ಪಿರಿಯಾಪಟ್ಟಣ : ಶಾಲಾ ವಾಹನ ಢಿಕ್ಕಿ ಹೊಡೆದು ಒಂದುವರೆ ವರ್ಷದ ಮಗು ಸ್ಥಳದಲ್ಲೇ ಸಾವು
ಶಾಲಾ ಬಸ್ಸಿನಲ್ಲಿ ಬರುತ್ತಿದ್ದ ಅಣ್ಣನನ್ನು ಕರೆತರಲು ತಂದೆಯ ಜೊತೆ ಹೋಗಿದ್ದಾಗ ಘಟನೆ
Team Udayavani, Jul 2, 2022, 8:44 PM IST
ಪಿರಿಯಾಪಟ್ಟಣ : ಶಾಲಾ ವಾಹನ ಢಿಕ್ಕಿ ಹೊಡೆದ ಪರಿಣಾಮ ಒಂದುವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.
ತಾಲ್ಲೂಕಿನ ಹಡಗನಹಳ್ಳಿ ಗ್ರಾಮದ ಸಾಧಿಕ್ ಅಹಮದ್ ರವರ ಪುತ್ರ ಮಹಮದ್ ಅದಂ ಮೃತಪಟ್ಟ ಬಾಲಕನಾಗಿದ್ದಾನೆ. ಈತ ಶನಿವಾರ ಮಧ್ಯಾಹ್ನ 1.45 ರ ಸಮಯದಲ್ಲಿ ಸಾಧಿಕ್ ಅಹಮದ್ ಅಣ್ಣ ಸಿದ್ದಿಕ್ ಅಹಮದ್ ಎಂಬುವವರ ಮಗ ಜೂಹರಾನ್ ಎಂಬಾತ ತಾಲ್ಲೂಕಿನ ಬೆಟ್ಟದಪುರ ಎಸ್ಎಂಎಸ್ ಕಾನ್ವೆಂಟ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಶನಿವಾರ ಮಾರ್ನಿಂಗ್ ಕ್ಲಾಸ್ ಆಗಿದ್ದರಿಂದ ಶಾಲಾ ವಾಹನವು 1.45 ರ ಸಮಯಕ್ಕೆ ಹಡಗನಹಳ್ಳಿ ಗ್ರಾಮದ ಪಂಚಾಯಿತಿ ಮುಂಭಾಗ ವಿದ್ಯಾರ್ಥಿ ಜೂಹರಾನ್ ಎಂಬಾತ ಶಾಲಾ ಬಸ್ ನಿಂದ ಇಳಿದಿದ್ದಾನೆ.
ಆ ಸಂದರ್ಭದಲ್ಲಿ ಅಣ್ಣನನ್ನು ನೋಡುತ್ತ ನಿಂತಿದ್ದ ಬಾಲಕ ಮಹಮದ್ ಅದಂ ನಿಂತಿದ್ದನ್ನು ನೋಡದ ಚಾಲಕ ಬಸ್ ಎಡಗಡೆ ನಿಂತಿದ್ದನ್ನು ಮಗುವನ್ನು ಗಮನಿಸಿದೆ ತನ್ನ ಅಜಾಗರುಕತೆಯಿಂದ ಮಗುವಿಗೆ ಢಿಕ್ಕಿ ಹೊಡೆದಿದ್ದಾನೆ ಇದರಿಂದ ಮಗು ಸ್ಥಳದಲ್ಲೇ ಮೃತಪಟ್ಟಿದ್ದು ಈ ಬಗ್ಗೆ ಮಗುವಿನ ತಂದೆ ಬೆಟ್ಟದಪುರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಇದನ್ನೂ ಓದಿ : ಗಂಗಾವತಿ: ಅಶಾಂತಿಗೆ ಯತ್ನಿಸುವ ರೌಡಿಶೀಟರ್ಗಳಿಗೆ ಪೋಲೀಸರ ವಾರ್ನಿಂಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