ವಚನಸ್ಮತಿ ಮನುಷ್ಯನ ಭಾಗವಾಗಲಿ


Team Udayavani, Aug 6, 2019, 3:00 AM IST

vachan

ಮೈಸೂರು: ಮನುಸ್ಮತಿಗಿಂತ ವಚನಸ್ಮತಿ ಮನುಷ್ಯನ ಭಾಗವಾಗುವುದರ ಜೊತೆಗೆ ಭಾರತದ ಸಂವಿಧಾನ ಆಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು. ಸಹಮತ ವೇದಿಕೆ ಮೈಸೂರು ಮತ್ತೆ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಸೋಮವಾರ ಕಲಾಮಂದಿರದ ಸುಚಿತ್ರಾ ಆರ್ಟ್‌ ಗ್ಯಾಲರಿಯಲ್ಲಿ ಏರ್ಪಡಿಸಿದ್ದ ವಚನ ಚಳವಳಿಯ ಸಂದರ್ಭ ಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿ, ಕಿರುರಂಗಮಂದಿರದಲ್ಲಿ ನಡೆದ ವಚನ ಗಾಯನ, ವಚನ ವಾಚನದಲ್ಲಿ ಮಾತನಾಡಿದರು.

12ನೇ ಶತಮಾನದ ಶಿವಶರಣರ ವಚನಗಳು ಸರಳ ಹಾಗೂ ನೇರವಾಗಿ ಎದೆಗೆ ನಾಟುವಂತಹವು. ಇಂತಹ ವಚನಗಳನ್ನು ನಾವು ಶರಣರ ಮುಕ್ತ ಸಂವಿಧಾನದ ಬದುಕಿನ ನೀತಿ ಅಂಥ ಎಂದು ಕರೆಯುತ್ತೇವೆ. ಇಲ್ಲಿ ತತ್ವ ಪ್ರತಿಪಾದನೆ, ವಿಮರ್ಶೆ, ಟೀಕೆ ಟಿಪ್ಪಣಿಗಳಿವೆ. ಇಂತಹ ಮುಕ್ತ ಸಂವಿಧಾನ ಎಲ್ಲಿಯೂ ಸಿಗುವುದಿಲ್ಲ. ಆದ್ದರಿಂದ ವಚನ ಸಂವಿಧಾನವೇ ಭಾರತದ ಸಂವಿಧಾನ ಆಗಬೇಕು ಎಂದು ಬಯಸುವೆ. ಹೀಗಾದಾಗ ಮಾತ್ರ 12 ಶತಮಾನದಲ್ಲಿ ಸಾಕಾರಗೊಳ್ಳದ ಆಶಯ 21ನೇ ಶತಮಾನದಲ್ಲಿ ಸಾಕಾರಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮತ್ತೆ ಕಲ್ಯಾಣ ಅಂದರೆ ಮೌಡ್ಯರಹಿತ ಬದುಕು, ಅಂತರ್ಜಾತಿ ವಿವಾಹದ ಬದುಕು, ಸ್ವ ವ್ಯಕ್ತಿತ್ವದ ಪ್ರತಿಷ್ಠಾನದ ಬದುಕು. ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. 12ನೇ ಶತಮಾನದಲ್ಲಿ ವಿಭೂತಿಗೆ ಬೆಂಕಿಯ ಗುಣ ಇತ್ತು. ರುದ್ರಾಕ್ಷಿ ಬರೀ ರುದ್ರಾಕ್ಷಿಯಾಗಿರಲಿಲ್ಲ. ಅದು ಸಮಾಜದ ಅಕ್ಷಿಯಾಗಿತ್ತು. ಶರಣರ ಬದುಕು ಒಂದು ನೀತಿಯಾಗಿತ್ತು ಎಂದು ಹೇಳಿದರು.

ವಚನ ಚಳವಳಿಯ ಚಿತ್ರ ಪ್ರದರ್ಶನದಲ್ಲಿ ದಂಡ ಹಿಡಿದು ಹಿಂದೆ ಮುಳ್ಳನ್ನು ಕಟ್ಟಿಕೊಂಡಿರುವ ನಾಗಿ ದೇವನ ಚಿತ್ರ ನೋಡಿದೆ. ಇದು ಪೂರ್ವದ ಬದುಕಿನ ನಿರ್ದಶನ. ಈ ಬದುಕು ಇಲ್ಲವಾಗಿಸಲು ಬಸವಣ್ಣ ಶ್ರಮಿಸಿದರು. ಪ್ರಸ್ತುತ ದಂಡ ಹೋಗಿ ಸೈಕಲ್‌ ಗಂಟೆ ಬಂದಿದೆ. ಅಂದಿಗೂ ಮತ್ತು ಇಂದಿಗೂ ಏನು ವ್ಯತ್ಯಾಸವಿಲ್ಲ. ಈ ವ್ಯತ್ಯಾಸವನ್ನು ನಿರ್ಮೂಲನೆಗೊಳಿಸಲು ಮತ್ತೆ ಕಲ್ಯಾಣ ಶ್ರಮಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ವಿದ್ವಾಂಸ ಒ.ಎಲ್‌.ನಾಗಭೂಷಣಸ್ವಾಮಿ ಮಾತನಾಡಿ, ಮತ್ತೆ ಕಲ್ಯಾಣ ಕನ್ನಡ ನೆಲದ ಹುಟ್ಟಿನ ಚಿಂತನೆಗಳ ಮೂಲಕ ಹೊಸ ಸಮಾಜ ಸೃಷ್ಟಿಸುವ ಆಶಯದ ಕಾರ್ಯ. ಪ್ರಾಮಾಣಿಕವಾಗಿ ಬದುಕಿ ಮಾತನಾಡಿದ ವಚನಗಳನ್ನು ಯುವಕರಿಗೆ ಮುಟ್ಟಿಸುವ ಸದಾಶಯದಿಂದ ರೂಪುಗೊಂಡಿರುವುದಾಗಿದೆ ಎಂದು ಹೇಳಿದರು.

