ದಟ್ಟ ಕಾನನದ ಮಧ್ಯದಲ್ಲೊಂದು ಮಳೆ ದೇವರು

ಆನೆಚೌಕೂರು ಅರಣ್ಯ ವ್ಯಾಪ್ತಿಯಲ್ಲಿರುವ ಮಾವುಕಲ್ಲೇಶ್ವರ ದೇಗುಲ • ಮಳೆಗಾಗಿ ದೇಗುಲದಲ್ಲಿ ತಂಗಿ ವಿಶೇಷ ಪೂಜೆ

Team Udayavani, Jun 14, 2019, 10:14 AM IST

mysuru-tdy-2..

ಪಿರಿಯಾಪಟ್ಟಣ ತಾಲೂಕಿನ ಆನೆಚೌಕೂರು ಅರಣ್ಯ ವ್ಯಾಪ್ತಿಯಲ್ಲಿರುವ ಮಾವುಕಲ್ಲೇಶ್ವರ ದೇಗುಲ.

ಮೈಸೂರು: ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನ ಮಾವುಕಲ್ಲೇಶ್ವರ ದೇಗಲವೊಂದು ದಟ್ಟ ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿದ್ದು, ಸುತ್ತಲಿನ ಹತ್ತೇಳು ಗ್ರಾಮಗಳ ರೈತರು ಮಳೆಗಾಗಿ ಈ ದೇಗುಲಕ್ಕೆ ಭೇಟಿ ಒಂದು ರಾತ್ರಿ ತಂಗುವುದು ವಾಡಿಕೆ.

ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಗಿಲವಾಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಸುತ್ತಲು ಏಳು ಬೆಟ್ಟಗಳನ್ನು ಹೊಂದಿರುವ ಮಾವುಕಲ್ಲೇಶ್ವರ ಬೆಟ್ಟದಲ್ಲಿ ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇಗುಲ ಇದೆ. ಇಲ್ಲಿ ವರ್ಷಕ್ಕೆ ಒಮ್ಮೆ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯಲಿದೆ. ದೇಗುಲದಲ್ಲಿರುವ ಲಿಂಗ ರೂಪದ ಮಾವುಕಲ್ಲೇಶ್ವರ, ತಾಲೂಕು ಸೇರಿದಂತೆ ಕೊಡಗಿನ ಗಡಿಭಾಗದ ಗ್ರಾಮಗಳ ರೈತರಿಗೆ ಮಳೆ ದೇವರಾಗಿದ್ದಾನೆ.

ವಿಶೇಷ ಪೂಜೆ: ಮುಂಗಾರು ಆರಂಭವಾಗಿ ನಂತರ ಮಳೆ ಬಾರದಿದ್ದರೆ ಪಿರಿಯಾಪಟ್ಟಣ, ಕೋಗಿಲವಾಡಿ, ಚೌತಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ರೈತರು ಹಾಗೂ ಕೊಡಗಿನ ಗಡಿ ಭಾಗದ ಗ್ರಾಮಗಳಾದ ಸಿದ್ದಾಪುರ, ತಿತಿಮತಿ, ಗೋಣಿಕೊಪ್ಪ, ಕುಶಾಲನಗರ ಸೇರಿದಂತೆ ನಾನಾ ಹಳ್ಳಿಗಳ ರೈತರು ಈ ದೇಗುಲಕ್ಕೆ ಭೇಟಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ ಒಂದು ರಾತ್ರಿ ಅಲ್ಲಿಯೇ ತಂಗುವ ಮೂಲಕ ತಳಿಗೆ ಮಾಡುತ್ತಾರೆ. ನಂತರ ಬೆಳಗ್ಗೆ ಎದ್ದು, ದೇವರಿಗೆ ಕೋಳಿ ಬಲಿ ನೀಡಿ ನಂತರ ಪರ್ವ ಮಾಡಿ ವಾಪಸ್ಸಾಗುವುದು ವಾಡಿಕೆ.

ಒಂದೊಂದು ಗ್ರಾಮದವರು ಮನೆಗೆ ಒಬ್ಬರಂತೆ ವಾರದಲ್ಲಿ ಒಮ್ಮೆ ಈ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಹರಕೆ ಅರ್ಪಿಸಿ ಮಳೆಗಾಗಿ ಪ್ರಾರ್ಥಿಸುವುದು ವಿಶೇಷ.

ಕಾಲ್ನಡಿಗೆ ಪಯಣ:ಮಾವುಕಲ್ಲೇಶ್ವರ ದೇಗುಲವು ದಟ್ಟ ಕಾಡು ಹಾಗೂ ಬೆಟ್ಟಗಳ ಸಾಲಿನಲ್ಲಿ ಇರುವುದರಿಂದ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ಜಾನುವಾರು ಮತ್ತು ಪ್ರಾಣಿಗಳು ನಡೆದಾಡಿರುವ ದಾರಿಯನ್ನೇ ಅನುಸರಿಸಿ ದೇಗುಲಕ್ಕೆ ತೆರಳಬೇಕು. ಬೆಟ್ಟವು ಕಾಡಂಚಿನಿಂದ ಸುಮಾರು 14 ಕಿ.ಮೀ. ದೂರವಿದ್ದು, ಕಾಡುಪ್ರಾಣಿಗಳ ದಾಳಿ ಮಾಡುವ ಸಂಭವ ಇರುವ ಕಾರಣ, ಜನರು ತಂಡೋಪ ತಂಡವಾಗಿ ಈ ದೇಗುಲಕ್ಕೆ ತೆರಳುತ್ತಾರೆ.

