ಮೈಸೂರು ದಸರಾ 2017: ಅರಮನೆ ಅಂಗಳಕ್ಕೆ ಗಜಪಯಣ
Team Udayavani, Aug 18, 2017, 6:55 AM IST
ಮೈಸೂರು: ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗುರುವಾರ ಮಧ್ಯಾಹ್ನ ಅಂಬಾರಿ ಆನೆ ಅರ್ಜುನ ನೇತೃತ್ವದ 8 ಆನೆಗಳ ತಂಡವನ್ನು ಅರಮನೆಗೆ ಬರಮಾ ಡಿಕೊಳ್ಳುವುದರೊಂದಿಗೆ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಡಗರ ಆರಂಭವಾಯಿತು.
ಇದೇ ಹೊತ್ತಿನಲ್ಲಿ, ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್ ಉದ್ಘಾಟಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪಪ್ರಕಟಿಸಿದರು. ಸೆಪ್ಟೆಂಬರ್ ಎರಡನೇ ವಾರದಲ್ಲಿ ನಿಸಾರ್ ಅಹಮದ್ ಅವರರಿಗೆ ದಸರಾ ಉದ್ಘಾಟನೆಗೆ ಆಗಮಿಸುವಂತೆ ಅಧಿಕೃತವಾಗಿ ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ದಸರೆ ಎಂಬುದು ಧಾರ್ಮಿಕತೆ, ಜಾತಿ-ಮತ ಎಲ್ಲವನ್ನೂ ಮೀರಿ ದೇಶ-ವಿದೇಶಗಳ ಲಕ್ಷಾಂತರ ಜನರನ್ನು ಸೆಳೆಯುವ ಸಾಂಸ್ಕೃತಿಕ ಮಹಾ ಘಟನೆ.