ನಾಳೆ ರಾಮಸನ್ಸ್‌ ಬೊಂಬೆಮನೆ ಉದ್ಘಾಟನೆ


Team Udayavani, Sep 20, 2018, 4:56 PM IST

mys-1.jpg

ಮೈಸೂರು: ದಸರೆ ಎಂದರೆ ಮೈಸೂರು ಸೀಮೆಯ ಮನೆ ಮನೆಯ ಹಬ್ಬ. ನಾಡಹಬ್ಬ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದ್ದರೆ, ಮೈಸೂರಿನ ಮನೆಗಳಲ್ಲಿ ನವರಾತ್ರಿಯ ಬೊಂಬೆ ಪೂಜೆಗೆ ಸದ್ದಿಲ್ಲದೆ ನಡೆದಿದೆ ತಯಾರಿ.

ರಾಜರ ಆಳ್ವಿಕೆಯ ಕಾಲದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪಟ್ಟದ ಬೊಂಬೆಗಳನ್ನು ಮನೆಗಳಲ್ಲಿ ಕೂರಿಸಿ ಪೂಜಿಸುತ್ತಿದ್ದುದು ವಾಡಿಕೆ. ಅಲಂಕರಿಸಿದ ಜಗಲಿಗಳ ಮೇಲೆ ವಿವಿಧ ಬಗೆಯ ಬೊಂಬೆಗಳನ್ನು ಕೂರಿಸಿ ಪೂಜಿಸುವ ಸಂಪ್ರದಾಯ ಇಂದಿಗೂ ಮುಂದು ವರಿದಿದೆ. ಹೆಣ್ಣು ಮಕ್ಕಳಿರುವ ಮನೆಗಳಲ್ಲಂತೂ ದಸರೆ ಬೊಂಬೆ ಹಬ್ಬ ಎಂದೇ ಹೆಸರು ಮಾಡಿದೆ. 

ಯುದ್ಧ ಅಥವಾ ವಿಜಯದ ಸಂಕೇತವಾಗಿ ದಸರಾ ಆಚರಿಸುವುದರಿಂದ ಚಾಮುಂಡೇಶ್ವರಿ ಮೂರ್ತಿಯ ಪೂಜೆ ಜೊತೆಗೆ ಆನೆ, ಕುದುರೆ, ಪದಾತಿದಳ ಮೊದಲಾದ ಚದುರಂಗ ಬಲದ ಬೊಂಬೆಗಳನ್ನು ಕೂರಿಸುವುದು ವಾಡಿಕೆ.

14ನೇ ಪ್ರದರ್ಶನ: ನಜರ್‌ಬಾದ್‌ ಮುಖ್ಯರಸ್ತೆಯ ಪ್ರತಿಮಾ ಗ್ಯಾಲರಿಯಲ್ಲಿ 14ನೇ ವರ್ಷದ ಬೊಂಬೆ ಮನೆ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಹೂಗ್ಲೀ ನದಿ ತೀರದ ಕೋಲ್ಕತ್ತಾ ನಗರದ ದುರ್ಗಾಪೂಜಾ ಪೆಂಡಾಲ್‌ಗ‌ಳ ಸಂಭ್ರಮದ ಒಂದು ಪುಟ್ಟ
ದೃಶ್ಯಾವಳಿಯಲ್ಲಿ ದೇವಿ ಮಹಿಷ ಮರ್ಧಿನಿಯ ಜೊತೆ ಲಕ್ಷ್ಮೀ, ಸರಸ್ವತಿ, ಗಣೇಶ ಮತ್ತು ಕಾರ್ತಿಕೇಯರು ಹಾಗೂ ದಕ್ಷಿಣ ಕಾಳಿಯ ಬಿಂಬಗಳು, ಕಿನ್ನಾಳದ ಕಲೆಯಲ್ಲಿ ಮೈವೆತ್ತ ದೇವಿ, ಬಾದಾಮಿ ಬನಶಂಕರಿಯ ಸನ್ನಿಧಿ ಈ ಬೊಂಬೆ ಮನೆಯ ಇನ್ನೊಂದು ವಿಶೇಷ. 

ದೇವಿ ಶಾಕಾಂಬರಿಗೆ ಕಿನ್ನಾಳ, ಕೃಷ್ಣಾ ನಗರದ ತರಕಾರಿ, ಹಣ್ಣುಹಂಫ‌ಲಗಳ ಸಿಂಗಾರ. ಈ ದೇವಿಯರ ಸೇವೆಗೆಂಬಂತೆ ಬೊಂಬೆ ರೂಪದಲ್ಲಿ ಅವತರಿಸಿರುವ ಮಹಾರಾಜ ಜಯಚಾಮರಾಜ ಒಡೆಯರ್‌. ಮಹಾರಾಜರ ವಿಶಿಷ್ಟ ವ್ಯಕ್ತಿತ್ವವನ್ನು ವಿವಿಧ ಚಿತ್ರ ಬಿಂಬಗಳುಳ್ಳ ವಿಶೇಷ ಅಂಕಣದ ಮೂಲಕ ನೆನಪಿಸಿಕೊಂಡು ಅವರ ಜನ್ಮ ಶತಾಬ್ದಿಯ ವರ್ಷವನ್ನು ಆಚರಿಸಲು ಸಜ್ಜಾಗಿದೆ ಬೊಂಬೆ ಮನೆ.

