ಡೀಡ್ ಸಂಸ್ಥೆವತಿಯಿಂದ ಆದಿವಾಸಿ ಹಾಡಿಗಳಲ್ಲಿ 600 ಪಡಿತರ ಕಿಟ್ ವಿತರಣೆ
ಎಲ್ಲರೂ ಲಸಿಕೆ ಪಡೆಯಲು ಡೀಡ್ ಸಂಸ್ಥೆ ನಿರ್ದೇಶಕ ಡಾ.ಶ್ರೀಕಾಂತ್ ಮನವಿ
Team Udayavani, Jun 18, 2021, 3:27 PM IST
ಹುಣಸೂರು: ತಾಲೂಕಿನ ವಿವಿಧ ಹಾಡಿಗಳಲ್ಲಿ ಬದುಕು ಕಟ್ಟಿಕೊಂಡಿರುವ ಜೇನು ಕುರುಬ ಸಮುದಾಯದ ಮಂದಿಗೆ ಡೀಡ್ ಸಂಸ್ಥೆವತಿಯಿಂದ ಪಡಿತರ ಕಿಟ್ ನ್ನು ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ವಿತರಿಸಿದರು.
ಕೋವಿಡ್ ನಿಂದಾಗಿ ಕೊಡಗು ಮತ್ತಿತರ ಕಡೆಗಳಲ್ಲಿ ಕೂಲಿಗೂ ತೆರಳಲಾಗದೆ ಸಂಕಷ್ಟದಲ್ಲಿರುವ ಹುಣಸೂರು ತಾಲೂಕಿನ ಸೋನಹಳ್ಳಿ, ಮಹದೇವಪುರ, ಉದ್ದೂರು, ಬಲ್ಲೇನಹಳ್ಳಿ, ಕಾಳೇನಹಳ್ಳಿ, ಕೊಟ್ಟಿಗೆ ಕಾವಲ್, ಪೆಂಜಳ್ಳಿ, ಮಾದಹಳ್ಳಿ, ದಾಸನಪುರ ಹಾಡಿಗಳ 600 ಜೇನು ಕುರುಬ ಕುಟುಂಬಗಳಿಗೆ ಒಂದು ವಾರಕ್ಕಾಗುವ ಆಹಾರ ಧಾನ್ಯವನ್ನು ವಿತರಿಸಿ ಮಾತನಾಡಿದ ಶ್ರೀಕಾಂತ್, ಕೋವಿಡ್ ಮಹಾಮಾರಿಯಿಂದ ರಕ್ಷಿಸಿಕೊಳ್ಳಬೇಕಾದ ಉಪಾಯಗಳ ಕುರಿತು ಅರಿವು ಮೂಡಿಸಲಾಯಿತು. ಆಯುರ್ವೇದ ಕಾಲೇಜಿನಿಂದ ವಿತರಿಸುವ ಸೋಕು ನಿವಾರಕದ ದ್ರಾವಣದ ಬಾಟಲುಗಳನ್ನು ಪಡೆದು ದಿನಕ್ಕೆ ಎರಡು ಬಾರಿ ಮಾಸ್ಕ್ ಗೆ ಸಿಂಪಡಿಸಿಕೊಂಡಲ್ಲಿ ಸರಾಗವಾಗಿ ಉಸಿರಾಡಬಹುದು, ಇದರಿಂದ ಸೋಂಕು ತಗಲುವ ಸಾಧ್ಯತೆಗಳು ಕಡಿಮೆ ಎಂದರು.
