ಕೆಆರ್‌ಎಸ್‌, ಕಬಿನಿ ತುಂಬಿದ್ರೂ ನೀರಿನ ಸಮಸ್ಯೆ ನೀಗಿಲ್ಲ


Team Udayavani, Oct 23, 2019, 3:00 AM IST

krs-kabini

ಮೈಸೂರು: ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯ ಭರ್ತಿಯಾಗಿದ್ದರೂ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ ಎಂದು ಪಾಲಿಕೆಯ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಮೇಯರ್‌ ಮತ್ತು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಗುಂಡಿ ಬಿದ್ದ ರಸ್ತೆಗಳು ಹಾಗೂ ಟೆಂಡರ್‌ ಪ್ರಕ್ರಿಯೆಗೆ ತಡೆಯೊಡ್ಡಿದ ಸಮಸ್ಯೆಗಳ ಕುರಿತು ಎಲ್ಲಾ ಸದಸ್ಯರು ಮೇಯರ್‌ ಪುಷ್ಪಲತಾ ಹಾಗೂ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಬಿಂದಿಗೆ ಹಿಡಿದು ಪ್ರತಿಭಟನೆ: ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಯ ಪಾಲಿಕೆ ಆಡಳಿತಾವಧಿಯ ಕೊನೆಯ ಕೌನ್ಸಿಲ್‌ ಸಭೆಯಲ್ಲಿ ಮೇಯರ್‌ ಪುಷ್ಪಲತಾ ಕಾರ್ಯಸೂಚಿ ಮಂಡಿಸಲು ಸೂಚಿಸಿದರು. ತಕ್ಷಣ ಎದ್ದುನಿಂತ ಪಕ್ಷೇತರ ಸದಸ್ಯ ಮಾ.ವಿ. ರಾಮಪ್ರಸಾದ್‌ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆಯಲು ವೇಷ ಧರಿಸಿ, ಬಿಂದಿಗೆಯೊಂದಿಗೆ ಆಗಮಿಸಿ ಸದನದ ಬಾವಿಯೊಳಗೆ ನಿಂತು ಪ್ರತಿಭಟಿಸಿದರು. ಬಳಿಕ ಮಾತನಾಡಿದ ಅವರು, ನೀರಿನ ಸಮಸ್ಯೆ ಬಗ್ಗೆ ವಾಣಿವಿಲಾಸ ನೀರು ಸರಬರಾಜು ಅಧಿಕಾರಿಗಳಾಗಲಿ, ಆಯುಕ್ತರಾಗಲಿ ಗಮನ ನೀಡುತ್ತಿಲ್ಲ ಎಂದು ದೂರಿದರು.

ಇವರ ಮಾತಿಗೆ ಬೆಂಬಲಿಸಿದ ಆಡಳಿತ ಪಕ್ಷದ ನಾಯಕಿ ಶಾಂತಕುಮಾರಿ, ಜೆಡಿಎಸ್‌ನ ಪ್ರೇಮಾ, ವಿಪಕ್ಷ ನಾಯಕ ಬಿ.ವಿ. ಮಂಜುನಾಥ್‌, ಜೆ. ಗೋಪಿ ಮತ್ತಿತರರು ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ಆಗ್ರಹಿಸಿದರು. ಸದಸ್ಯ ಅಯೂಬ್‌ ಖಾನ್‌ “ಮೇಯರ್‌ ನೀಡಿದ ಸೂಚನೆ ಪಾಲಿಸದ ಅಧಿಕಾರಿಗಳು ಏಕಿರಬೇಕು ಅಥವಾ ಮೇಯರ್‌ ತಮ್ಮ ಕೆಲಸ ಮಾಡದಿದ್ದಲ್ಲಿ ಆ ಪೀಠದಲ್ಲಿ ಯಾಕಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎಂಜಿನಿಯರ್‌ ನಾಗರಾಜಮೂರ್ತಿ, ಕಬಿನಿಯಿಂದ 60 ಎಂಎಲ್‌ಡಿ ನೀರನ್ನಷ್ಟೇ ತರಲು ಸಾಧ್ಯವಿದೆ. ಆದರೆ ನಾವು 64 ಎಂಎಲ್‌ಡಿ ತರುತ್ತಿದ್ದೇವೆ. ಹೊಂಗಳ್ಳಿ, ಇಂಡುವಾಳುವಿನಿಂದಲೂ ನೀರು ಪೂರೈಕೆಯಾಗುತ್ತಿದ್ದು, ಕೆಪಿಟಿಸಿಎಲ್‌ ಅಡಚಣೆಯಿಂದ ತೊಂದರೆಯಾಗಿದೆ. ಆದಷ್ಟು ಬೇಗ ಪರಿಹರಿಸಲಾಗುವುದು ಎಂದರು. ಬಳಿಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರತ್ಯೇಕವಾಗಿ ಅಕ್ಟೋಬರ್‌ 23ರಂದು ಬುಧವಾರ ಸಭೆ ನಡೆಸಲು ಮೇಯರ್‌ ತೀರ್ಮಾನಿಸಿದರು.

