ಮನೆ ಮನೆಗೆ ಗಾಂಧಿ ಪಥ ಕಾರ್ಯಕ್ರಮಕ್ಕೆ ಚಾಲನೆ
Team Udayavani, Feb 12, 2020, 3:00 AM IST
ಮೈಸೂರು: ರಂಗಾಯಣದ 20ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ “ಮನೆ ಮನೆಗೆ ಗಾಂಧಿ ಪಥ’ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಬಾರಿ ಬಹುರೂಪಿ ನಾಟಕೋತ್ಸವವನ್ನು “ಗಾಂಧಿ ಪಥ’ ಎಂಬ ವಿಷಯಾಧಾರಿತವಾಗಿ ಸಂಘಟಿಸಿರುವ ರಂಗಾಯಣ, ಮೈಸೂರಿನಲ್ಲಿ ಗಾಂಧೀಜಿ ಮೈಸೂರಿನಲ್ಲಿ ಭೇಟಿ ನೀಡಿದ ಏರಿಯಾಗಳಲ್ಲಿ ಗಾಂಧಿಯನ್ನು ಪುನಃ ಸ್ಮರಿಸಲು ಮನೆ ಮನೆಗೆ ಗಾಂಧಿ ಪಥ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಗದಗದ ವೀರಪ್ಪ ಮತ್ತು ಚನ್ನಪ್ಪ ಸಂಗಡಿಗರು ಮನೆ ಮನೆಗೆ ಭೇಟಿ ನೀಡಿ ಗಾಂಧೀಜಿಯ ಜೀವನ ವೃತ್ತಾಂತವನ್ನು ಲಾವಣಿಯ ಮೂಲಕ ಕಟ್ಟಿಕೊಡಲಿದ್ದಾರೆ.
ಮಂಗಳವಾರ ಜಯಲಕ್ಷ್ಮೀಪುರಂನಲ್ಲಿರುವ ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ನಿವಾಸದಲ್ಲಿ ಗಾಂಧಿ ಕುರಿತು ಲವಾಣಿ ಹಾಡುವ ಮೂಲಕ ಮನೆ ಮನೆಗೆ ಗಾಂಧಿ ಪಥ ಕಾರ್ಯಕ್ರಮ ಆರಂಭಗೊಂಡಿತು. ಗಾಂಧೀಜಿ ಭೇಟಿ ನೀಡಿದ ಗಾಂಧಿನಗರದ ಮನೆ ಮಂಚಮ್ಮ ದೇಗುಲದಲ್ಲಿ ಲಾವಣಿ ಮತ್ತು ಗೀಗೀ ಪದ ಹಾಡಲಾಯಿತು.
ಸಂಜೆ ಕವಯಿತ್ರಿ ಲತಾ ಮಹೋನ್ ಮನೆಯಲ್ಲಿ ಮನೆ ಮನೆಗೆ ಗಾಂಧಿ ಪಥ ಆಯೋಜಿಸಲಾಯಿತು. ಗಾಂಧೀಜಿ ಮೈಸೂರಿಗೆ ಆಗಮಿಸಿದ ಸಂದರ್ಭ ಭೇಟಿ ನೀಡಿದ ಗಾಂಧಿನಗರ ಮತ್ತು ಅಶೋಕ ಪುರಂನ ಹಲವು ಮನೆಗಳಲ್ಲಿ ಗಾಂಧಿ ಪಥ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಆಯ್ದ ಮನೆಗಳಲ್ಲಿಯೂ ಕಾರ್ಯಕ್ರಮ ನಡೆಯಲಿದೆ.
ಅಪರ ಜಿಲ್ಲಾಧಿಕಾರಿ ಪುರ್ಣಿಮಾ, ಕಲಾವಿದರಿಗೆ ಫಲ-ತಂಬುಲ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಬಹುರೂಪಿ ನಾಟಕೋತ್ಸವದ ಪ್ರಧಾನ ಸಂಚಾಲಕ ಹುಲಗಪ್ಪ ಕಟ್ಟಿಮನಿ, ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮs…, ಗೀತಾ ಮೊಂಡಟ್ಕ, ಸಂಚಾಲನ ತಂಡದ ದೀಪಕ್ ಮೈಸೂರು ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
MUST WATCH
ಹೊಸ ಸೇರ್ಪಡೆ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