ತೇತ್ರಾಯುಗಕ್ಕೂ ನಂಟಿದೆ: ಈ ದೇಗಲದಲ್ಲಿ ರಾಮ ವನವಾಸದ ವೇಳೆಯಲ್ಲಿ ಈ ಬೆಟ್ಟದಲ್ಲಿರುವ ದೇಗುಲದಲ್ಲಿ ತಂಗಿದ್ದ ಎಂಬ ಪ್ರತೀತಿ ಇದ್ದು, ಸೀತೆ ಸ್ನಾನ ಮಾಡಲು ಬಳಕೆ ಮಾಡುತ್ತಿದ್ದ ಕೊಳವನ್ನು ಇಂದಿಗೂ ಸೀತಾ ಕೊಳ ಹಾಗೂ ಆಕೆ ವಿಹರಿಸುತ್ತಿದ್ದ ವನವನ್ನು ಸೀತಾವನ ಎಂದು ಕರೆಯಲಾಗುತ್ತಿದೆ. ವಿಶೇಷ ಎಂದರೆ ಈ ಸೀತಾವನ ವರ್ಷದ ಎಲ್ಲಾ ಕಾಲದಲ್ಲೂ ಹಸಿರಿನಿಂದ ಕೂಡಿರುತ್ತದೆ. ಜೊತೆಗೆ ಸಾವಿರಾರು ಬಗೆಯ ಔಷಧ ಗಿಡಗಳನ್ನು ಹೊಂದಿದೆ.

ಸೀತಾವನದ ವಿಶೇಷ:

ರಾಜ್ಯದ ಅರೆನಿತ್ಯ ಹರಿದ್ವರ್ಣವನಗಳಲ್ಲಿ ಒಂದಾದ ಸೀತಾವನ ಎಲೆ ಉದುರುವ ಕಾಡುಗಳ ನಡುವೆ 30 ಹೆಕ್ಟೇರ್‌ನಷ್ಟು ವ್ಯಾಪ್ತಿಯಲ್ಲಿ ಹಬ್ಬಿದೆ. ಇಲ್ಲಿ 75ಕ್ಕೂ ಹೆಚ್ಚು ನಾನಾ ಪ್ರಭೇದದ ಮರಗಳು ಕಾಣಸಿಗುವುದು ವಿಶೇಷ. ಜೊತೆಗೆ ರಾಜ್ಯದಲ್ಲಿ ಒಟ್ಟು 7 ಔಷಧ ಸಂರಕ್ಷಣಾ ಪ್ರದೇಶಗಳಿದ್ದು, ಇದರಲ್ಲಿ ಸೀತಾವನವು ಒಂದಾಗಿದೆ. ಇತ್ತೀಚೆಗೆ ಇಲ್ಲಿ ಔಷಧ ಗಿಡಗಳ ಗಣತಿ ಕಾರ್ಯ ನಡೆದಿದ್ದು, ಮೈಸೂರು ಜಿಲ್ಲೆಯಲ್ಲಿಯೆ ವಿಶೇಷ ಪ್ರದೇಶವೆಂದು ಗುರುತಿಸಲಾಗಿದೆ. ಮಳೆ ಬಾರದಿದ್ದರೆ ಮಾವುಕಲ್ಲೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬುದು ಇಂದಿಗೂ ಸುತ್ತಮುತ್ತಲ ಜನರ ನಂಬಿಕೆ.
ಚಾರಣಕ್ಕೆ ಹೇಳಿ ಮಾಡಿಸಿದ ತಾಣ:

ಪಿರಿಯಾಪಟ್ಟಣದಿಂದ 12 ಕಿ.ಮೀ. ದೂರದಲ್ಲಿರುವ ಕೋಗಿಲಾವಾಡಿ ಗ್ರಾಮಕ್ಕೆ ತೆರಳಿ, ಅಲ್ಲಿಂದ ಕಾಲ್ನಡಿಗೆಯಲ್ಲಿ 14 ಕಿ.ಮೀ.ನಷ್ಟು ದೂರ ದುರ್ಗಮ ಕಾಡಿನಲ್ಲಿ ಬೆಟ್ಟ, ಗುಡ್ಡಗಳನ್ನೇರಿ ಸಾಗಬೇಕಿದೆ. ಏಳು ಬೆಟ್ಟಗಳ ಸಾಲಿನಿಂದ ಕೂಡಿದ ಶ್ರೇಣಿಯಲ್ಲಿ ಮಾವು ಕಲ್ಲೇಶ್ವರ ಬೆಟ್ಟವಿದ್ದು, ಅತ್ಯಂತ ಎತ್ತರ ಪ್ರದೇಶವಾಗಿದೆ. ಕಣ್ಣು ಹಾಯಿಸಿದಷ್ಟು ಹಸಿರಿನಿಂದ ಕೂಡಿದ ಕಾಡು, ಪರ್ವತಗಳ ಶ್ರೇಣಿ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.
● ಸತೀಶ್‌ ದೇಪುರ

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.