ಆನ್‌ಲೈನ್‌ ಅಳವಡಿಸುವಲ್ಲಿ ವೈಫ‌ಲ್ಯ: ಸದಸ್ಯ ಆರೀಫ್ ಹುಸೇನ್‌ ಮಾತನಾಡಿ, ನೀರಿನ ಕರ ಸಂಗ್ರಹ, ಆಸ್ತಿ ತೆರಿಗೆ, ಬಾಡಿಗೆ, ವ್ಯಾಪಾರ ಮತ್ತು ವಾಣಿಜ್ಯ ಪರವಾನಗಿಗೆ ಸಂಬಂಧಿಸಿದ ಕೆಲಸಗಳನ್ನು ಆನ್‌ಲೈನ್‌ ಮೂಲಕ ಮಾಡಲು ಹಿಂದಿನಿಂದಲೂ ಪಾಲಿಕೆಗೆ ಒತ್ತಾಯಿಸಲಾಗುತ್ತಿದೆ. ಆದರೆ, ಈವರೆಗೆ ಆ ಪ್ರಯತ್ನ ಮಾಡಿಲ್ಲ. ಮೊನ್ನೆ ರಚನೆಯಾದ ತುಮಕೂರು ಪಾಲಿಕೆಯು ಆನ್‌ಲೈನ್‌ ವ್ಯವಸ್ಥೆ ಮಾಡಿದೆ. ಹಳೆಯದಾದ ಮೈಸೂರು ಪಾಲಿಕೆ ಇನ್ನೂ ಯಾಕೆ ಆನ್‌ಲೈನ್‌ ವ್ಯವಸ್ಥೆಗೆ ಒಳಪಡಿಸಿಕೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಡಿಮೆ ಅನುದಾನಕ್ಕೆ ಆಕ್ರೋಶ: ಈ ಹಿಂದಿನ ಎಲ್ಲಾ ಮೇಯರ್‌ಗಳು ಪ್ರತಿ ವಾರ್ಡ್‌ಗಳಿಗೂ ಒಂದು ಕೋಟಿ ಅನುದಾನ ನೀಡುತ್ತಿದ್ದರು. ಆದರೆ ಈಗಿರುವ ಮೇಯರ್‌ ಕೇವಲ 35 ಲಕ್ಷ ರೂ. ನೀಡಿದ್ದಾರೆ. ಇಷ್ಟು ಹಣದಲ್ಲಿ ನಮ್ಮ ವಾರ್ಡ್‌ಗಳಲ್ಲಿ ಯಾವ ಕೆಲಸ ಮಾಡಿಸಲು ಸಾಧ್ಯ ಎಂದು ಬಿಜೆಪಿ ಸದಸ್ಯ ರಮೇಶ್‌ ಪ್ರಶ್ನಿಸಿದರು. ಇದಕ್ಕೆ ದ‌ನಿಗೂಡಿಸಿದ ಎಲ್ಲಾ ಸದಸ್ಯರು ಕಡಿಮೆ ಅನುದಾನ ನೀಡಿದ ಮೇಯರ್‌ ಎಂಬ ಅಪಕೀರ್ತಿಗೆ ಒಳಗಾಗದೇ ಎಲ್ಲಾ ವಾರ್ಡ್‌ಗಳಿಗೂ 85 ಲಕ್ಷ ರೂ. ನೀಡುವಂತೆ ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಆಯುಕ್ತ ಗುರುದತ್‌ ಹೆಗಡೆ, ಪಾಲಿಕೆ ಈಗಾಗಲೇ 140ರಿಂದ 150 ಕೋಟಿ ರೂ. ಸಾಲದಲ್ಲಿದೆ. ಸಂಪನ್ಮೂಲ ಕೊರತೆಯಿಂದ ಅನುದಾನ ನೀಡಲು ವಿಳಂಬವಾಗಿದೆ ಎಂದು ಉತ್ತರಿಸಿದರು.

