ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
Team Udayavani, Mar 7, 2021, 3:28 PM IST
ಮೈಸೂರು: ಬೆಲೆ ಏರಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆನಡೆಸಿದ ಅವರು, ಕೋವಿಡ್ ಹೆಸರಿನಲ್ಲಿ ಜನರ ಲೂಟಿನಿಲ್ಲಿಸಿ ಬೆಲೆ ಏರಿಕೆ ಎಂಬ ಮಹಾಮಾರಿಯನ್ನು ತಡೆಗಟ್ಟಿಎಂಬ ಘೋಷವಾಕ್ಯವುಳ್ಳ ಫಲಕ ಪ್ರದರ್ಶಿಸಿ, ಕೇಂದ್ರಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಿ ಅಡುಗೆಅನಿಲ (ಎಲ್ಪಿಜಿ)ದ ಸಬ್ಸಿಡಿ ರದ್ದತಿಯನ್ನು ವಾಪಸ್ಪಡೆಯಿರಿ. ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತ ಮಾಡಿ,ಬೆಲೆಯನ್ನು ಇಳಿಸಿ. ಪಡಿತರ ವಿತರಣೆಯಲ್ಲಿ ದವಸಧಾನ್ಯಗಳ ಪ್ರಮಾಣವನ್ನು ಕಡಿತ ಮಾಡಬಾರದು.ಎಲ್ಲ ಬಡವರಿಗೂ ಪಡಿತರ ಚೀಟಿ ನೀಡಬೇಕು.ಅಂಗವಿಕಲ, ವೃದ್ಧ, ವಿಧವೆ ಮೊದಲಾದವರ ಮಾಸಿಕಪಿಂಚಣಿಯನ್ನು ವಿಳಂಬ ಮಾಡದೆ ಪಾವತಿಸಿ, ರೈಲುಓಡಾಟವನ್ನು ಸಹಜ ಸ್ಥಿತಿಗೆ ಮರಳಿಸಿ, ರೈಲು ದರ ಏರಿಕೆಹಿಂಪಡೆಯಿರಿ, ಬಡವರ ಸಾರಿಗೆ ಪ್ಯಾಸೆಂಜರ್ರೈಲುಗಳನ್ನು ಪುನರಾರಂಭಿಸಿ ಸೇರಿದಂತೆ ವಿವಿಧ ಬೇಡಿಕೆಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಸ್ಯುಸಿಐ ಜಿಲ್ಲಾ ಕಾರ್ಯದರ್ಶಿಬಿ.ರವಿ, ಪದಾಧಿಕಾರಿಗಳಾದ ಎಂ.ಉಮಾದೇವಿ,ಚಂದ್ರಶೇಖರ್ ಮೇಟಿ, ವಿ.ಯಶೋಧರ್, ಸಂಧ್ಯಾ,ಸೀಮಾ, ಹರೀಶ್ ಇತರರಿದ್ದರು.