ಕಪಿಲೆ ಹರಿವು ಏರಿಕೆ: ಸ್ನಾನ, ಮುಡಿ ಸೇವೆ ಸ್ಥಗಿತ
Team Udayavani, Jul 25, 2021, 6:13 PM IST
ನಂಜನಗೂಡು: ಜಲಾಶಯಗಳಿಂದ ಹೆಚ್ಚು ನೀರುಬಿಡು ತ್ತಿರುವುದರಿಂದ ಕಪಿಲಾ ನದಿಯಲ್ಲಿ 45 ಸಾವಿರಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನೀರು ಹರಿವುಮತ್ತಷ್ಟು ಹೆಚ್ಚಾದರೆ ಪ್ರವಾಹ ಎದುರಾಗುವಸಾಧ್ಯತೆ ಇದೆ. ಶ್ರೀ ಕಂಠೇಶ್ವರನ ಸನ್ನಿಧಿಯ ಸ್ನಾನಘಟ್ಟದಲ್ಲಿ ನೀರುಹೆಚ್ಚು ಆವರಿಸಿರುವುದರಿಂದ ಭಕ್ತರಿಗೆ ಸ್ನಾನ ಹಾಗೂಮುಡಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಶನಿವಾರ ಗುರು ಪೂರ್ಣಿಮಿ ಹಿನ್ನೆಲೆಯಲ್ಲಿ ದೇಗುಲಕ್ಕೆ ಆಗಮಿಸಿದ್ದ ಭಕ್ತರು ಕಪಿಲಾ ನದಿಯ ಸ್ನಾನ ಘಟ್ಟದಲ್ಲಿಮಿಂದೇಳಲಾರದೆ ಪರದಾಡಿದರು.
ನಿರ್ಬಂಧ: ದೇವಾಲಯದ ಎದುರಿನ ಕಪಿಲಾಸ್ನಾನಘಟ್ಟದಲ್ಲಿ ನದಿಗಿಳಿಯುವುದನ್ನು ತಾಲೂಕು ಆಡಳಿತಹಾಗೂ ದೇವಾಯದ ಅಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ. ಜೊತೆಗೆ ಮುಡಿ ಸೇವೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಒಂದು ವೇಳೆ ಮುಡಿಗೆ ಅವಕಾಶ ನೀಡಿದರೆ ಕಪಿಲೆ ನದಿಗೆ ಇಳಿಯುತ್ತಾರೆ ಎಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಡಿಕಟ್ಟೆಯನ್ನುತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ನಿರ್ಬಂಧದ ನಡುವೆಯೂ ಭಕ್ತರು ನದಿ ಆಚೆ ಹೆಜ್ಜಿಗೆಬದಿಯ ದಡಕ್ಕೆ ತೆರಳಿ ಸ್ನಾನ ಮಾಡಿ ದೇಗುಲಕ್ಕೆಆಗಮಿಸಿ, ದೇವರ ದರ್ಶನ ಪಡೆದರು.ಕಪಿಲೆ ನೀರು ಐತಿಹಾಸಿಕ ಪರುಶರಾಮ ದೇವಾಲಯವನ್ನು ಸುತ್ತುವರಿಯಲಾರಂಭಿಸಿದೆ. ಈಗಾಗಲೇ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಿಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