಸಿಕೊಂಡಿದೆ:

ರಾಸುಗಳಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಕಣ್ಣಲ್ಲಿ ನೀರು ಸೋರುತ್ತದೆ, ನಂತರ ಅಲ್ಲಲ್ಲಿ ಚರ್ಮದಲ್ಲಿ ಗಂಟು ಕಾಣಿಸಿಕೊಳ್ಳುತ್ತದೆ. ತುರಿಕೆ ಉಂಟಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುತ್ತಿದೆ. ಗರ್ಭಧರಿಸಿದ ಹಸುಗಳನ್ನು ಗರ್ಭಪಾತವಾಗುವ ಸಂಭವವಿದ್ದು, ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ಕೊಡಿಸದಿದ್ದಲ್ಲಿ ಗಂಟುಗಳು ರಂದ್ರಗಳಾಗಿ ಕೊಳೆತು ಸಾವನ್ನಪ್ಪಲಿವೆ. ಈ ರೋಗ ಕಾಣಿಸಿಕೊಂಡಲ್ಲಿ ಪ್ರತ್ಯೇಕವಾಗಿ ಕಟ್ಟಬೇಕು. ಸೂಕ್ತ ಚಿಕಿತ್ಸೆ ಕೊಡಿಸಬೇಕು. ಸೊಳ್ಳೆ-ನೊಣ ಮುತ್ತದಂತೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕೆನ್ನುತ್ತಾರೆ. ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿಗಳು.

ವರ್ಷಕ್ಕೆರಡು ಬಾರಿ ಲಸಿಕೆ ಕೊಡಬೇಕು: ಜಾನುವಾರುಗಳಿಗೆ ವರ್ಷಕ್ಕೆರಡು ಬಾರಿ ಪಶುವೈದ್ಯ ಇಲಾಖೆವತಿಯಿಂದ ಕಾಲು-ಬಾಯಿ ಜ್ವರಕ್ಕೆ ಮುನ್ನೆಚ್ಚರಿಕೆಯಾಗಿ ಉಚಿತ ಲಸಿಕೆ ಹಾಕಬೇಕು. ಆದರೆ ಸರಕಾರ ಕೋವಿಡ್ ಕಾರಣ ನೀಡಿ ಕಳೆದ ಒಂದೂವರೆ ವರ್ಷದಿಂದ ಹಸುಗಳಿಗೆ ಕಾಲುಬಾಯಿ ರೋಗದ ವ್ಯಾಕ್ಸಿನ್‌ಗೆ ಅನುದಾನ ನೀಡದ ಪರಿಣಾಮ ರೋಗ ಉಲ್ಬಣಿಸಲು ಕಾರಣವಾಗಿದೆ. ಇನ್ನು ರೋಗಕ್ಕೆ ತುತ್ತಾದ ಜಾನುವಾರಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲಾ, ಪಶು ಆಸ್ಪತ್ರೆಗಳಲ್ಲಿ ಔಷಧ ಸಾಕಷ್ಟು ಪ್ರಮಾಣದಲ್ಲಿ ಸಿಗದೇ ರೈತರು ಕಂಗಾಲಾಗಿದ್ದಾರೆ. ಈ ರೋಗದ ವೈರಾಣುಗಳು ಇತರೆ ರಾಸುಗಳಿಗೆ ಹರಡುತ್ತಿದ್ದು, ಗ್ರಾಮದಿಂದ ಗ್ರಾಮಗಳಿಗೆ ಹಬ್ಬುತ್ತಿದೆ. ಹನಗೋಡು ಹೋಬಳಿ ಅರಣ್ಯದಂಚಿನಲ್ಲೇ ಇದ್ದು, ಹಸುಗಳು ಮೇಯಲು ಅರಣ್ಯಕ್ಕೆ ತೆರಳುವ ವೇಳೆ ವನ್ಯಜೀವಿಗಳಿಗೂ ಹರಡುವ ಭೀತಿಇದೆ.

ತಾಲೂಕಿನಲ್ಲಿ ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ಉಲ್ಬಣಿಸುತ್ತಿದ್ದರೂ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಪಶುವೈದ್ಯಕೀಯ ಇಲಾಖೆ ಉಚಿತವಾಗಿ ವರ್ಷಕ್ಕೆರಡು ಬಾರಿ ಲಸಿಕೆ ನೀಡುತ್ತಿದ್ದರು. ಈ ವರ್ಷ ರೋಗ ಇರುವ ಬಗ್ಗೆ ತಿಳಿಸಿದರೆ ಮಾತ್ರ ಬಂದು ಚಿಕಿತ್ಸೆ ನೀಡುತ್ತಿದ್ದಾರಷ್ಟೆ. ಇನ್ನಾದರೂ ಶಾಸಕ ಎಚ್.ಪಿ.ಮಂಜುನಾಥರು ಸರಕಾರದ ಮೇಲೆ ಒತ್ತಡ ಹಾಕಿ ಅಗತ್ಯ ಲಸಿಕೆ ಹಾಗೂ ಔಷಧವನ್ನು ಕೊಡಿಸಿಕೊಡುವ ಮೂಲಕ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕೆAದು ಹೈನುಗಾರರ ಮನವಿ.

ಲಸಿಕೆಗೆ ಮನವಿ: ತಾಲೂಕಿನಲ್ಲಿ ಸುಮಾರು 71 ಸಾವಿರ ರಾಸುಗಳಿದ್ದು, ಮೂರು ವರ್ಷದ ನಂತರದ ಜಾನುವಾರುಗಳಿಗೆ 69 ಸಾವಿರ ರಾಸುಗಳಿಗೆ ಲಸಿಕೆಯನ್ನು ಹಾಕಬೇಕಿದ್ದು, ತಾಲೂಕಿನಲ್ಲಿ ದಾಸ್ತಾನಿದ್ದ 2 ಸಾವಿರ ಲಸಿಕೆಗಳನ್ನು ಹಾಕಲಾಗಿದೆ. ಹಾಲಿನ ಡೇರಿಗಳ ಮೂಲಕ ಲಸಿಕೆ ತರಿಸಿ ಹಳ್ಳಿಗಳಲ್ಲಿ ಕೊಡಿಸಲಾಗುತ್ತಿದೆ. ಕೊರೊನಾದಿಂದಾಗಿ ಲಸಿಕೆ ಸರಬರಾಜಾಗಿಲ್ಲ. ಈ ಮಾಹೆಯ ಅಂತ್ಯದಲ್ಲಿ ಲಸಿಕೆ ಸರಬರಾಜಾಗುವ ವಿಶ್ವಾಸವಿದೆ. ಕಾಯಿಲೆ ಹೆಚ್ಚಿರುವ ಕಡೆ ಸ್ಥಳೀಯ ಪಶು ವೈದ್ಯರು ಹಾಗೂ ಸಿಬ್ಬಂದಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ರೋಗ ಬಂದ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟುವುದರಿಂದ ರೋಗ ಹರಡುವುದನ್ನು ನಿಯಂತ್ರಿಸಬಹುದು.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.