ನಿಮ್ಮಿಂದ ವಿದ್ಯಾದಾನ ಅಭಿಯಾನಕ್ಕೆ ಕೈಜೋಡಿಸಿ

ಪುಸ್ತಕ ಖರೀದಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ನೆರವಾಗಬಹುದು

Team Udayavani, Jul 4, 2022, 2:18 PM IST

tdy-13

ಮೈಸೂರು: ಪರಿಸರ ಕಾಳಜಿ ಹಾಗೂ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದೊಂದಿಗೆ ಭಾರತೀಯ ಜೈನ್‌ ಸಂಘಟನೆ ನಿಮ್ಮಿಂದ ವಿದ್ಯಾದಾನ ಎಂಬ ಅಭಿಯಾನವನ್ನು ಮತ್ತೆ ಆರಂಭಿಸಿದ್ದು, ಆಸಕ್ತರು ತಾವು ಬಳಸಿದ ಪಠ್ಯಪುಸ್ತಕಗಳನ್ನು ನೀಡುವ ಮೂಲಕ ವಿದ್ಯಾ ದಾನಿಗಳಾಗಬಹುದು.

ಪಿಯುಸಿ, ಪದವಿ ಶಿಕ್ಷಣ ಹಾಗೂ ಎಂಜಿನಿಯರಿಂಗ್‌, ವೈದ್ಯಕೀಯ ಶಿಕ್ಷಣ ಪೂರೈಸಿದವರು, ತಾವು ಬಳಸಿದ ಪಠ್ಯ ಪುಸ್ತಕಗಳನ್ನು ಮನೆಯ ಮೂಲೆಗೆ ಎಸೆಯದೆ ಅಥವಾ ತೂಕಕ್ಕೆ ಹಾಕದೆ ದಾನ ನೀಡುವ ಮೂಲಕ ಪುಸ್ತಕ ಖರೀದಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ನೆರವಾಗಬಹುದು. ಅದಕ್ಕಾಗಿ ಭಾರತೀಯ ಜೈನ್‌ ಸಂಘಟನೆ ನಿಮ್ಮಿಂದ ವಿದ್ಯಾದಾನ ಅಭಿಯಾನ ಆರಂಭಿಸಿದ್ದು, ನಗರದ ಮೂರು ಕೇಂದ್ರಗಳಲ್ಲಿ ಪುಸ್ತಕ ಸಂಗ್ರಹಕ್ಕೆ ಮುಂದಾಗಿದೆ.

ನೀವೂ ಪುಸ್ತಕ ನೀಡಬಹುದು: ಕೊರೊನಾ ಹಿನ್ನೆಲೆ ಕಳೆದರೆಡು ವರ್ಷಗಳಿಂದ ಸ್ಥಗಿತವಾಗಿದ್ದ ನಿಮ್ಮಿಂದ ವಿದ್ಯಾದಾನ ಅಭಿಯಾನವನ್ನು ಜೈನ್‌ ಸಂಘಟನೆ ಈ ಬಾರಿ ಮತ್ತೆ ಆರಂಭಿಸಿದೆ. ನಗರದ ಎಂಜಿ ರಸ್ತೆಯಲ್ಲಿರುವ ಥೇರಾಪಂತ್‌ ಭವನ, ಇಟ್ಟಿಗೆಗೂಡು ಬಳಿಯ ಕುಂತುನಾಥ ಭವನ, ಹಳ್ಳದಕೇರಿಯ ಸ್ಥಾನಿಕ್‌ ಭವನದಲ್ಲಿ ಜು.03, 10, 17 ಮತ್ತು 24 ರಂದು ಪ್ರತಿ ಭಾನುವಾರ ಬೆಳಗ್ಗೆ 9.30ರಿಂದ 2ರವರೆಗೆ ಪುಸ್ತಕ ಸಂಗ್ರಹ ಮತ್ತು ವಿತರಣೆ ಕಾರ್ಯವನ್ನು ಮಾಡಲಿದೆ. ಆಸಕ್ತರು ಪ್ರಥಮ, ದ್ವಿತೀಯ ಪಿಯುಸಿ ಶಿಕ್ಷಣ ಪೂರೈಸಿದವರು ಅಥವಾ ಪದವಿ ಸೇರಿದಂತೆ ಇತರೆ ಉನ್ನತ ಶಿಕ್ಷಣ ಪೂರ್ಣಗೊಳಿಸಿದವರು ಭಾರತೀಯ ಜೈನ್‌ ಸಂಘಟನೆಗೆ ಪುಸ್ತಕಗಳನ್ನು ನೀಡಬಹುದಾಗಿದೆ.

