ಬೆಳ್ಳಿಹಬ್ಬದ ಸಂಭ್ರಮದಲ್ಲಿ ಮುಕ್ತ ವಿವಿ
ಹೊಸ 11 ಕೋರ್ಸ್ಗಳಿಗೆ ಯುಜಿಸಿ ಅನುಮೋದನೆ ! ವಿದ್ಯಾರ್ಥಿ ಸ್ನೇಹಿಯಾಗಿ ವಿವಿ ಜಾಲತಾಣ ಅಭಿವೃದ್ಧಿ
Team Udayavani, Jul 14, 2021, 4:40 PM IST
ಮೈಸೂರು: ದೂರ ಶಿಕ್ಷಣ ನೀಡುವ ರಾಜ್ಯದ ಏಕ ಮಾತ್ರ ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ ಒಯು) ಬೆಳ್ಳಿ ಮಹೋತ್ಸವ ಆಚರಿಸುತ್ತಿರುವ ಹೊಸ್ತಿಲಿ ನಲ್ಲಿ ಯುಜಿಸಿ 11 ಹೊಸ ಕೋರ್ಸ್ಗಳನ್ನು ಮಂಜೂರು ಮಾಡಿದೆ ಎಂದು ಕೆಎಸ್ಒಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ತಿಳಿಸಿದರು.
ಮಾನಸಗಂಗೋತ್ರಿ ಆವರಣದಲ್ಲಿರುವ ಮುಕ್ತ ವಿಶ್ವವಿದ್ಯಾಲಯದಆಡಳಿತಭವನದಲ್ಲಿಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೂಲ ವಿವಿ ಕಾಯಿದೆಯಲ್ಲಿ ತಿದ್ದುಪಡಿ ಮಾಡಿ ಮುಕ್ತ ವಿವಿಯನ್ನು ದೂರ ಶಿಕ್ಷಣ ನೀಡುವ ಏಕಮಾತ್ರ ವಿವಿ ಎಂಬ ಗೌರವ ನೀಡಿ ಬೆಳ್ಳಿ ಮಹೋ ತ್ಸವದ ಹೊಸ್ತಿನಲ್ಲಿದ್ದ ವಿಶ್ವವಿದ್ಯಾಲಯಕ್ಕೆ ಉಡುಗೊರೆ ಯಂತೆ ನೀಡಿದೆ.
1996ರಲ್ಲಿ ಜನ್ಮ ತಾಳಿದ ಈ ವಿವಿ, ಇಂದು ಸಾಕಷ್ಟು ದೊಡ್ಡಮಟ್ಟದಲ್ಲಿ ಬೆಳೆದಿದೆ. ರಾಜ್ಯಾದ್ಯಂತ 20 ಪ್ರಾದೇ ಶಿಕ ಕೇಂದ್ರಗಳಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ. ಮುಕ್ತ ವಿವಿ ಅಧಿಕೃತ ಜಾಲತಾಣವನ್ನು ವಿದ್ಯಾರ್ಥಿ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರವೇಶಾತಿಗೆ ಸಂಬಂಧಪಟ್ಟಂತೆ ಗಣಕೀಕರಣಗೊಳಿಸ ಲಾಗಿದೆ. ಆನ್ಲೈನ್ ಮೂಲಕ ಸ್ಮರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ವಿವಿಯಲ್ಲಿ ಈಗಾಗಲೇ 9 ಅಧ್ಯಯನ ಪೀಠಗಳು ಕಾರ್ಯಾರಂಭ ಮಾಡಿದ್ದು, ಹೊಸದಾಗಿ ಪೀಠಗಳು ಸ್ಥಾಪನೆಗೆಕ್ರಮಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಯುಜಿ, ಪಿಜಿ ಕಾರ್ಯಕ್ರಮಗಳಿಗೆ ಸಿಬಿಸಿಎಸ್ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ಲೇಸ್ಮೆಂಟ್ ಸೆಲ್ ತೆರೆಯಲಾಗಿದೆ. ಪ್ರವೇಶಾತಿ ಹೆಚ್ಚಿಸಲು ಹಳ್ಳಿ ಹಳ್ಳಿಯಲ್ಲಿ ಪೋಸ್ಟರ್ ಅಂಟಿಸಿ ಪ್ರಚುರಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕ್ರಿಯಾಯೋಜನೆ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಯೋಜನೆ ಅಡಿಯಲ್ಲಿ ಸಂಶೋಧನೆ ನಡೆಸಲು 20 ಲಕ್ಷದ ಸಂಶೋಧನಾ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಅನುಮೋದನೆ ದೊರೆಯಲಿದೆ. ಕಳೆದ ವರ್ಷ ಕೊರೊನಾ ಲಾಕ್ಡೌನ್ ಹಿನ್ನೆಲೆ ಯಶಸ್ವಿಯಾಗಿ ತೆರೆದ ಪುಸ್ತಕ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.