ಖಾಲಿ ನಿವೇಶನಕ್ಕೆ ದರ ನಿಗದಿ: ಖಾಲಿ ನಿವೇಶನ ಸ್ವತ್ಛತೆಗೆ ನಗರಪಾಲಿಕೆ ನಿಗದಿ ಪಡಿಸಿದ್ದ ನಿರ್ವಹಣಾ ದರವನ್ನು ಪರಿಷ್ಕರಿಸಲಾಯಿತು. ನಗರಪಾಲಿಕೆಯಲ್ಲಿ ಇರುವ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಳನ್ನು ತೆಗೆದು ಸ್ವತ್ಛಗೊಳಿಸುವ ವಿಷಯ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆಯೇ ಆಡಳಿತ ಪಕ್ಷ ಕಾಂಗ್ರೆಸ್‌ ಸದಸ್ಯರಿಂದಲೇ ಪ್ರತಿ ಅಡಿಗೆ 2 ರೂ. ನಿಗದಿ ಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

30*40ಕ್ಕಿಂತ ಕಡಿಮೆ ಅಳತೆ ನಿವೇಶನ ಹೊಂದಿರುವವರು ಬಡವರಾಗಿದ್ದು, ಅವರಿಗೂ ಕಂದಾಯದ ಜೊತೆಗೆ ಪ್ರತಿ ಅಡಿಗೆ 2 ರೂ. ನಿರ್ವಹಣಾ ವೆಚ್ಚ ಭರಿಸಿದರೆ ಕಟ್ಟಲು ಕಷ್ಟವಾಗುತ್ತದೆ. ಆದ್ದರಿಂದ ಅವರಿಗೆ ಚದರ ಅಡಿಗೆ 1 ರೂ. ನಿಗದಿ ಪಡಿಸಬೇಕು ಎಂದು ಕಾಂಗ್ರೆಸ್‌ನ ಅರೀಫ್ ಹುಸೇನ್‌, ಅಯೂಬ್‌ಖಾನ್‌, ಪಕ್ಷೇತರ ಸದಸ್ಯ ಕೆ.ವಿ.ಶ್ರೀಧರ್‌, ಜೆಡಿಎಸ್‌ನ ಎಸ್‌ಬಿ.ಎಂ. ಮಂಜು ಒತ್ತಾಯಿಸಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ನಿವೇಶನ ಸ್ವತ್ಛಗೊಳಿಸದಿದ್ದರೆ ಪರಿಸರ ಹಾಳಾಗುತ್ತದೆ. ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಹೆಚ್ಚು ದರ ನಿಗದಿ ಪಡಿಸಿದರೆ ನಿವೇಶನ ಮಾಲೀಕರೇ ಸ್ವತ್ಛತೆಗೆ ಮುಂದಾಗುತ್ತಾರೆ. ಕಡಿಮೆ ದರ ನಿಗದಿ ಪಡಿಸಿದರೆ ಪಾಲಿಕೆಗೂ ಹೊರೆಯಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಈ ಸಮಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಕಾವೇರಿದ ಚರ್ಚೆಯ ಬಳಿಕ 30*40 ಅಳತೆಗಿಂತ ಕಡಿಮೆ ಇರುವ ನಿವೇಶನಕ್ಕೆ ಚದರ ಅಡಿಗೆ ಒಂದು ರೂ., 30*40 ಹಾಗೂ ಅದಕ್ಕಿಂತ ಹೆಚ್ಚಿನ ಅಳತೆಗೆ ಚದರ ಅಡಿಗೆ 2 ರೂ. ನಿಗದಿ ಪಡಿಸಲಾಗಿದೆ. ಅಲ್ಲದೇ ವರ್ಷದಲ್ಲಿ ಮೂರು ಬಾರಿ ಸ್ವತ್ಛತೆ ಕೈಗೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಉಪ ಮೇಯರ್‌ ಶಫಿ ಅಹಮ್ಮದ್‌ ಇದ್ದರು.