ಅಭಿಯಾನದ ಹಿಂದಿದೆ ಪರಿಸರ ಪ್ರೀತಿ: ಪುಸ್ತಕಕ್ಕೆ ಬಳಸುವ ಕಾಗದವನ್ನು ಮುದ್ರಿಸಲು ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಸಹಜವಾಗಿಯೇ ಪರಿಸರಕ್ಕೆ ಹಾನಿಯಾಗಲಿದೆ. ಇದನ್ನು ಮನಗಂಡ ಭಾರತೀಯ ಜೈನ್‌ ಸಂಘಟನೆ ಮಕ್ಕಳು ವಿದ್ಯಾಭ್ಯಾಸ ಮುಗಿಸಿದ ಮೇಲೆ ಪಠ್ಯಪುಸ್ತಕಗಳನ್ನು ತೂಕಕ್ಕೆ ಹಾಕುವುದು ಅಥವಾ ಮೂಲೆಗೆ ಎಸೆಯುವುದು ಸಾಮಾನ್ಯ. ಇದರಿಂದ ಈ ಪುಸ್ತಕಗಳು ಮರುಬಳಕೆಯಾಗುವುದಿಲ್ಲ. ಹಾಗಾಗಿ ಬಳಸಿದ ಪುಸ್ತಕಗಳ ಮರುಬಳಕೆಗೆ ನಿಮ್ಮಿಂದ ವಿದ್ಯಾದಾನ ಎಂಬ ಅಭಿಯಾನ ಆರಂಭಿಸಿ, ವಿದ್ಯಾಭ್ಯಾಸ ಪೂರೈಸಿದವರಿಂದ ಪುಸ್ತಕ ಪಡೆದು, ಪುಸ್ತಕ ಕೊಳ್ಳಲಾಗದವರಿಗೆ ವಿತರಿಸುತ್ತಿದೆ. ಈ ಮೂಲಕ ಹೊಸ ಪುಸ್ತಕಗಳಿಗೆ ಬೇಕಾಗುವ ಹಾಳೆಗಳಿಗೆ ಮರ ಕಡಿಯುವುದು ತಪ್ಪಲಿದೆ ಎಂಬುದು ಸಂಘಟನೆಯ ಅಭಿಮತ.

ಭಾರತೀಯ ಜೈನ್‌ ಸಂಘಟನೆ 2017ರಲ್ಲಿ ಆರಂಭಿಸಿದ ನಿಮ್ಮಿಂದ ವಿದ್ಯಾದಾನ ಅಭಿಯಾನದಿಂದ ಪಿಯುಸಿ, ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆಯುತ್ತಿ ರುವ ನೂರಾರು ಬಡ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳು ಉಚಿತವಾಗಿ ಲಭ್ಯವಾಗುತ್ತಿವೆ.

ಪುಸ್ತಕ ವಿತರಣೆ ಹೇಗೆ: ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶಾತಿ ಪಡೆಯುವ ಸಂದರ್ಭ ಜೈನ್‌ ಸಂಘಟನೆ ಆಯಾಯ ಕಾಲೇಜುಗಳಿಗೆ ಭೇಟಿ ನೀಡಿ, ಬಡವರು, ಪುಸ್ತಕ ಖರೀದಿಸಲು ಸಾಧ್ಯವಾಗದವರನ್ನು ಗುರುತಿಸಿ ಆಹ್ವಾನಿಸುತ್ತದೆ. ಬಳಿಕ ಬುಕ್‌ ಬ್ಯಾಂಕ್‌ಗೆ ಭೇಟಿ ನೀಡುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಅಗತ್ಯವಿರುವ ಪುಸ್ತಕಗಳನ್ನು ಆರಿಸಿಕೊಳ್ಳಬಹುದು. ಈ ವೇಳೆ ಆಧಾರ್‌ ಕಾರ್ಡ್‌ ಪ್ರತಿ ಮತ್ತು ಕಾಲೇಜಿನ ಪ್ರಾಂಶುಪಾಲರ ಸಹಿ ಇರುವ ಅಂಕಪಟ್ಟಿ ಪ್ರತಿ ನೀಡಬೇಕು. ಹೀಗೆ ಪುಸ್ತಕ ಪಡೆದವರು ವರ್ಷದ ಬಳಿಕ ಆ ಪುಸ್ತಕಗಳನ್ನು ವಾಪಾಸ್‌ ನೀಡಿ ಮುಂದಿನ ವರ್ಷಕ್ಕೆ ಬೇಕಾಗುವ ಪುಸ್ತಕಗಳನ್ನು ಪಡೆದುಕೊಳ್ಳುತ್ತಾರೆ. 2017ರಲ್ಲಿ ಆರಂಭವಾದ ಈ ಅಭಿಯಾನದಿಂದ ನಗರದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲ ವಾಗಿದ್ದು, 2017, 18 ಮತ್ತು 19ರ ಶೈಕ್ಷಣಿಕ ವರ್ಷದಲ್ಲಿ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಸಂಗ್ರವಾಗಿದ್ದು, 7 ಸಾವಿರ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಸಂಘಟನೆ ಪತ್ರಿಕೆಗೆ ತಿಳಿಸಿದೆ.

ಪರಿಸರ ಕಾಳಜಿಯೊಂದಿಗೆ ಬಳಸಿದ ಪುಸ್ತಕಗಳನ್ನು ಎಸೆಯದೆ ಅಗತ್ಯವಿರುವವರಿಗೆ ತಲುಪಿಸಲು ಭಾರತೀಯ ಜೈನ್‌ ಸಂಘಟನೆ ನಿಮ್ಮಿಂದ ವಿದ್ಯಾದಾನ ಅಭಿಯಾನ ಆರಂಭಿಸಿ 10 ಸಾವಿರಕ್ಕೂ ಹೆಚ್ಚು ಪುಸ್ತಗಳನ್ನು ಸಂಗ್ರಹಿಸಿದೆ. ಜೊತೆಗೆ 7 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದೇವೆ. ಈ ಮೂಲಕ ಮಕ್ಕಳಲ್ಲಿ ಶೇರಿಂಗ್‌ ಮನೋಭಾವ ಹೆಚ್ಚಲು ಸಹಕಾರಿಯಾಗಲಿದೆ. – ಜೈನ್‌ ಪ್ರಕಾಶ್‌ ಗುಲೇಚ, ಅಧ್ಯಕ್ಷ ಭಾರತೀಯ ಜೈನ್‌ ಸಂಘಟನೆ

 

-ಸತೀಶ್‌ ದೇಪುರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.