ಬಿ.ಇಡ್ ಪ್ರವೇಶಾತಿ: ಹೆಚ್ಚಿನ ಸಂಖ್ಯೆ ಬಿ.ಇಡಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪಡೆಯಲು ಅನುಕೂಲವಾಗುಂತೆ ಪ್ರವೇಶಾತಿ ಸಂಖ್ಯೆಯನ್ನು 500ರಿಂದ 2 ಸಾವಿರಕ್ಕೆ ಹೆಚ್ಚಿಸಲು ಎನ್ಸಿಟಿಇ ಅವರಿಗೆ ಪತ್ರ ಬರೆಯಲಾಗಿದೆ. ಕರಾಮುವಿಯಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದ 20 ವಿದ್ಯಾರ್ಥಿಗಳು ಕೆಪಿಎಸ್ಸಿ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ. ಅವರನ್ನು ಸನ್ಮಾನಿಸಲಾಗುವುದು. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಶಿಕ್ಷಕರ ಪದನ್ನೋತಿಯನ್ನು ಯುಜಿಸಿ ನಿಯಮಾನುಸಾರ ಜಾರಿ ಮಾಡಲಾಗಿದೆ.
ಸರ್ಕಾರಿ ಶಾಲೆ ದತ್ತು: ಕರ್ನಾಟಕ ರಾಜ್ಯ ಮುಕ್ತ ವಿವಿ ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿಪಡಿಸಲು 10 ಕೋಟಿ ರೂ. ಮೀಸಲಿಟ್ಟಿದೆ.ಕೆಲವು ಶಾಲೆಗಳನ್ನು ದತ್ತು ಪಡೆದಿದ್ದು, ಕಟ್ಟಡ ನಿರ್ಮಾಣ, ಪರಿಕರ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ವ್ಯವಸ್ಥೆಯನ್ನು ವಿವಿಯಿಂದಲೇಕಲ್ಪಿಸಲಾಗುವುದು ಎಂದರು.
ಯುಜಿಸಿ 2018-19ರಿಂದ2023ರವರೆಗೆಮಾನ್ಯತೆ ನೀಡಿದ್ದು, ಮುಂದಿನ ಅವಧಿಯ ಮಾನ್ಯತೆ ನವೀಕರಣಕ್ಕೆ ನ್ಯಾಕ್ ಮಾನ್ಯತೆ ಅತ್ಯವಶ್ಯಕತೆಯಾಗಿದ್ದು, ಈ ಸಂಬಂಧ ಅಗತ್ಯಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಕ್ರೋಡೀಕೃತ ಅಂಕಿಅಂಶ ಶೇಖರಿಸಲು ಡಾಟಾ ಸೆಂಟರ್ ಸ್ಥಾಪಿಸುವ ಕಾರ್ಯ ನಡೆಯುತ್ತಿದ್ದೆ. ಸರ್ಕಾರದ ನಿರ್ದೇಶನದಂತೆ ಸಂಪೂರ್ಣಇಆಫೀಸ್ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ವೇಳೆ ವಿವಿಯಿಂದ ನೆರವು ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಆರ್. ರಾಜಣ್ಣ, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಪರೀಕ್ಷಾಂಕ ನಿಯಂತ್ರಕ ಡಾ.ಅಶೋಕ, ಡಾ.ಷಣ್ಮುಖ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಜೈನಳ್ಳಿ ಸತ್ಯನಾರಾಯಣಗೌಡ ಇದ್ದರು.