ಇದನ್ನೂ ಓದಿ : ಜಿಂಕೆ ಮಾಂಸ, ಕೊಂಬು ಹಾಗೂ ಜೀವಂತ ಕಾಡುತೂಸು ವಶ : ಆರೋಪಿಗಳು ಪರಾರಿ
ಡೀಡ್ ಸಂಸ್ಥೆಯ ಪ್ರಕಾಶ್ ಮಾತಾನಾಡಿ, ಹೊರಗಿನ ಜನರು ತಮ್ಮ ಹಾಡಿಗಳಿಗೆ ಭೇಟಿ ಕೊಟ್ಟಾಗ ನೀವು ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕುದಿಸಿದ ನೀರಿನ ಹಬೆಯನ್ನು ದಿನಕ್ಕೆ ಎರಡು ಬಾರಿ ತೆಗೆದು ಕೊಳ್ಳಬೇಕು, ಕುಡಿಯಲು ಬಿಸಿ ನೀರು ಬಳಸಿ, ಬಿಸಿಯಾದ ಆಹಾರವನ್ನೇ ಸೇವಿಸುವಂತೆ ಮನವಿ ಮಾಡಿದರು.
ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಜಯಪ್ಪ ಮಾತಾನಾಡಿ, ಈ ಕೋರೋನಾ ಸಂದರ್ಭದಲ್ಲಿ ಕೂಲಿಯೂ ಇಲ್ಲದೇ ಹಸಿವು ಕೊರಾನಾಗಿಂತಲೂ ಹೆಚ್ಚಾಗಿ ನಮ್ಮ ಜನರನ್ನು ಕಾಡುತ್ತಿದ್ದಿರುವ. ಕಷ್ಟದ ಸಮಯದಲ್ಲಿ ದಾನಿಗಳೂ ಕೈ ಜೋಡಿಸುವುದರ ಜೊತೆಗೆ ಭಾರತ ಸರ್ಕಾರದ ಮಹತ್ವಾಂಕಾಂಕ್ಷೆಯೋಜನೆಗಳಲ್ಲೊಂದಾಗಿರುವ ಪೌಷ್ಟಿಕ ಆಹಾರ ವಿತರಿಸುವ ಯೋಜನೆಯನ್ನು ಯೋಜನೆಯನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕೆಂದು ಮನವಿ ಮಾಡಿದರು.
ಕೋವಿಡ್ ನಂತರ ನಂತರದಲ್ಲಿ ಉಗ್ರ ಹೋರಾಟ
ಹುಣಸೂರು ತಾಲೂಕಲ್ಲಿ 1838 ಜೇನುಕುರುಬ ಸಮುದಾಯದ ಕುಟುಂಬಗಳು ಕಾಡಿಂದ ಹೊರಹಾಕಿದ ಮೇಲೆ ಭೂಮಿ ಇಲ್ಲದೇ ಕೂಲಿ ಮಾಡಿ ಬದುಕುತ್ತಿವೆ, ಹೈಕೋರ್ಟ್ ಆದೇಶವಿದ್ದರೂ ಸರ್ಕಾರ ಪುನರ್ವಸತಿ ಕಲ್ಪಿಸದೆ ಸತಾಯಿಸುತ್ತಿರುವುದರಿಂದ ಆದಿವಾಸಿಗಳು ಕೂಲಿಯಿಂದಲೇ ಜೀವನ ನಡೆಸಬೇಕಿದೆ. ಸ್ವಾಭಿಮಾನಿಗಳಾದ ನಾವು ಇಲ್ಲಿಯವರೆಗೆ ಕಾದದ್ದು ಸಾಕು ಇತರರಂತೆ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ಕೋವಿಡ್ ನಂತರ ನಂತರದಲ್ಲಿ ಉಗ್ರ ಹೋರಾಟ ನಡೆಸಲು ಸಹಕಾರ ನೀಡಬೇಕೆಂದರು,
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತಾನಾಡಿ ಕೋವಿಡ್ ಲಸಿಕೆ ಕುರಿತು ಆಲಸ್ಯಬೇಡ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿರೆಂದು ಮನವಿ ಮಾಡಿದರು. ಈ ವೇಳೆ ಆಯಾ ಹಾಡಿಗಳ ಮುಖಂಡರು ಹಾಜರಿದ್ದರು.
ಇದನ್ನೂ ಓದಿ : ಇಲ್ಲಿ ಎಲ್ಲದಕ್ಕೂ “ಅರ್ಥ” ನಮ್ಮ ಇರುವಿಕೆಯನ್ನು ಆಧರಿಸಿರುತ್ತದೆ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