ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ: ಮುಂದುವರಿದ ಪ್ರತಿಭಟನೆ, ರಾಜ್ಯ ಸರ್ಕಾರಿ ವೈದ್ಯ ಸಂಘದ ಸಭೆ
Team Udayavani, Aug 23, 2020, 10:49 AM IST
ಮೈಸೂರು: ನಂಜನಗೂಡು ತಾಲೂಕು ವೈದ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಬಂಧಿಸಿದಂತೆ ಸಿಇಓ ಅಮಾನತು ಮಾಡಬೇಕೆಂದು ಒತ್ತಾಯಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.
ಇಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ವೈದ್ಯರ ಸಂಘದ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ವೈದ್ಯರ ಮುಂದಿನ ಹೋರಾಟ ನಡೆಯಲಿದೆ ಎನ್ನಲಾಗಿದೆ.
ಸಿಇಓ ಒತ್ತಡದಿಂದ ಟಿಎಚ್ಓ ನಾಗೇಂದ್ರ ಆತ್ಮಹತ್ಯೆ ಮಾಡಿಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ಸಿಇಓ ಅಮಾನತು ಮಾಡಬೇಕು, ಒತ್ತಡ ಕಡಿಮೆ ಮಾಡಿ ಹಲವು ಬೇಡಿಕೆ ಮುಂದಿಟ್ಟು ಹೋರಾಟ ಮಾಡುವುದಾಗಿ ವೈದ್ಯರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲೋರ್ವ ಪಾಕ್ ಪ್ರೇಮಿ: ಪವರ್ ಆಫ್ ಪಾಕಿಸ್ತಾನ ಪೇಜ್ ಶೇರ್ ಮಾಡಿದ ಪೇದೆ
ವೈದ್ಯರು ಮುಷ್ಕರದಲ್ಲಿ ತೊಡಗಿರುವ ಕಾರಣ ಮೈಸೂರಿನಲ್ಲಿ ಕೋವಿಡ್ ಅಪ್ಡೇಟ್ ಕೂಡ ಶೂನ್ಯವಾಗಿತ್ತು. ಕಳೆದ ಎರಡು ದಿನದದಿಂದ ಕೋವಿಡ್ ಮಾಹಿತಿಯೂ ಅಲಭ್ಯವಾಗಿದೆ.