ಹುಣಸೂರು: ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Team Udayavani, Sep 27, 2021, 11:45 AM IST
ಹುಣಸೂರು: ನಗರದಲ್ಲಿ ಮುಂಜಾನೆಯಿಂದಲೇ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮೈಕ್ ಮೂಲಕ ಪ್ರಚಾರ ನಡೆಸಿದರೂ ಅಲ್ಲಲ್ಲಿ ಬಾಗಿಲು ತೆರೆದು ವ್ಯಾಪಾರ ನಡೆಸಿದರು.
ಸಂಘಟನೆಗಳು ಅಂಗಡಿ- ಹೋಟೆಲ್ ಗಳಿಗೆ ಬಂದವೇಳೆ ಬಾಗಿಲು ಮುಚ್ಚುವುದು ಮತ್ತೆ ತೆರೆಯುವುದು ಮಾಡುತ್ತಲೇ ಇದ್ದರು.
ನಂತರ 10 ರ ವೇಳೆ ಗೆ ಮೆರವಣಿಗೆಯಲ್ಲಿ ತೆರಳಿದ ಜೆಎಲ್ ಬಿ ರಸ್ತೆ. ಬಜಾರ್ ರಸ್ತೆ. ಬಸ್ ನಿಲ್ದಾಣದ ರಸ್ತೆ. ಎಸ್ ಜೆ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಅಂಗಡಿ- ಮುಗ್ಗಟ್ಟು
ಬಾಗಿಲು ಹಾಕಿಸುವಲ್ಲಿ ಯಶಸ್ವಿಯಾದರೂ ಸಹ ಪ್ರತಿಭಟನಾ ಕಾರರು ತೆರಳುತ್ತಿದ್ದಂತೆ ಮತ್ತೆ ಬಾಗಿಲು ತೆರೆದು ವ್ಯಾಪಾರ ನಡೆಸಿದರು.
ಡಿವೈಎಸ್ ಪಿ ರವಿಪ್ರಸಾದ್. ಇನ್ಸ್ ಪೆಕ್ಟರ್ ಸಿ.ವಿ.ರವಿ.ಎಸ್.ಐ. ಲತೇಶ್ ಕುಮಾರ್ ನೇತೃತ್ವದಲ್ಲಿ ಎರಡು ಕೆಎಸ್ ಆರ್ ಪಿ ತುಕಡಿಗಳು ಹಾಗೂ ಸ್ಥಳೀಯ ಪೋಲೀಸರು ಬಂದೋಬಸ್ತ್ ಕೈಗೊಂಡಿದ್ದರು.
ಬೆದರಿಕೆ: ಗೋಕುಲ ರಸ್ತೆಯ ಪುಸ್ತಕದ ಅಂಗಡಿ ಬಳಿಗೆ ತೆರಳಿದ ಪ್ರತಿಭಟನಾ ಕಾರರು ಅಂಗಡಿ ಬಾಗಿಲು ಹಾಕುವಂತೆ ಅಂಗಡಿ ಮಾಲಿಕರಿಗೆ ದಂಕಿ ಹಾಕಿದರು .ಈ ವೇಳೆ ಅಂಗಡಿಯವರು ಈಗ ಶಾಲೆಗಳು ಆರಂಭವಾಗಿದೆ.
ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಇದ್ದು ಜೆರಾಕ್ಸ್ ಗಾಗಿ ಮಕ್ಕಳು ಬರುತ್ತಿದ್ದು. 10 ಗಂಟೆ ನಂತರ ಬಾಗಿಲು ಹಾಕುತ್ತೇವೆಂದರೂ ಬಾಗಿಲು ಹಾಕುವಂತೆ ಪಟ್ಟು ಹಿಡಿದರು.
ಈ ವೇಳೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಪೋಲೀಸರು ಬಂದು ಚದುರಿಸಿದರು.