ಪ್ರತಿ ವಾರ್ಡ್‌ಗೂ 50 ಲಕ್ಷ ರೂ.: ಪಾಲಿಕೆಯ ಪ್ರತಿ ವಾರ್ಡ್‌ಗೆ ತಲಾ 50 ಲಕ್ಷ ರೂ. ಹೆಚ್ಚುವರಿ ಅನುದಾನ ನಿಗದಿ ಪಡಿಸಿ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಹಿಂದೆ ತಲಾ 35 ಲಕ್ಷ ರೂ. ಅನುದಾನ ನೀಡಿದ್ದು, ಇದರಿಂದ ವಾರ್ಡ್‌ನ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯಾಗಿಲ್ಲ. ಹಾಗಾಗಿ ಇನ್ನು 85 ಲಕ್ಷ ರೂ. ನೀಡಬೇಕು ಎಂದು ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಸಭೆಯಲ್ಲಿ ಮೇಯರ್‌ ಹಾಗೂ ಆಯುಕ್ತರನ್ನು ಒತ್ತಾಯಿಸಿದರು. ಸುದೀರ್ಘ‌ ಚರ್ಚೆಯ ಬಳಿಕ 50 ಲಕ್ಷ ರೂ. ನಿಗದಿ ಪಡಿಸಿ ನಿರ್ಣಯ ಕೈಗೊಳ್ಳಲಾಯಿತು.

ಟೆಂಡರ್‌ ಕರೆಯುವಲ್ಲಿ ತಾರತಮ್ಯ: ಪಾಲಿಕೆಯ ಹಿಂದಿನ ಆಯುಕ್ತೆ ಶಿಲ್ಪಾನಾಗ್‌ ಕರೆದಿದ್ದ ಟೆಂಡರ್‌ಗಳಿಗೆ ಈಗಿನ ಆಯುಕ್ತ ಗುರುದತ್‌ ಹೆಗಡೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿ ಎಲ್ಲಾ ಸದಸ್ಯರೂ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಬಳಿಕ ಮೇಯರ್‌ ಮುಂದೆ ನಿಂತು ಪ್ರತಿಭಟಿಸಿದ ಬಿಜೆಪಿ ಸದಸ್ಯರು “ಪಾಲಿಕೆ ಆಯುಕ್ತರು ಬಂದು 3 ತಿಂಗಳಾದರೂ ಇನ್ನೂ ಕೆಲಸ ಆರಂಭಿಸಿಲ್ಲ. ಟೆಂಡರ್‌ ಪ್ರಕ್ರಿಯೆಗೆ ಹಿಂದಿನ ಆಯುಕ್ತರು ಚಾಲನೆ ನೀಡಿದ್ದರೂ ಇವರು ತಡೆಯೊಡ್ಡುತ್ತಿದ್ದಾರೆ. ಯಾವುದೇ ಕಾಮಗಾರಿಗಳಿಗೆ ಹಣ ಬಿಡುಗಡೆಯಾತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಪ್ರತಿಕ್ರಿಯಿಸಿದ ಆಯುಕ್ತ ಗುರುದತ್‌ ಹೆಗಡೆ, ನಾನು ಯಾವುದೇ ಟೆಂಡರ್‌ಗೆ ತಡೆ ನೀಡಿಲ್ಲ. ತಪ್ಪು ಮಾಹಿತಿ ಬಂದಿದೆ. ಸದ್ಯದಲ್ಲಿಯೇ ಎಲ್ಲಾ ಟೆಂಡರ್‌ಗೂ ಚಾಲನೆ ನೀಡಲಾಗುವುದು ಎಂದರು.

