ಮೋಟರ್‌ ಕೆಟ್ಟರೂ ಕ್ರಮವಿಲ್ಲ: ನೀರಿಗೆ ಅಲೆದಾಟ


Team Udayavani, Aug 5, 2019, 3:00 AM IST

motor-ketta

ಹುಣಸೂರು: ಇಲ್ಲಿನ ಹಾಡಿಯಲ್ಲಿ ಕಳೆದ 15-20 ದಿನಗಳಿಂದ ನೀರಿಲ್ಲದೇ ಆದಿವಾಸಿಗಳು ಪರದಾಡುತ್ತಿದ್ದಾರೆ. ಬೋರ್‌ವೆಲ್‌ನ ಮೋಟರ್‌ ಪಂಪ್‌ ಕೆಟ್ಟು ಹಲವು ದಿನಗಳಾದರೂ ದುರಸ್ತಿಪಡಿಸಿಲ್ಲ. ಹೀಗಾಗಿ ಗಿರಿಜನರು ದೂರದ ಕೃಷಿ ಪಂಪ್‌ಸೆಟ್‌ಗಳಲ್ಲಿ ನೀರು ತರುವುದೇ ನಿತ್ಯ ಕಾಯಕವಾಗಿದೆ. ಆದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಗಿರಿಜನರು ಅವಲತ್ತುಕೊಂಡಿದ್ದಾರೆ.

ಆದಿವಾಸಿಗಳ ಹಾಡಿಗೆಯಲ್ಲಿ ರಸ್ತೆ-ಚರಂಡಿಗೆ ನಿರ್ಮಿಸಲು ಆದ್ಯತೆ ನೀಡುವ ಜನಪ್ರತಿನಿಧಿಗಳು ದೈನಂದಿನ ಬದುಕಿಗೆ ಅಗತ್ಯವಿರುವ ಕುಡಿಯುವ ನೀರೊದಗಿಸಲು ವಿಫಲರಾಗಿರುವುದು ಇಲ್ಲಿನ ಪರಿಸ್ಥಿತಿ ಕೈಗನ್ನಡಿಯಾಗಿದೆ.

ಕೈಕೊಟ್ಟ ಮೋಟರ್‌: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಹೆಜ್ಜೂರು ಹಾಡಿಯ ಗಿರಿಜನರಿಗೆ ನೀರು ಪೂರೈಸುವ ಬೋರ್‌ವೆಲ್‌ ಪಂಪ್‌ ಮೋಟರ್‌ ಸುಟ್ಟು 15 ದಿನ ಕಳೆದಿದ್ದರೂ ದುರಸ್ತಿಪಡಿಸದ‌ ಪರಿಣಾಮ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಗ್ರಾಪಂ ಕ್ರಮ ಕೈಗೊಂಡಿಲ್ಲ. ದೂರು ನೀಡಿದರೆ ಆಗಾಗ್ಗೆ ವಿದ್ಯುತ್‌ ಸಮಸ್ಯೆಯಿಂದ ಹೀಗಾಗುತ್ತಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.

ಬತ್ತಿದ ಬೋರ್‌ವೆಲ್‌: ಈ ಹಾಡಿಯಲ್ಲಿ ನೀರು ಪೂರೈಸುತ್ತಿದ್ದ ಎರಡು ಕೈಪಂಪ್‌ ಅಳವಡಿಸಿರುವ ಬೋರ್‌ವೆಲ್‌ಗ‌ಳಲ್ಲೂ ಸಹ ನೀರು ಬರುತ್ತಿಲ್ಲ. ಮತ್ತೂಂದರಲ್ಲಿ 2 ಗಂಟೆಗೊಮ್ಮೆ ಒಂದು ಬಿಂದಿಗೆ ನೀರು ಬರುತ್ತಿದ್ದದೆ. ಪರಿಸ್ಥಿತಿ ಹೀಗಿದ್ದರೂ ಕೆಟ್ಟಿರುವ ಬೋರ್‌ವೆಲ್‌ ದುರಸ್ತಿಪಡಿಸಿಲ್ಲ.

ವಿದ್ಯುತ್‌ ವ್ಯತ್ಯಯ: ಹಾಡಿಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ನಿತ್ಯ ಕೂಲಿಮಾಡಿ ಜೀವನ ಮಾಡಬೇಕಾದ ಸ್ಥಿತಿ ಇದೆ. ಇದೀಗ ಕೆಲಸ ಬಿಟ್ಟು ಅಕ್ಕಪಕ್ಕದ ಕೃಷಿ ಪಂಪ್‌ಸೆಟ್‌ಗಳಲ್ಲಿ ನೀರು ಹೊತ್ತು ತರುವ ಕಾಯಕ ಮಾಡುವಂತಾಗಿದೆ. ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಿದ್ದರೂ ಈ ಭಾಗದಲ್ಲಿ ಯಾವಾಗಲೂ ವಿದ್ಯುತ್‌ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಕರೆಂಟ್‌ ಇರುವ ವೇಳೆ ನೀರು ಹಿಡಿಯಬೇಕಿದೆ. ಇನ್ನು ಪಂಪ್‌ಸೆಟ್‌ ಹೊಂದಿರುವ ಅಕ್ಕಪಕ್ಕದ ರೈತರು ಮಾನವೀಯತೆ ದೃಷ್ಟಿಯಿಂದ ನೀರು ಕೊಡುತ್ತಿರುವುದರಿಂದ ಹಾಡಿ ಮಂದಿಯ ನೀರಿನ ಸಮಸ್ಯೆ ಅಲ್ಪ ಪರಿಹಾರ ಸಿಕ್ಕಿದೆ.

