ಮೈಸೂರು: 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
Team Udayavani, Feb 29, 2020, 2:50 PM IST
ಮೈಸೂರು: ನಂಜನಗೂಡಿನಲ್ಲಿ ನಡೆಯುತ್ತಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕುವೆಂಪು ಪುತ್ರಿ, ಕವಯತ್ರಿ ತಾರಿಣಿ ಚಿದಾನಂದಗೌಡ ಉದ್ಘಾಟಿಸಿದರು.
ಬಳಿಕ ಮಾತನಾಡಿ ಅವರು, ತಾವು ಮೊದಲ ಬಾರಿಗೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದನ್ನು ಮೆಲುಕು ಹಾಕಿದರು.
ಸಂಸದ ಶ್ರೀನಿವಾಸಪ್ರಸಾದ್, ಶಾಸಕ ಹರ್ಷವರ್ಧನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ ಮತ್ತಿತರರು ಇದ್ದರು. ಸಮ್ಮೇಳನದ ಅಧ್ಯಕ್ಷತೆ ಜಾನಪದ ವಿದ್ವಾಂಸರಾದ ಟಿ.ಎಸ್.ರಾಜಪ್ಪ ವಹಿಸಿದ್ದಾರೆ.