ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ
Team Udayavani, Sep 19, 2020, 8:37 AM IST
ಹುಣಸೂರು: ಬೈಕ್ನಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೋಲೀಸರು ಬಂಧಿಸಿ. 2.ಕೆಜಿ.200 ಗ್ರಾಂ ನಷ್ಟು ಗಾಂಜಾ ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಹೊಸಪೆಂಜಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಚಂದನಗಿರಿ ಹಾಡಿಯ ರವಿ ಎಂಬಾತ ಬೈಕಿನಲ್ಲಿ 300 ಗ್ರಾಂನಷ್ಟು ಗಾಂಜಾ ಸಾಗಿಸುವ ವೇಳೆ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ನೇತೃತ್ವದ ತಂಡ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಸಿ.ಬಿ.ಟಿ.ಕಾಲೋನಿಯ ರಾಜೇಗೌಡ ಎಂಬಾತನಿಂದ ತಂದಿರುವುದಾಗಿ ಮಾಹಿತಿ ನೀಡಿದ್ದ. ರಾಜೇಗೌಡನ ಮನೆ ಮೇಲೆ ಪೊಲೀಸರು ದಾಳಿನಡೆಸಿದ ವೇಳೆ ಒಂದು ಕೆಜಿ 900 ಗ್ರಾಂ ನಷ್ಟು ಹದ ಮಾಡಿದ್ದ ಗಾಂಜಾ ಸಿಕ್ಕಿದೆ.
ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಡಿವೈಎಸ್ ಪಿ ಸುಂದರರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಡಿಯೋ ಮತ್ತು ಪಲ್ಸರ್ ಬೈಕ್ ಢಿಕ್ಕಿ: ಇಬ್ಬರು ಸಾವು, ಇಬ್ಬರಿಗೆ ಗಾಯ
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಬೀರೇಗೌಡ, ಗಣೇಶ, ಶಿವರಾಜ್ ಕುಮಾರ್, ಲಿಖಿತ್, ಮೆಹರಾಜ್, ಮಂಜುನಾಥ, ಎ.ಎಸ್.ಐ. ದೊಡ್ಡೇಗೌಡ, ರಾಘು, ರಮೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?