“ಯಾರೂ ಅಲ್ಲಾ, ಯಡಿಯೂರಪ್ಪಾನೇ ವಿಲನ್”: ಸಚಿವ ಸೋಮಶೇಖರ್ ಹೇಳಿಕೆ
Team Udayavani, Oct 27, 2020, 11:26 AM IST
ಮೈಸೂರು: ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಹೀರೋ ವಿಲನ್ ಕಿತ್ತಾಟ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಟಿ ಸೋಮಶೇಖರ್, “ಇಲ್ಲಿ ಯಾರೂ ಅಲ್ಲಾ, ಯಡಿಯೂರಪ್ಪಾನೇ ವಿಲನ್” ಎಂದು ಹೇಳಿದ ಘಟನೆ ಇಂದು ನಡೆಯಿತು.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಯಿ ತಪ್ಪಿ ಯಡಿಯೂರಪ್ಪ ಅವರನ್ನು ವಿಲನ್ ಎಂದ ಕರೆದರು. ಇದನ್ನು ಗಮನಿಸಿದ ಶಾಸಕ ರಾಮದಾಸ್ ಕೂಡಲೇ ಸಚಿವರ ನೆರವಿಗೆ ಆಗಮಿಸಿ, ವಿಲನ್ ಅಲ್ಲಾ ಸರ್ ಅದು ಹೀರೋ ಎಂದು ಸರಿಪಡಿಸಿದರು.
ಕೂಡಲೇ ಎಚ್ಚೆತ್ತುಕೊಂಡ ಸಚಿವ ಸೋಮಶೇಖರ್, ಯಡಿಯೂರಪ್ಪ ಅವರು ಹೀರೋನೂ ಹೌದೂ ವಿಲನ್ನೂ ಹೌದು ಎಂದು ಸಂಭಾಳಿಸಿದರು.
ದಸರಾ ಯಶಸ್ವಿ: ಕೋವಿಡ್ -19 ಸೋಂಕಿನ ಆತಂಕದ ನಡುವೆಯೂ ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಕೋವಿಡ್ ಆತಂಕದಿಂದಾಗಿ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡು ದಸರಾ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ, ಧನ್ಯವಾದಗಳನ್ನು ಸಲ್ಲಿಸುತ್ತೇನೆ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.