ಹುಣಸೂರು: ಹುಲಿ ಪತ್ತೆಗೆ ಬಲರಾಮ, ಅಶ್ವತ್ಥಾಮನ ನೆರವು
Team Udayavani, Sep 28, 2022, 12:36 PM IST
ಹುಣಸೂರು: ತಾರಕ ಗ್ರಾಮದ ಬಳಿ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹುಲಿಯ ಪತ್ತೆಗಾಗಿ ನಾಗರಹೊಳೆ ಉದ್ಯಾನವನದ ಸಾಕಾನೆಗಳ ನೆರವು ಪಡೆಯಲಾಗಿದೆ.
ತಾರಕ ಗ್ರಾಮದ ಬಳಿ ಈಗಾಗಲೇ ಹುಲಿ, ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಮೂರು ಹಸುಗಳನ್ನು ಕೊಂದಿತ್ತು. ಸಾಕು ಪ್ರಾಣಿಗಳಿಗೆ ಕಂಟಕವಾಗಿರುವ ಹುಲಿ ಹಾಗೂ ಮರಿಗಳು ಕಾಣಿಸಿಕೊಂಡಿದಕ್ಕೆ ಜನರು ಭಯಭೀತರಾಗಿದ್ದು, ಹುಲಿಯ ಇರುವಿಕೆ ಬಗ್ಗೆ ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದರು.
ಸೆ. 27 ರಂದು ನಾಗರಹೊಳೆ ಉದ್ಯಾನವನದ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರದ ಪರಾಕ್ರಮಿ ಆನೆ ಅಭಿಮನ್ಯು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಅಂಬಾರಿ ಹೊರಲು ತೆರಳಿದ್ದರಿಂದ ಬಲಶಾಲಿ ಬಲರಾಮ ಹಾಗೂ ಅದರ ಜೊತೆಗೆ ಅಶ್ವತ್ಥಾಮ ಎಂಬ ಸಾಕಾನೆಗಳೊಂದಿಗೆ ಅಂತರ ಸಂತೆ ಆರ್.ಎಫ್.ಓ ಸಿದ್ದರಾಜು ನೇತೃತ್ವದಲ್ಲಿ ಡಿ.ಆರ್.ಎಫ್.ಓ.ಗಳಾದ ಅಂತೋಣಿ, ಮಂಜುನಾಥಾರಾಧ್ಯ, ಚಂದನ್, ಮಾವುತರು ಹಾಗೂ ಕವಾಡಿಗಳು, ಎಸ್.ಟಿ.ಪಿ.ಎಫ್. ಹಾಗೂ ಅರಣ್ಯ ಸಿಬ್ಬಂದಿಗಳು ಹುಲಿ ಮತ್ತು ಮರಿಗಳಿಗಾಗಿ ಹುಡುಕಾಟ ನಡೆಸಿದ್ದು, ರಾತ್ರಿವರೆಗೂ ಹುಲಿ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