ಕೋವಿಡ್ ಸೋಂಕನ್ನು ಹೊರದೇಶದಿಂದ ತಂದಿದ್ದು ನರೇಂದ್ರ ಮೋದಿ: ಧ್ರುವನಾರಾಯಣ್
Team Udayavani, Jul 4, 2021, 1:21 PM IST
ಮೈಸೂರು: ಕೋವಿಡ್ 19 ಸೋಂಕನ್ನು ಹೊರದೇಶದಿಂದ ತಂದಿದ್ದು ಇದೇ ನರೇಂದ್ರ ಮೋದಿ. ಅಮೆರಿಕ ಅಧ್ಯಕ್ಷರನ್ನು ಗುಜರಾತ್ ಗೆ ಆಹ್ವಾನಿಸಿ ಕೋವಿಡ್ ಹಬ್ಬಿಸಿದ್ದು ಮೋದಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಟೀಕಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಬೇರೆ ರೀತಿಯಲ್ಲಿ ಚುನಾವಣಾ ಪ್ರಚಾರ ಮಾಡಬಹುದಿತ್ತು. ಆದರೆ ತಜ್ಞರು ವರದಿ ನೀಡಿದ್ದರೂ ಪಶ್ಚಿಮ ಬಂಗಾಳದಲ್ಲಿ ರ್ಯಾಲಿ ಮಾಡಿದರು. ತಬ್ಲಿಘಿಗಳ ಸಭೆಯಿಂದ ಕೋವಿಡ್ ಆವರಿಸಿತು ಎಂದರು. ಆದರೆ ಲಕ್ಷಾಂತರ ಮಂದಿ ಸೇರಿಸಿ ಕುಂಭಮೇಳ ಮಾಡಿದರು. ಕೇಂದ್ರದ ಬೇಜವಬ್ದಾರಿಯಿಂದ ಕೋವಿಡ್ ಹೆಚ್ಚಾಯಿತು ಎಂದರು.
ಕೋವಿಡ್ ಸೋಂಕಿನಿಂದ ಇಡೀ ದೇಶದಲ್ಲಿ ಮೂರುವರೆ ಲಕ್ಷ ಜನ ಸಾವನ್ನಪ್ಪಿದ್ದಾರೆ. ದೇಶದ ಈ ದೊಡ್ಡ ಅನಾಹುತಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಇದನ್ನೂ ಓದಿ:ಮಲ್ಲೇಶ್ವರಂ ಕ್ಷೇತ್ರದಲ್ಲಿ ಲಸಿಕಾ ಅಭಿಯಾನ ತ್ವರಿತಗೊಳಿಸಲು ಅಶ್ವತ್ಥ ನಾರಾಯಣ ಒತ್ತು
ಸರ್ವಾಧಿಕಾರಿ ಮನೋಭಾವ ಇರುವ ಪ್ರಧಾನಿಯನ್ನ ಎಂದೂ ನೋಡಿಲ್ಲ ಎಂದು ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಕಿಡಿಕಾರಿದರು
ದುರಂಕಾರ, ಮಾಹಿತಿ ಕೊರತೆಗೆ ಲಸಿಕೆ ಇಲ್ಲ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆಗೆ ಪ್ರತಿಕ್ರಿಯಿಸಿ, ದುರಾಹಂಕಾರ, ಮಾಹಿತಿ ಕೊರತೆ ಇರುವ ಪ್ರಧಾನಿ ಮೋದಿಗೆ ಮೊದಲು ಲಸಿಕೆ ಕಂಡುಹಿಡಿದು ನೀಡಿ ಎಂದು ಪ್ರಹ್ಲಾದ್ ಜೋಷಿಗೆ ಆರ್.ಧ್ರುವನಾರಾಯಣ್ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
MUST WATCH
ಹೊಸ ಸೇರ್ಪಡೆ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್