ನೀರು ಹೊರುವುದೇ ಕಾಯಕ: ಹಾಡಿಯ ಬಹುತೇಕ ಮಂದಿಗೆ ಜಮೀನು ಇಲ್ಲ, ಜೀವನಕ್ಕಾಗಿ ಕೊಡಗಿನ ಕೂಲಿಯನ್ನೇ ಅವಲಂಬಿಸಿದ್ದು, ಬೆಳಗ್ಗೆ ಕೊಡಗಿಗೆ ಹೊರಟರೆ ಬರುವುದು ಮತ್ತೆ ಸಂಜೆಯಾಗುತ್ತದೆ. ಹೀಗಾಗಿ ನೀರು ಹಿಡಿಯುವುದೇ ಈ ಆದಿವಾಸಿಗಳ ನಿತ್ಯದ ಗೋಳಿನ ಕಥೆಯಾಗಿದೆ. ಕೂಡಲೇ ಗ್ರಾಪಂ ಕ್ರಮ ಕೈಗೊಂಡು ಮೋಟರ್‌ ದುರಸ್ತಿಪಡಿಸಿ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗಿರಿಜನರು ಆಗ್ರಹಿಸಿದ್ದಾರೆ.

ನಮ್ಮ ಹಾಡಿಯ ಪಂಪ್‌ಸೆಟ್‌ ಮೋಟರ್‌ ಆಗಾಗ್ಗೆ ಸುಟ್ಟು ಹೋಗುತ್ತಿರುತ್ತದೆ. ಸಕಾಲದಲ್ಲಿ ಸರಿಪಡಿಸಲ್ಲ, ಹೀಗಾಗಿ ನೀರಿಗಾಗಿ ಕೃಷಿ ಪಂಪ್‌ಸೆಟ್‌ಗಳನ್ನು ಅವಲಂಬಿಸಬೇಕಿದೆ. ನಾವು ಆದಿವಾಸಿಗಳೆಂಬ ಕಾರಣಕ್ಕೆ ನಿರ್ಲಕ್ಷ್ಯವಹಿಸುತ್ತಾರೆ. ಈಗಲಾದರೂ ಅಧಿಕಾರಿಗಳು ಹಾಡಿ ಸಮಸ್ಯೆಗೆ ಸ್ಪಂದಿಸಲಿ.
-ಸುಧಾ, ಚಿಕ್ಕಹೆಜ್ಜೂರು ಹಾಡಿ

ಈ ಹಾಡಿಯು ನಾಗರಹೊಳೆ ಉದ್ಯಾನದಂಚಿನಲ್ಲಿದ್ದು, ಪ್ರತಿ ಎರಡು- ಮೂರು ತಿಂಗಳಿಗೊಮ್ಮೆ ಮೋಟರ್‌ ಸುಟ್ಟು ಹೋಗುತ್ತಿದೆ. ದುರಸ್ತಿಗೆ 15-20 ದಿನ ಕಾಯಬೇಕಿದೆ. ಇಲ್ಲಿನ ಎರಡು ಬೋರ್‌ವೆಲ್‌ಗ‌ಳಲ್ಲೂ ನೀರು ಬರಲ್ಲ, ಪಕ್ಕದ ಮುದಗನೂರು ಹೊಸ ಕೆರೆಯಲ್ಲೂ ನೀರಿಲ್ಲ, ಹಾಡಿಯ ಮಹಿಳೆಯರು ಕೆಲಸ ಬಿಟ್ಟು ನೀರಿಗಾಗಿಯೇ ಅಲೆದಾಡುತ್ತಾರೆ. ಬಟ್ಟೆ ಒಗೆಯಲು, ಸ್ನಾನ ಮಾಡಲು ನೀರಿಲ್ಲ. ಇದು ನಿತ್ಯದ ಗೋಳಾಗಿದ್ದು, ಸರಿಪಡಿಸುವವರು ಯಾರೂ ಇಲ್ಲ.
-ದೇವರಾಜ್‌, ಸಾಮಾಜಿಕ ಕಾರ್ಯಕರ್ತ, ಚಿಕ್ಕಹೆಜ್ಜೂರು

ಹಾಡಿಯ ಪಂಪ್‌ಸೆಟ್‌ಗೆ ನೀಡಿರುವ ವಿದ್ಯುತ್‌ ಲೈನ್‌ನಲ್ಲಿ ಆಗಾಗ್ಗೆ ಹೆಚ್ಚು ವಿದ್ಯುತ್‌ ಪ್ರವಹಿಸುವುದರಿಂದ ಮೋಟರ್‌ ಸುಟ್ಟು ಹೋಗುತ್ತಿದೆ. ಮೋಟರ್‌ ದುರಸ್ತಿ ಮಾಡಿಸಿ ನೀರು ನೀಡಲು ಕ್ರಮವಹಿಸಲಾಗುವುದು.
-ಶಿವಣ್ಣ. ದೊಡ್ಡ ಹೆಜ್ಜೂರು ಗ್ರಾಪಂ ಪಿಡಿಒ

* ಸಂಪತ್‌ ಕುಮಾರ್‌

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಚತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Mysore; ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಛತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು

Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು

ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದ ಹುಣಸೂರಿನ ಮಹಿಳೆ ಮೃತ್ಯು… ಆತಂಕದಲ್ಲಿ ಕುಟುಂಬ

ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದ ಹುಣಸೂರಿನ ಮಹಿಳೆ ಮೃತ್ಯು… ಆತಂಕದಲ್ಲಿ ಕುಟುಂಬ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.