ಶೋಷಿತರಿಗೆ ಅರಸು ರಾಜಕೀಯ ಅಧಿಕಾರ: ಶ್ರೀನಿವಾಸ ಪ್ರಸಾದ್‌


Team Udayavani, Aug 21, 2017, 12:07 PM IST

mys2.jpg

ಹುಣಸೂರು: ಧ್ವನಿ ಇಲ್ಲದವರಿಗೆ ಮತ್ತು ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ನೀಡುವ ಮೂಲಕ ಡಿ.ದೇವರಾಜ ಅರಸರು ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಿಸಿದ ಧೀಮಂತ ವ್ಯಕ್ತಿ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಬಣ್ಣಿಸಿದರು.

ಹುಣಸೂರು ಅಂಬೇಡ್ಕರ್‌ ಭವನದಲ್ಲಿ ತಾಲೂಕು ಜನರಿಗಾಗಿ ಜಾಗತಿ ವೇದಿಕೆ ಸಮಾನತೆ ಹರಿಕಾರ ಡಿ.ದೇವರಾಜ ಅರಸರ 102ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಜನಜಾಗತಿ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

70-80ರ ದಶಕದಲ್ಲಿ ರಾಜ್ಯದ ರಾಜಕೀಯ ಇತಿಹಾಸ ಎಂದೂ ಮರೆಯಲಾಗದು. ಅಲ್ಲಿಯವರೆಗೆ ಕೆಲವೇ ಸಮುದಾಯದ ಕಪಿಮುಷ್ಟಿಯಲ್ಲಿದ್ದ ರಾಜಕೀಯ ಅಧಿಕಾರ ಅರಸರ ಆಗಮನದಿಂದಾಗಿ ಬಲಿಷ್ಟ ಸಮಾಜದ ಕಪಿಮುಷ್ಠಿಯಲ್ಲಿದ್ದ ರಾಜಕೀಯ ಅಧಿಕಾರ ಎಲ್ಲಸ್ತರಗಳ ತಳ ಸಮುದಾಯಕ್ಕೂ ಸಿಗುವಂತಾಯಿತು ಎಂದರು.

 ಅಜಾನುಬಾಹು ಅರಸರಿಂದಾಗಿ ಸಂವಿಧಾನದ ಆಶಯಗಳ ಸಮರ್ಪಕ ಜಾರಿಯಾಯಿತು. ಅಂದಿನವರೆಗೂ ಅಧಿಕಾರವನ್ನೇ ಅನುಭವಿಸದವರನ್ನು ಹೆಕ್ಕಿ ಹುಡುಕಿ ಅವರಿಗೆ ಅಧಿಕಾರ ನೀಡಿದ ಧೀಮಂತ ವ್ಯಕ್ತಿತ್ವ ಅರಸರದ್ದಾಗಿತ್ತೆಂದರು.

ಮಾಜಿ ಸಚಿವ ಎಚ್‌.ವಿಶ್ವನಾಥ್‌, ಕ್ಷಮಾಗುಣ ಮತ್ತು ಕೃತಜ್ಞತೆ ಅರಸರಲ್ಲಿ ಎದ್ದು ಕಾಣುವ ಗುಣಗಳಾಗಿವೆ. ದೇಶದೆಲ್ಲೆಡೆ ತುರ್ತುಸ್ಥಿತಿ ತನ್ನ ಕರಾಳಮುಖವನ್ನು ತೋರಿದರೆ, ರಾಜ್ಯದಲ್ಲಿ ಅದನ್ನೇ ಲಾಭವನ್ನಾಗಿಸಿಕೊಂಡ ಅರಸರು. ನನ್ನಂತಹ ನೂರಾರು ಮಂದಿಯನ್ನು ಕರೆತಂದು ರಾಜಕೀಯ ಅಧಿಕಾರ ಕೊಟ್ಟು ನಾಯಕನ್ನಾಗಿಸಿದ ಸಾಧಕರು ಎಂದು ಹೇಳಿದರು.