ದೀಪಾಲಂಕಾರ ತೋರಿಸಿ ಬೀಳಿಸಿದ್ದೀರಿ: ದಸರೆಗೂ ಮುನ್ನ ರಸ್ತೆ ಗುಂಡಿ ಮುಚ್ಚಲು ಆದೇಶಿಸಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. 60 ಕಿ.ಮೀ. ರಸ್ತೆಗೆ ದೀಪಾಲಂಕಾರ ಮಾಡಿದ್ದೇವೆಂದು ಜನರಿಗೆ ಆಕಾಶ ತೋರಿಸಿ, ರಸ್ತೆ ಗುಂಡಿಬಿದ್ದಿದ್ದರೂ ಜನರೂ ಬೀಳುವಂತೆ ಮಾಡಿದ್ದೀರಿ ಎಂದು ಮಾಜಿ ಮೇಯರ್‌ ಅಯೂಬ್‌ಖಾನ್‌ ಕಾಲೆಳೆದರು. ಅದಕ್ಕೆ ಉತ್ತರಿಸಿದ ಆಯುಕ್ತ ಗುರುದತ್‌ ಹೆಗಡೆ, ಮಳೆಗಾಲವಾದ್ದರಿಂದ ರಸ್ತೆ ಗುಂಡಿ ಮುಚ್ಚವ ಕಾಮಗಾರಿ ಗುಣಟ್ಟದಿಂದ ಕೂಡಿರುವುದಿಲ್ಲ. ಹಾಗಾಗಿ ಮಳೆಗಾಲ ಮುಗಿಯುತ್ತಿದ್ದಂತೆ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅರಮನೆಯಿಂದ ಹೊರಗೆ ನಾನೂ ಸಾಮಾನ್ಯನೇ: ಯದುವೀರ್‌

ಅರಮನೆಯಿಂದ ಹೊರಗೆ ನಾನೂ ಸಾಮಾನ್ಯನೇ: ಯದುವೀರ್‌

1-asasa

Hunsur:ಆಡಳಿತ ಸೌಧದ ಸೀಲಿಂಗ್ ಕಳಚಿಬಿದ್ದು ಮಹಿಳೆ ಕಾಲ್ಬೆರಳು ತುಂಡು!

1-adasdsa

Hunsur: ಸಾಲಬಾಧೆಯಿಂದ ರೈತ ಅತ್ಮಹತ್ಯೆಗೆ ಶರಣು

1-sasd

BJP; ಟಿಕೆಟ್ ಕೊಡುವಾಗ ಕಾರಣ ಹೇಳಬೇಕಾದ ಅಗತ್ಯ ಪಕ್ಷಕ್ಕಿಲ್ಲ: ಪ್ರತಾಪ್ ಸಿಂಹ

Lok Sabha Polls: ಮೈತ್ರಿ ಅಭ್ಯರ್ಥಿ ಯದುವೀರ್ ಗೆಲುವಿಗೆ ಶ್ರಮ: ಶಾಸಕ ಹರೀಶ್‌ಗೌಡ

Lok Sabha Polls: ಮೈತ್ರಿ ಅಭ್ಯರ್ಥಿ ಯದುವೀರ್ ಗೆಲುವಿಗೆ ಶ್ರಮ: ಶಾಸಕ ಹರೀಶ್‌ ಗೌಡ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.