ಲಂಚಕ್ಕಾಗಿ ಹಪಹಪಿ: ಐಟಿಐ ಕಾಲೇಜು ಪ್ರಾಚಾರ್ಯ ಎಸಿಬಿ ಬಲೆಗೆ
Team Udayavani, Dec 15, 2021, 10:00 AM IST
ಹುಣಸೂರು: ಬೇರೆಡೆಗೆ ವರ್ಗಾವಣೆಯಾಗಿದ್ದ ಐ.ಟಿ.ಐ ಕಾಲೇಜಿನ ಜೆ.ಟಿ.ಓ.ರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಲಂಚಕ್ಕಾಗಿ ಪೀಡಿಸಿದ್ದ ಪ್ರಾಚಾರ್ಯರೊಬ್ಬರು ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಹುಣಸೂರು ಐ.ಟಿ.ಐ. ಕಾಲೇಜಿನ ಪ್ರಾಚಾರ್ಯ ಶ್ರೀಕಂಠಾರಾಧ್ಯ ಲಂಚ ಪಡೆಯುವಾಗ ಎಸಿಬಿ ಪ್ರಭಾರ ಡಿವೈಎಸ್ಪಿ ಧರ್ಮೇದ್ರ, ಸಿ.ಪಿ.ಐ. ಮೋಹನ್ ಕೃಷ್ಣರ ನೇತೃತ್ವದಲ್ಲಿ ಅಧಿಕಾರಿಗಳು ಮೈಸೂರಿನಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.
ನಾಗರಾಜ್ ಎಂಬವರಿಗೆ ಮೈಸೂರಿಗೆ ವರ್ಗಾವಣೆಯಾಗಿತ್ತು. ಐಟಿಐ ಕಾಲೇಜಿನಿಂದ ಇವರನ್ನು ಬಿಡುಗಡೆಗೊಳಿಸಲು 50 ಸಾವಿರ ರೂ ಲಂಚ ಕೇಳಿದ್ದರೆಂದು ನಾಗರಾಜ್ ಮೈಸೂರು ಎ.ಸಿ.ಬಿ.ಗೆ ದೂರು ನೀಡಿದ್ದರು. ಮುಂಗಡವಾಗಿ 25 ಸಾವಿರ ರೂ ನೀಡಿದ್ದರು, ಅಲ್ಲದೆ ಮತ್ತೆ ಐದು ಸಾವಿರ ರೂ ನೀಡುವ ವೇಳೆ ಬಂದಿಸಿದ್ದರ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಮೂರು ವಾಹನಗಳಲ್ಲಿ ಐಟಿಐ ಕಾಲೇಜಿಗೆ ಆಗಮಿಸಿದ ಎಸಿಬಿ ಡಿವೈಎಸ್ಪಿ ಧಮೇಂದ್ರ ನೇತೃತ್ವದ ಅಧಿಕಾರಿಗಳ ತಂಡವು ದಾಖಲೆಗಳನ್ನು ಪರಿಶೀಲಿಸಿದರು.
ವರ್ಗಾವಣೆಗೊಂಡಿರುವ ತಮ್ಮನ್ನು ಕಾಲೇಜಿನಿಂದ ಬಿಡುಗಡೆಗೊಳಿಸಲು ಹುಣಸೂರು ಸರಕಾರಿ ಐಟಿಐ ಕಾಲೇಜು ಪ್ರಾಚಾರ್ಯ ಶ್ರೀಕಂಠಾರಾದ್ಯ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರೆಂದು ಎಸಿಬಿಗೆ ನಾಗರಾಜ್ ದೂರು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