ತಾನು ಬರೆದ 6 ಪುಸ್ತಕಗಳಲ್ಲಿ ಅರಸರನ್ನು ಉಲ್ಲೇಖೀಸಿದ್ದೇನೆ. ಹಳ್ಳಿ ಹಕ್ಕಿ ಹಾಡು ಪುಸ್ತಕ ಅರಸರ ಜೀವನಚರಿತ್ರೆಯಾದರೂ ಅದು ನನ್ನ ಆತ್ಮಕಥೆಯಾಗಿ ಬರೆದುಕೊಂಡಿದ್ದೇನೆ. ತುರ್ತುಸ್ಥಿತಿಯನ್ನು ಲಾಭದಾಯಕವಾಗಿ ಮಾಡಿಕೊಂಡು ಚಾಣಾಕ್ಷತೆ ಮೆರೆದ ಅವರು ಆ ಸಂದರ್ಭವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಭೂಸುಧಾರಣಾ ಕಾಯ್ದೆಯಂತಹ ಕ್ರಾಂತಿಕಾರಿ ಯೋಜನೆ ಜಾರಿಗೊಳಿಸಿದರೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್‌.ಪಿ.ಮಂಜುನಾಥ್‌, ಅರಸರು ಹುಟ್ಟುಹಾಕಿದ ಉದ್ದೂರು ಕಾವಲ್‌ ಸೊಸೈಟಿ 781 ಸದಸ್ಯರಿಗೆ 40 ವರ್ಷಗಳ ನಂತರ ಹಕ್ಕುಪತ್ರ ನೀಡುವ ಸೌಭಾಗ್ಯ ತಮ್ಮದು. ಅರಸರ ಆದರ್ಶಗಳ ಕರಗತವಲ್ಲದಿದ್ದರೂ ಪಾಲನೆ ಮಾತ್ರ ಗೊತ್ತು. ಅರಸರ ಹುಟ್ಟೂರು ಅಭಿವೃದ್ಧಿ ಕುರಿತು ಸಾಕಷ್ಟು ಟೀಕೆಗಳು ಬರುತ್ತಿದ್ದು, ಟೀಕೆಗೆ ಬೆದರೋನು ನಾನಲ್ಲ ಎಂದರು.

ತಾಲೂಕಿನಲ್ಲಿ ಕೋಮು ಸಾಮರಸ್ಯಕ್ಕಾಗಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದ್ದು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಪೊಲೀಸ್‌ ಇಲಾಖೆಯೂ ಆ ಪದಕ್ಕೆ ಅರ್ಥ ಬರುವಂತೆ ಕೆಲಸ ನಿರ್ವಹಿಸಬೇಕು. ರೌಡಿ ಪೊಲೀಸ್‌ ಆಗಲು ತಾವೆಂದೂ ಬಿಡೊಲ್ಲವೆಂದು ಎಚ್ಚರಿಸಿದರು.

ವೇದಿಕೆ ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ಗೌರವಾಧ್ಯಕ್ಷ ನಾಗರಾಜಮಲ್ಲಾಡಿ, ಡೀಡ್‌ ಶ್ರೀಕಾಂತ್‌ ಹರಿಹರಾನಂದಸ್ವಾಮಿ ಹಾಗೂ ವಿವಿಧ ಸಮುದಾಯದ ಮುಖಂಡರು ಮಾತನಾಡಿದರು. ಸಮಾವೇಶದಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ನಿಂಗರಾಜ ಮಲ್ಲಾಡಿ, ಸದಸ್ಯರಾದ ಡಿ.ಕುಮಾರ್‌, ಸತ್ಯಪ್ಪ, ಕೆಂಪರಾಜು, ಅಣ್ಣಯ್ಯನಾಯಕ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿಳಿಕೆರೆ ಮಂಜುನಾಥ್‌, ಡಾ.ತಿಮ್ಮಯ್ಯ, ಲ್ಯಾಂಪ್ಸ್‌ ಕೃಷ್ಣಯ್ಯ, ಆದಿವಾಸಿ ಮುಖಂಡ ಜೆ.ಕೆ.ರಾಮು ಮತ್ತಿತರರಿದ್ದರು.

ಸಿಎಂರಿಂದ ಅರಸರ ಹುಟ್ಟೂರು ಅಭಿವೃದ್ಧಿ
ಅರಸರ ಹುಟ್ಟೂರು ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣರಾಗಲೀ, ಯಡಿಯೂರಪ್ಪನವರಾಗಲೀ ಬಿಡಿಗಾಸೂ ಕೊಟ್ಟಿಲ್ಲ. ಅದೇನಾದರೂ ನಿಜವೇ ಆಗಿದ್ದರೆ ತಾನು ಈ ಕ್ಷಣದಲ್ಲೇ ರಾಜೀನಾಮೆ ನೀಡಿ ರಾಜಕೀಯ ಬಿಡುತ್ತೇನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಥಮವಾಗಿ ಬಜೆಟ್‌ನಲ್ಲೇ ಘೋಷಿಸಿ, ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಹಾಗೂ ಕಲ್ಲಹಳ್ಳಿಗೆ ತಲಾ 10 ಕೋಟಿ ರೂ.ಅನುದಾನ ನೀಡಿ ದತ್ತುಗ್ರಾಮವಾಗಿ ಪಡೆದು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಂಡಿದ್ದಾರೆಂದು ಶಾಸಕ ಎಚ್‌.ಪಿ.ಮಂಜುನಾಥ್‌ ತಿಳಿಸಿದರು.

ಟಾಪ್ ನ್ಯೂಸ್

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.