ಜಗದೀಶ್‌ ಮನೋವಾರ್ತೆ, ಡಾ.ವಿಜಯಕುಮಾರಿ ಕರಿಕಲ್‌, ಡಾ.ಎನ್‌.ಕೆ.ಲೋಲಾಕ್ಷಿ, ಪ್ರೊ.ಸಿ.ನಾಗಣ್ಣ, ಪ್ರೊ.ಚ.ಸರ್ವಮಂಗಳ, ಪ್ರೊ.ಒ.ಎಲ್‌.ನಾಗಭೂಷಣಸ್ವಾಮಿ, ಡಾ.ಸಂತೋಷಕುಮಾರ್‌ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಜೇಡರ ದಾಸಿಮಯ್ಯ ಅವರ ವಚನಗಳನ್ನು ವಾಚಿಸಿದರು. ಎಚ್‌.ಜನಾರ್ದನ್‌ (ಜನ್ನಿ), ನಿತಿನ್‌ ರಾಜರಾಂ ಶಾಸ್ತ್ರಿ, ದೇವಾನಂದ ವರಪ್ರಸಾದ್‌, ಪ್ರಭುರಾವ್‌ ಸೊನ್ನ, ಶರಧಿ ಪಾಟೀಲ್‌ ವಚನ ಗಾಯನ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಿಚಾರವಾದಿ ಹಿರಿಯ ಕಲಾವಿದ ಎಲ್‌. ಶಿವಲಿಂಗಪ್ಪ, ಕೆ.ಎಸ್‌. ಭಗವಾನ್‌, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ. ಶಿವರಾಂ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್‌ ಇತರರಿದ್ದರು.

ಜಿಲ್ಲೆಯ 72 ಕಾಲೇಜಿಗಳಿಗೆ ಭೇಟಿ: ರಂಗಾಯಣದ ಮಾಜಿ ನಿರ್ದೇಶಕ ಎಚ್‌.ಜನಾರ್ದನ್‌ (ಜನ್ನಿ) ಮಾತನಾಡಿ, ವ್ಯವಸ್ಥೆಯ ದುರುದ್ದೇಶವೇ ವ್ಯವಧಾನ ಕಳೆಯೋದು. ವ್ಯವಧಾನ ಮರುಸೃಷ್ಟಿಸುವುದೇ ಮತ್ತೆ ಕಲ್ಯಾಣದ ಆಶಯ. ವಚನ ಓದು ನಮ್ಮ ಮನವರಿಕೆ ಮಾಡುತ್ತದೆ. ವಾಸ್ತವತೆಯ ಅರಿವೇ ವಚನಗಳಾಗಿವೆ ಎಂದರು. 12ನೇ ಶತಮಾನದ ಕಲ್ಯಾಣದ ಆಶಯವನ್ನು ಮರು ನೆನಪಿಗೆ ತರಲು ಆರಂಭವಾಗಿದ್ದು ಮತ್ತೆ ಕಲ್ಯಾಣ. ಜಿಲ್ಲೆಯ 8 ತಾಲೂಕುಗಳ 72 ಕಾಲೇಜಿಗಳಿಗೆ ಭೇಟಿ ನೀಡಿ ವಚನ ಚಳವಳಿಯ ದರ್ಶನ ಮಾಡಿಸಲಾಗಿದೆ. ವಚನ ಗಾಯನ, ಚಿತ್ರ ರಚನೆ ನಡೆದಿದೆ ಎಂದು ಹೇಳಿದರು.

ವಚನಗಳಿಗೆ ಚಿತ್ರ ರೂಪ: ಮೈಸೂರಿನ ಹಿರಿಯ ಕಲಾವಿದ ಎಲ್‌. ಶಿವಲಿಂಗಪ್ಪ ಅವರು ಮತ್ತೆ ಕಲ್ಯಾಣ ಕಾರ್ಯಕ್ರಮ ಹಿನ್ನೆಲೆ ವಚನ ಸಾಹಿತ್ಯವನ್ನು ಚಿತ್ರ ರೂಪಕ್ಕೆ ಇಳಿಸುವ ಮೂಲಕ ಎಲ್ಲರ ಗಮನ ಸೆಳೆದರು. ವಚನ ಕ್ರಾಂತಿ, ಕಾಯಕ ತತ್ವ, ದಲಿತೋದ್ಧಾರ, ಅನ್ನ-ಅಕ್ಷರ ದಾಸೋಹ, ಸಮಾನತೆ, ಸ್ವಾತಂತ್ರ್ಯ ಮುಂತಾದ ವಿಚಾರಗಳನ್ನೊಳಗೊಂಡ ಹಲವಾರು ಚಿತ್ರಗಳನ್ನು ರಚಿಸಿ ಪ್ರದರ್ಶನಕ್ಕೆ ಇರಿಸಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.