ದಟ್ಟ ಕಾನನದ ಮಧ್ಯದಲ್ಲೊಂದು ಮಳೆ ದೇವರು
ಆನೆಚೌಕೂರು ಅರಣ್ಯ ವ್ಯಾಪ್ತಿಯಲ್ಲಿರುವ ಮಾವುಕಲ್ಲೇಶ್ವರ ದೇಗುಲ • ಮಳೆಗಾಗಿ ದೇಗುಲದಲ್ಲಿ ತಂಗಿ ವಿಶೇಷ ಪೂಜೆ
Team Udayavani, Jun 14, 2019, 10:14 AM IST
ಪಿರಿಯಾಪಟ್ಟಣ ತಾಲೂಕಿನ ಆನೆಚೌಕೂರು ಅರಣ್ಯ ವ್ಯಾಪ್ತಿಯಲ್ಲಿರುವ ಮಾವುಕಲ್ಲೇಶ್ವರ ದೇಗುಲ.
ಮೈಸೂರು: ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನ ಮಾವುಕಲ್ಲೇಶ್ವರ ದೇಗಲವೊಂದು ದಟ್ಟ ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿದ್ದು, ಸುತ್ತಲಿನ ಹತ್ತೇಳು ಗ್ರಾಮಗಳ ರೈತರು ಮಳೆಗಾಗಿ ಈ ದೇಗುಲಕ್ಕೆ ಭೇಟಿ ಒಂದು ರಾತ್ರಿ ತಂಗುವುದು ವಾಡಿಕೆ.
ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಗಿಲವಾಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಸುತ್ತಲು ಏಳು ಬೆಟ್ಟಗಳನ್ನು ಹೊಂದಿರುವ ಮಾವುಕಲ್ಲೇಶ್ವರ ಬೆಟ್ಟದಲ್ಲಿ ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇಗುಲ ಇದೆ. ಇಲ್ಲಿ ವರ್ಷಕ್ಕೆ ಒಮ್ಮೆ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯಲಿದೆ. ದೇಗುಲದಲ್ಲಿರುವ ಲಿಂಗ ರೂಪದ ಮಾವುಕಲ್ಲೇಶ್ವರ, ತಾಲೂಕು ಸೇರಿದಂತೆ ಕೊಡಗಿನ ಗಡಿಭಾಗದ ಗ್ರಾಮಗಳ ರೈತರಿಗೆ ಮಳೆ ದೇವರಾಗಿದ್ದಾನೆ.
ವಿಶೇಷ ಪೂಜೆ: ಮುಂಗಾರು ಆರಂಭವಾಗಿ ನಂತರ ಮಳೆ ಬಾರದಿದ್ದರೆ ಪಿರಿಯಾಪಟ್ಟಣ, ಕೋಗಿಲವಾಡಿ, ಚೌತಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ರೈತರು ಹಾಗೂ ಕೊಡಗಿನ ಗಡಿ ಭಾಗದ ಗ್ರಾಮಗಳಾದ ಸಿದ್ದಾಪುರ, ತಿತಿಮತಿ, ಗೋಣಿಕೊಪ್ಪ, ಕುಶಾಲನಗರ ಸೇರಿದಂತೆ ನಾನಾ ಹಳ್ಳಿಗಳ ರೈತರು ಈ ದೇಗುಲಕ್ಕೆ ಭೇಟಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ ಒಂದು ರಾತ್ರಿ ಅಲ್ಲಿಯೇ ತಂಗುವ ಮೂಲಕ ತಳಿಗೆ ಮಾಡುತ್ತಾರೆ. ನಂತರ ಬೆಳಗ್ಗೆ ಎದ್ದು, ದೇವರಿಗೆ ಕೋಳಿ ಬಲಿ ನೀಡಿ ನಂತರ ಪರ್ವ ಮಾಡಿ ವಾಪಸ್ಸಾಗುವುದು ವಾಡಿಕೆ.
ಒಂದೊಂದು ಗ್ರಾಮದವರು ಮನೆಗೆ ಒಬ್ಬರಂತೆ ವಾರದಲ್ಲಿ ಒಮ್ಮೆ ಈ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಹರಕೆ ಅರ್ಪಿಸಿ ಮಳೆಗಾಗಿ ಪ್ರಾರ್ಥಿಸುವುದು ವಿಶೇಷ.
ಕಾಲ್ನಡಿಗೆ ಪಯಣ:ಮಾವುಕಲ್ಲೇಶ್ವರ ದೇಗುಲವು ದಟ್ಟ ಕಾಡು ಹಾಗೂ ಬೆಟ್ಟಗಳ ಸಾಲಿನಲ್ಲಿ ಇರುವುದರಿಂದ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ಜಾನುವಾರು ಮತ್ತು ಪ್ರಾಣಿಗಳು ನಡೆದಾಡಿರುವ ದಾರಿಯನ್ನೇ ಅನುಸರಿಸಿ ದೇಗುಲಕ್ಕೆ ತೆರಳಬೇಕು. ಬೆಟ್ಟವು ಕಾಡಂಚಿನಿಂದ ಸುಮಾರು 14 ಕಿ.ಮೀ. ದೂರವಿದ್ದು, ಕಾಡುಪ್ರಾಣಿಗಳ ದಾಳಿ ಮಾಡುವ ಸಂಭವ ಇರುವ ಕಾರಣ, ಜನರು ತಂಡೋಪ ತಂಡವಾಗಿ ಈ ದೇಗುಲಕ್ಕೆ ತೆರಳುತ್ತಾರೆ.
ತೇತ್ರಾಯುಗಕ್ಕೂ ನಂಟಿದೆ: ಈ ದೇಗಲದಲ್ಲಿ ರಾಮ ವನವಾಸದ ವೇಳೆಯಲ್ಲಿ ಈ ಬೆಟ್ಟದಲ್ಲಿರುವ ದೇಗುಲದಲ್ಲಿ ತಂಗಿದ್ದ ಎಂಬ ಪ್ರತೀತಿ ಇದ್ದು, ಸೀತೆ ಸ್ನಾನ ಮಾಡಲು ಬಳಕೆ ಮಾಡುತ್ತಿದ್ದ ಕೊಳವನ್ನು ಇಂದಿಗೂ ಸೀತಾ ಕೊಳ ಹಾಗೂ ಆಕೆ ವಿಹರಿಸುತ್ತಿದ್ದ ವನವನ್ನು ಸೀತಾವನ ಎಂದು ಕರೆಯಲಾಗುತ್ತಿದೆ. ವಿಶೇಷ ಎಂದರೆ ಈ ಸೀತಾವನ ವರ್ಷದ ಎಲ್ಲಾ ಕಾಲದಲ್ಲೂ ಹಸಿರಿನಿಂದ ಕೂಡಿರುತ್ತದೆ. ಜೊತೆಗೆ ಸಾವಿರಾರು ಬಗೆಯ ಔಷಧ ಗಿಡಗಳನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