ಅಕ್ಕಿ ನಮ್ಮದು ಎಂದಿರಿ, ಯಾಕೆ ಕಡಿಮೆ ಕೊಡುತ್ತೀರಿ.. : ವರುಣದಲ್ಲಿ ಪ್ರತಾಪ್ ಸಿಂಹಗೆ ತರಾಟೆ
Team Udayavani, Apr 21, 2023, 12:57 PM IST
ಮೈಸೂರು: ವರುಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಕೆಲ ಮತದಾರರು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆದಿದೆ.
ವಿ. ಸೋಮಣ್ಣ ಪರ ಮತ ಕೇಳಲು ಹೋಗಿದ್ದ ಪ್ರತಾಪ್ ಸಿಂಹ ಅವರಿಗೆ ಪ್ರಶ್ನೆಗಳನ್ನು ಕೇಳಿ ಮುಜುಗರ ಉಂಟು ಮಾಡಿದರು.
ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನೇ ಬದಲು ಮಾಡುತ್ತೇನೆ ಎನ್ನುತ್ತೀರಿ, ನಾವು ಬಂದಿದ್ದೆ ಸಂವಿಧಾನದ ಬದಲಾವಣೆ ಮಾಡಲೆಂದು ಬಿಜೆಪಿ ಅವರು ಹೇಳಿದ್ದಿರಿ. ನಾವು ಯಾಕೆ ಬೆಂಬಲ ನೀಡಬೇಕು? ಎಂದರು.
ಇದನ್ನೂ ಓದಿ:ಪಕ್ಷದಲ್ಲೇ ಇರುತ್ತೇನೆ, ಬಿಜೆಪಿ ನಗರ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ಮಾಡಲ್ಲ: ಪಟ್ಟಣಶಟ್ಟಿ
ಅಕ್ಕಿ ನಮ್ಮದು ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದು ಎನ್ನುತ್ತೀರಿ, ಈಗ ಯಾಕೆ ಅಕ್ಕಿ ಕಡಿಮೆ ಕೊಡುತ್ತಿದ್ದೀರಿ, ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು ಎನ್ನುತ್ತೀರಿ. ಸಿದ್ದರಾಮಯ್ಯ ಅವರ ಹತ್ತಿರ ಕುಳಿತುಕೊಳ್ಳಿ ಗೊತ್ತಾಗುತ್ತದೆ. ಸಂಸದ ಶ್ರೀನಿವಾಸ್ ಪ್ರಸಾದ್ ಇದುವರೆಗೂ ಕ್ಷೇತ್ರಕ್ಕೆ ಬಂದೇ ಇಲ್ಲ. ಮಹದೇವಪ್ಪ ವಿರುದ್ಧ ಮಾತನಾಡುತ್ತೀರಿ ಎಂದು ಪ್ರತಾಪ್ ಸಿಂಹಗೆ ತರಾಟೆಗೆ ತೆಗೆದುಕೊಂಡರು.