ಕಾರ್ಮಿಕರಿಗೆ ಸುರಕ್ಷತಾ ಸಾಧನ ಕಡ್ಡಾಯಗೊಳಿಸಿ
Team Udayavani, Mar 5, 2020, 3:00 AM IST
ನಂಜನಗೂಡು: ಪ್ರತಿಯೊಬ್ಬರೂ ಸುರಕ್ಷತೆ ಕುರಿತು ಜಾಗೃತಿ ವಹಿಸಿದಾಗ ಮಾತ್ರ ಅವಘಡಗಳು ಕಡಿಮೆಯಾಗಲಿವೆ ಎಂದು ನಂಜನಗೂಡು ಡಿವೈಎಸ್ಪಿ ಪ್ರಭಾಕರ್ ಸಿಂಧೆ ತಿಳಿಸಿದರು. ನಂಜನಗೂಡು ಕೈಗಾರಿಕಾ ಒಕ್ಕೂಟದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸುರಕ್ಷಾತಾ ದಿನಾಚರಣೆ ಪ್ರಯುಕ್ತ ಕೈಗಾರಿಕಾ ಕಚೇರಿ ಮುಂಭಾಗ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಬಹುತೇಕ ಕೈಗಾರಿಕೆಗಳು ಸುರಕ್ಷಾತಾ ಸಲಕರಣೆಗಳನ್ನು ಅಳವಡಿಸಿಕೊಂಡಿರುತ್ತವೆ. ಆದರೆ, ಕಾರ್ಮಿಕರು ಅವುಗಳನ್ನು ಬಳಸುವುದಿಲ್ಲ. ಇಂತಹ ಅಜಾಗುರಕತೆಯೇ ಅವಘಡಗಳಿಗೆ ಕಾರಣವಾಗಲಿದೆ. ಹೀಗಾಗಿ ಎಲ್ಲಾ ಕಾರ್ಮಿಕರು ಸುರಕ್ಷಾತಾ ಸಾಧನಗಳನ್ನು ಧರಿಸಿಯೇ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಮಾಲೀಕರು ಸುರಕ್ಷಾತಾ ಸಾಧನಗಳನ್ನು ಖರೀದಿಸಿರುವುದು ತಮ್ಮ ಕಾರ್ಮಿಕರಿಗಾಗಿ ಎಂಬುದನ್ನು ಅರಿತು ಪ್ರತಿ ಸಮಯದಲ್ಲೂ ಅದನ್ನು ಅವರು ಉಪಯೋಗಿಸುವ ಹಾಗೆ ಕಡ್ಡಾಯ ಗೊಳಿಸಬೇಕು ಎಂದು ಕೈಗಾರಿಕೆಗಳ ಮುಖ್ಯಸ್ಥರಿಗೆ ಕಿವಿ ಮಾತು ಹೇಳಿದರು. ಜ್ಯುಬಲೀಯಟ್ಸ್ ಜನರಿಕ್ ಕೈಗಾರಿಕೆ ಮುಖ್ಯಸ್ಥ ಅನಂತೇಗೌಡ, ಐಟಿಸಿಯ ಧಿಪನ್ ಬಿಸ್ವಾಸ್ ಮತ್ತಿತರರು ಕಾರ್ಮಿಕರು ಹಾಗೂ ಕೈಗಾರಿಕೆಗಳ ಸುರಕ್ಷತೆ ಮತ್ತು ಮುಂಜಾಗ್ರತಾ ವಿಧಾನಗಳ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಒಕ್ಕೂಟದ ಅಧ್ಯಕ್ಷ ಎಂ. ಎಸ್.ರಾಮ್, ಕಾರ್ಯದರ್ಶಿ ಚಂದ್ರಶೇಖರ್ ಸೇರಿದಂತೆ ವಿವಿಧ ಕಾರ್ಖಾನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