ಕೋವಿಡ್ 19 ನಿಗಾ ಘಟಕ ಕೇಂದ್ರಕ್ಕೆ ಶಾಸಕ ಎಚ್. ಪಿ. ಮಂಜುನಾಥ್ ಭೇಟಿ
Team Udayavani, May 23, 2021, 9:17 AM IST
ಹುಣಸೂರು: ಬಿಳಿಕೆರೆ ಹೋಬಳಿಯ ಧರ್ಮಪುರ ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹೆಚ್ಚುವರಿಯಾಗಿ ತೆರೆಯಲಾಗಿರುವ ಕೋವಿಡ್ 19 ನಿಗಾ ಘಟಕ ಕೇಂದ್ರಕ್ಕೆ ಶಾಸಕ ಎಚ್ ಪಿ ಮಂಜುನಾಥ್ , ತಹಶೀಲ್ದಾರ್ ಬಸವರಾಜ್ ರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಧರ್ಮಪುರ ವಸತಿ ಶಾಲೆಯಲ್ಲಿ ಹೆಚ್ಚುವರಿಯಾಗಿ ಪುರುಷ ಮತ್ತು ಮಹಿಳೆ ವಿಭಾಗಕ್ಕೆ ಪ್ರತ್ಯೇಕವಾಗಿ (100+ 100) 200 ಹಾಸಿಗೆಯುಳ್ಳ ಕರೋನ ಸೋಂಕಿತರ ನಿಗಾ ಘಟಕ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸೋಂಕಿತರಿಗೆ ಅನುಕೂಲವಾಗುವಂತೆ ಕೇಂದ್ರದಲ್ಲಿ ಅಂಬುಲೆನ್ಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿರಬೇಕು ಎಂದರು.
ಎರಡು ಕೇಂದ್ರಗಳಿಗೆ ಪ್ರತ್ಯೇಕವಾಗಿ ಬಿಸಿ ನೀರು ಕಾಯಿಸುವ ಒಂದು ಲೀ ಸಾಮರ್ಥ್ಯದ 10 ಕ್ಯಾಟಲ್ ಗಳು ಇಪ್ಪತ್ತೈದು ಲೀಟರ್ ಸಾಮರ್ಥ್ಯದ ಬಿಸಿ ಹಾಗೂ ತಣ್ಣಿರು ಶುದ್ಧೀಕರಿಸುವ ಎರಡು ಯಂತ್ರಗಳು , ಇದಲ್ಲದೆ ಬಕೆಟ್ಟು, ಜಗ್ಗು, ಬೆಡ್ ಶೀಟ್ ಗಳು, ಅಡಿಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಅನುಕೂಲ ವಾಗುವಂತೆ ಒಂದು ನೂರು N 95 ಮಾಸ್ಕ್ ಗಳನ್ನು ಕೇಂದ್ರಕ್ಕೆ ನೀಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿ ಎರಡು ಘಟಕದ ಸೋಂಕಿತರಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ಹಾಗೂ ತಾಜಾ ತರಕಾರಿಗಳನ್ನು ತಲುಪಿಸುವಂತೆ ಸ್ಥಳೀಯರಿಗೆ ಜವಾಬ್ದಾರಿ ನೀಡಿದರು.
ನಿಗಾಘಟಕದಲ್ಲೇ ತಯಾರಿಸಿದ ಆಹಾರ ಸೇವನೆ:
ಶಾಸಕ ಎಚ್ ಪಿ ಮಂಜುನಾಥ್ ಸೇರಿದಂತೆ ತಹಸಿಲ್ದಾರ್ ಬಸವರಾಜ್ ಇ.ಒ. ಗಿರೀಶ್ ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್ ಸೇರಿದಂತೆ ಇತರರು ಕೋವಿಡ್ ನಿಗಾ ಘಟಕ ಕೇಂದ್ರದಲ್ಲಿ ಸೋಂಕಿತರಿಗೆ ತಯಾರಿಸಿದ ಬಿಸಿಯೂಟವನ್ನು ಸೇವಿಸಿ ಆಹಾರ ಗುಣಮಟ್ಟವನ್ನು ಪರೀಕ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಣಸೂರು : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ : ಅಡಿಷನಲ್ ಎಸ್.ಪಿ. ಶಿವಕುಮಾರ್
ಸಿದ್ದರಾಮಯ್ಯರನ್ನು ನೋಡಿದರೆ ನನಗೆ ತುಂಬಾ ಕನಿಕರ ಬರುತ್ತದೆ: ಸಿಎಂ ಬೊಮ್ಮಾಯಿ
ಚಾಮುಂಡಿ ಬೆಟ್ಟದಲ್ಲಿರುವವರನ್ನು ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾಪ ಇಲ್ಲ; ಸ್ಪಷ್ಟನೆ
ಹುಣಸೂರು ತಾಲೂಕಿನಲ್ಲಿ ಭಾರಿ ಮಳೆ: ಎರಡು ಮನೆ ಸಂಪೂರ್ಣ ಹಾನಿ
ಪಿರಿಯಾಪಟ್ಟಣ : ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಮುದ್ದೇಬಿಹಾಳ: ಶಿಕ್ಷಕನ ಮೇಲೆ ವಿದ್ಯಾರ್ಥಿನಿಯ ಪೋಷಕರಿಂದ ಗಂಭೀರ ಹಲ್ಲೆ : ಪ್ರಕರಣ ದಾಖಲು
ಡಾ.ಹೆಗ್ಗಡೆ ನಾಮನಿರ್ದೇಶನ ರಾಜ್ಯಕ್ಕೆ ಸಂದ ಗೌರವ : ಸಚಿವ ವಿ.ಸುನೀಲ್ ಕುಮಾರ್
ದಯಾನಿಧಿ ಉಚ್ಚಾಟನೆ ಖಂಡಿಸಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಂದ ಮೋಂಬತ್ತಿ ಮೆರವಣಿಗೆ
ವೀರೇಂದ್ರ ಹೆಗ್ಗಡೆ, ಇಳಯರಾಜ,ವಿಜಯೇಂದ್ರ ಪ್ರಸಾದ್, ಪಿಟಿ ಉಷಾ, ರಾಜ್ಯಸಭೆಗೆ ನಾಮನಿರ್ದೇಶನ
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯಗೆ ಬಂದ ನಿಡಸೋಸಿ ಶ್ರೀ ಕಾರು ಅಪಘಾತ