ನಂಜನಗೂಡು: ನೀರಾವರಿ ಇಲಾಖೆ ಕಾಮಗಾರಿಗೆ ರೈತರ ತಡೆ
ಕಳಪೆ ಕಾಮಗಾರಿ ಆರೋಪ
Team Udayavani, Jul 10, 2022, 8:16 PM IST
ನಂಜನಗೂಡು : ಇಲ್ಲಿನ ಕಳಲೆ ಬಳಿ ನೀರಾವರಿ ಇಲಾಖೆಯಿಂದ ನಡೆಯುತ್ತಿದ್ದ ಕಾಮಗಾರಿ ಕಳಪೆ ಎಂದು ಆರೋಪಿಸಿ ಕಳಲೆ ಗ್ರಾಮದ ರೈತರು ಹಾಗೂ ತಾಲೂಕು ರೈತ ಸಂಘದ ಅದ್ಯಕ್ಷ ಸತೀಶ ರಾವ್ ನೆತ್ರತ್ವದಲ್ಲಿ ಭಾನುವಾರ ಕಾವೇರಿ ನೀರಾವರಿ ನಿಗಮದಿಂದ ತಡೆ ಹಾಕಿ ಕಾರ್ಮಿಕರನ್ನು ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಜಿಟಿಜಿಟಿ ಮಳೆಯಲ್ಲಿಯೂ ಕೋತ್ಯಂತರ ರೂ ಮೊತ್ತದ ಕಾಮಗಾರಿ ನಡೆಸಲಾಗುತ್ತಿತ್ತು. ಸ್ಥಳದಲ್ಲಿ ಇಂಜಿನಿಯರ್ ಹಾಗೂ ಗುತ್ತಿಗೆದಾರ ಕಂಡು ಬರಲಿಲ್ಲ. ಈ ಕುರಿತು ರೈತರು ಆಕ್ರೋಶ ಹೊರ ಹಾಕಿದರು.
ಸ್ಥಳದಲ್ಲಿ ಕಾಮಗಾರಿಯ ವಿವರವೂ ಇಲ್ಲ, ಸಿಮೆಂಟೂ ಇಲ್ಲ, ಪ್ರತಿ ಮೀಟರ್ ಗೆ 3 .5 ಕೆ.ಜಿ ಉಪಯೋಗಿಸಬೇಕಾದ ಕಡೆ ಒಂದು ಕೆಜಿ ಕಬ್ಬಿಣವನ್ನು ಬಳಸಲಾಗಿದೆ. ಈ ಕಾಮಗಾರಿ ಎಷ್ಟು ದಿನ ಉಳಿಯಬಹುದು ಎಂದು ರೈತರು ಪ್ರಶ್ನಿಸಿದರು.