ಜೆಡಿಎಸ್ ಶಾಸಕ ಪುತ್ರ ಪ್ರಸನ್ನ ಗೆ ಮೈಮುಲ್ ಹೊಣೆ
Team Udayavani, Mar 31, 2021, 3:50 PM IST
ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಒಕ್ಕೂಟದ (ಮೈಮುಲ್) ಅಧ್ಯಕ್ಷರಾಗಿ ಪಿರಿಯಾಪಟ್ಟಣ ಜೆಡಿಎಸ್ ಶಾಸಕಕೆ.ಮಹದೇವ್ ಅವರ ಪುತ್ರ ಪಿ.ಎಂ.ಪ್ರಸನ್ನ ಅರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆಗೆ ಮಂಗಳವಾರ ಕೊನೆ ಗಳಿಗೆಯಲ್ಲಿಪ್ರಸನ್ನ ನಾಮಪತ್ರ ಸಲ್ಲಿಸಿದ್ದರು.
ಬೇರೆ ಯಾರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಕಾರಣ, ಚುನಾವಣಾ ಅಧಿಕಾರಿಗಳು ಪ್ರಸನ್ನ ಅರೋಧವಾಗಿ ಅಧ್ಯಕ್ಷ ಸ್ಥಾನಕ್ಕೆಆಯ್ಕೆಯಾಗಿದ್ದಾರೆ ಎಂದು ಘೋಸಿದರು. ಪ್ರಸನ್ನ ಶಾಸಕ ಜಿ.ಟಿ. ದೇವೇಗೌಡ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಅಧ್ಯಕ್ಷರಾಗಿ ಆಯ್ಕೆಯಾದಬಳಿಕ ಮಾತನಾಡಿದ ಪ್ರಸನ್ನ, ನಾನು ಜೆಡಿಎಸ್ ಪಕ್ಷದ ಬೆಂಬಲಿತಮೈಮುಲ್ ಅಧ್ಯಕ್ಷ. ನಮ್ಮ ನಾಯಕರು ಎಚ್.ಡಿ.ಕುಮಾರಸ್ವಾಮಿ. ಸದ್ಯದಲ್ಲೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ಮೈಮುಲ್ ಅಧ್ಯಕ್ಷನಾಗುತ್ತೇನೆ ಎನ್ನುವ ನಿರೀಕ್ಷೆ ನನಗೆ ಇತ್ತು. ಹಿರಿಯನಿರ್ದೇಶಕರ ಸಹಕಾರದಿಂದ ಈ ಪಟ್ಟ ಸಿಕ್ಕಿದೆ. ನಮ್ಮಲ್ಲಿ ಯಾವುದೇಅಸಮಾಧಾನ, ಬೇಸರ ಇಲ್ಲ. ಎಲ್ಲರ ಒಮ್ಮತದ ಅಭಿಪ್ರಾಯದಿಂದ ನಾನುಅಧ್ಯಕ್ಷನಾಗಿದ್ದೇನೆ. ಹಾಲು ಉತ್ಪಾದಕರನ್ನು ಉಳಿಸಬೇಕು. ಮೈಮುಲ್ನ್ನುಅಭಿವೃದ್ಧಿಪಡಿಸಬೇಕು ಎಂಬುದೇ ನನ್ನ ಗುರಿ. ಮೈಮುಲ್ ಅಭಿವೃದ್ಧಿಗೆನಾನು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಇವುಗಳನ್ನು ಮುಂದಿನದಿನಗಳಲ್ಲಿ ಕಾರ್ಯರೂಪಕ್ಕೆ ತರುತ್ತೇನೆ ಎಂದು ಹೇಳಿದರು.
ಮೈಮುಲ್ ಆಡಳಿತ ಮಂಡಳಿಯಲ್ಲಿ ಚುನಾಯಿತ 15 ಮಂದಿಸೇರಿದಂತೆ ಒಟ್ಟು 20 ನಿರ್ದೇಶಕರು ಇದ್ದಾರೆ. ಇದರಲ್ಲಿ 12 ನಿರ್ದೇಶಕರುಜಿ.ಟಿ.ದೇವೇಗೌಡ ಬಣದಲ್ಲಿ ಗುರುತಿಸಿಕೊಂಡಿರುವುದರಿಂದ ಈ ಬಣಕ್ಕೆಬಹುಮತವಿತ್ತು. ಅಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ಅವರನ್ನು ಕಣಕ್ಕಿಳಿಸುವ ಸಂಬಂಧಸೋಮವಾರ ರಾತ್ರಿಯೇ ಜಿ.ಟಿ.ದೇವೇಗೌಡರು ನಿರ್ಧಾರತೆಗೆದುಕೊಂಡಿದ್ದರು. ಹೀಗಾಗಿ ಎರಡನೇ ಬಾರಿ ನಿರ್ದೇಶಕರಾಗಿಆಯ್ಕೆಯಾಗಿರುವ ಪ್ರಸನ್ನ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ತಮ್ಮ ಬಣದ ಎಚ್.ಡಿ.ಕೋಟೆಯಕೆ.ಈರೇಗೌಡ, ಹುಣಸೂರಿನ ಕೆ.ಎಸ್.ಕುಮಾರ್, ಕೆ.ಆರ್.ನಗರದಎ.ಟಿ.ಸೋಮಶೇಖರ್ ಅವರ ಮನವೊಲಿಸುವಲ್ಲಿ ಜಿ.ಟಿ.ದೇವೇಗೌಡರುಯಶಸ್ವಿಯಾದ ಹಿನ್ನೆಲೆಯಲ್ಲಿ ಅನಾಯಾಸವಾಗಿ ಅಧ್ಯಕ್ಷ ಸ್ಥಾನ ಪ್ರಸನ್ನಅವರಿಗೆ ಒಲಿದು ಬಂದಿದೆ. ಇದರೊಂದಿಗೆ ಜಿ.ಡಿ.ದೇವೇಗೌಡರ ಬಣಮತ್ತೆ ಐದು ವರ್ಷಗಳ ಅವಧಿಗೆ ಮೈಮುಲ್ ಅಧಿಕಾರದ ಚುಕ್ಕಾಣಿಹಿಡಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