ಮಹಾಭಾರತ ದೃಶ್ಯಗಳು: ರಾಜಾ ರವಿವರ್ಮನ ಚಿತ್ರಪಟಗಳ ಆಧರಿತ ದೇವ-ದೇವಿಯರು, ನರ-ನಾರಿಯರು ಕಾಗದ ರಚ್ಚಿನ ಬೊಂಬೆಗಳಾಗಿ ಮೈಕೈ ತುಂಬಿಕೊಂಡಿವೆ. ಅರಗಿನ ಮನೆಯಿಂದ ತಪ್ಪಿಸಿಕೊಂಡ ಪಾಂಡವರು, ದ್ರೌಪದಿ ಸ್ವಯಂವರ, ಮಾಯಾದೂತ, ದ್ರೌಪದಿ ವಸ್ತ್ರಹರಣ,ಅಜ್ಞಾತ ವಾಸದಲ್ಲಿ ಪಾಂಢವರು, ಕಿರಾತಾರ್ಜುನೀಯ, ಭೀಮ ಗರ್ವಭಂಗ, ಅಭಿಮನ್ಯು-ಉತ್ತರೆ ಕಲ್ಯಾಣ, ಶರಶಯೆಯಲ್ಲಿರುವ ಭೀಷ್ಮರು ಇವು ಹೊಸದಾಗಿ ಬಂದಿರುವ ವಿಶೇಷ ಬೊಂಬೆಗಳು.

ಲೋಹದ ಬೊಂಬೆಗಳು: ಪೇಪರ್‌ ಮೆಶ್‌, ಪ್ಲಾಸ್ಟರ್‌ ಆಫ್ ಪ್ಯಾರೀಸ್‌, ಪಿಂಗಾಣಿ, ಮರ, ಲೋಹಗಳಿಂದ ರಚಿಸಲಾಗಿರುವ ವೈವಿಧ್ಯಮಯ ಬೊಂಬೆಗಳು ಬೊಂಬೆಗಳ ಲೋಕವನ್ನೇ ತೆರೆದಿಟ್ಟಿವೆ. ಮೈಸೂರು, ಬೆಂಗಳೂರು,ಚನ್ನಪಟ್ಟಣ, ಕಿನ್ನಾಳ, ಮತ್ತು ಖಾನಾ ಪುರದಲ್ಲಿ ತಯಾರಾಗಿರುವ ಬೊಂಬೆಗಳ ಜೊತೆಗೆ ತಮಿಳುನಾಡಿನ ಕಡಲೂರು, ವಿಳುಪ್ಪುರಮ್‌, ಮಾಯಾ ವರಮ್‌, ಕಾಂಚೀಪುರಂ, ಮಧುರೈ, ಪನ್ರುಟಿ. ಆಂಧ್ರಪ್ರದೇಶದ ಕೊಂಡಪಲ್ಲಿ ಮತ್ತು ಎಟಿಕೊಪ್ಪ, ಉತ್ತರ ಪ್ರದೇಶದ ವಾರಾಣಸಿ ಮತ್ತು ಅಲೀಗಢ, ಪಶ್ಚಿಮಬಂಗಾಳದ ಕೊಲ್ಕತ್ತಾ, ಕೃಷ್ಣಾ ನಗರ್‌, ಬಿಷ್ಣುಪುರ್‌, ರಾಜಾಸ್ಥಾನದ ಜೈಪುರ ಮತ್ತು ಜೋಧ್‌ಪುರ, ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಪೇಣ್‌ ಸೇರಿದಂತೆ ಭಾರತದ ವಿವಿಧ ಪ್ರದೇಶಗಳಿಂದ ಬೊಂಬೆ ಹಬ್ಬಕ್ಕಾಗಿ ತರಿಸಲಾಗಿರುವ ಸಾವಿರಾರು ಬೊಂಬೆಗಳು ಒಂದೇ ಸೂರಿನಡಿ ಪ್ರದರ್ಶಿತಗೊಂಡಿವೆ.

ನಾಳೆ ಉದ್ಘಾಟನೆ: ಶುಕ್ರವಾರ ಸಂಜೆ 6.30ಕ್ಕೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ದಸರೆಯ ಬೊಂಬೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ವಿಶೇಷ ಅಂಕಣವನ್ನು ಭರತನಾಟ್ಯ ಕಲಾವಿದ ಡಾ. ತುಳಸೀ ರಾಮಚಂದ್ರ ಉದ್ಘಾಟಿಸಲಿದ್ದಾರೆ. ಶನಿವಾರ ಆರಂಭಗೊಳ್ಳುವ ಈ ಬೊಂಬೆಗಳ ಪ್ರದರ್ಶನ ಪ್ರತಿದಿನ ಬೆಳಗ್ಗೆ 10.30ರಿಂದ ಸಂಜೆ 7.30ರವರೆಗೆ ವರ್ಷಪೂರ್ತಿ ಇರಲಿದೆ. 

ಕ್ಷೀಣಿಸುತ್ತಿರುವ ಬೊಂಬೆ ಕಲೆಗಳನ್ನು ಪುನರುಜ್ಜೀವಗೊಳಿಸಲು ಹಾಗೂ ನಾಡಿನ ವೈವಿಧ್ಯಮಯ ಬೊಂಬೆ ಸಂಪ್ರದಾಯ
ಗಳನ್ನು ಬೊಂಬೆ ಪ್ರಿಯರಿಗೆ ಪರಿಚಯಿಸುವ ದೃಷ್ಟಿಯಿಂದ 2005ರ ದಸರೆ ಸಂದರ್ಭದಲ್ಲಿ ಬೊಂಬೆ ಮನೆಯನ್ನು ಸ್ಥಾಪಿಸಲಾಗಿದೆ. 
  ಆರ್‌.ಜಿ.ಸಿಂಗ್‌, ಕಾರ್ಯದರ್ಶಿ, ರಾಮ್‌ಸನ್ಸ್‌ ಕಲಾ ಪ್ರತಿಷ್ಠಾನ

ಟಾಪ್ ನ್ಯೂಸ್

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.