ಹುಣಸೂರಿನ ರಾಮಮಂದಿರಗಳಲ್ಲಿ ಸರಳ ಸಂಕ್ರಾಂತಿ ಆಚರಣೆ
Team Udayavani, Jan 15, 2022, 7:56 PM IST
ಹುಣಸೂರು: ಸಂಕ್ರಾಂತಿ ಅಂಗವಾಗಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ನಗರದ ವಿವಿಧ ಶ್ರೀರಾಮ ಮಂದಿರಗಳ ಭಜನಾ ತಂಡಗಳವತಿಯಿಂದ ಭಜನೆ, ರಾಮಮಂದಿರದಲ್ಲಿ ವಿಶೇಷ ಪೂಜೆ ಆಯೋಜಿಸಿ ಪ್ರಸಾದ ವಿತರಿಸಿದರು. ಎಲ್ಲಡೆ ವೀಕ್ ಎಂಡ್ ಕಫ್ಯೂ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿದರು.
ಧನುರ್ಮಾಸದ ಅಂಗವಾಗಿ ಕಳೆದ ಒಂದು ತಿಂಗಳಿನಿಂದ ಮುಂಜಾನೆ ನಗರದ ವಿವಿಧ ಬಡಾವಣೆಗಳ ಭಕ್ತರು ಲಕ್ಷö್ಮಣತೀರ್ಥ ನದಿ ತಟದ ಅಶ್ವತ್ಥ ಕಟ್ಟೆಗೆ ಪೂಜೆ ಸಲ್ಲಿಸಿದ ನಂತರ ಅಲಂಕೃತ ಮಂಟಪದಲ್ಲಿ ರಾಮದೇವರ ಭಾವಚಿತ್ರವಿರಿಸಿ. ಭಜನಾ ತಂಡಗಳು ರಾಮನ ಭಜನೆ ಮಾಡುತ್ತಾ ಮೆರವಣಿಗೆ ನಡೆಸಿ, ನಂತರ ರಾಮಮಂದಿರಗಳಲ್ಲಿ ನಿತ್ಯ ಸರಳವಾಗಿ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗಿಸಲಾಗಿತ್ತು. ಧನುರ್ಮಾಸದ ಕೊನೆಯದಿನ ಸಂಕ್ರಾಂತಿಯಂದು ಆಯಾ ರಾಮಮಂದಿರಗಳ ಬಡಾವಣೆಯ ಬೀದಿಗಳಲ್ಲಿ ಭಜನೆ ಮಾಡುತ್ತಾ, ದೇವರ ಮೆರವಣಿಗೆ ನಡೆಸುವ ವೇಳೆ ಮನೆಗಳವರು ಪೂಜೆ ಸಲ್ಲಿಸುವುದು ವಾಡಿಕೆ. ಸಂಪ್ರದಾಯದAತೆ ಮುಂಜಾನೆಯೇ ನದಿ ತಟದ ಅಶ್ವತ್ಥಕಟ್ಟೆಗೆ ಪೂಜೆ ಸಲ್ಲಿಸಿದ ವಿವಿಧ ಬಡಾವಣೆಗಳ ರಾಮಮಂದಿರದ ಭಜನಾ ತಂಡಗಳು ಉತ್ಸವ ಮೂರ್ತಿಯೊಂದಿಗೆ ರಾಮನಾಮ ಪಠಿಸುತ್ತಾ ಬೀದಿಗಳಲ್ಲಿ ಸಾಗಿಬಂದು ರಾಮ ಮಂದಿರಗಳಲ್ಲಿ ಭಜನೆ ಅಂತ್ಯಗೊಳಿಸಿದರು. ಭಕ್ತರು ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು. ನಂತರ ರಾಮಮಂದಿರದಲ್ಲಿ ದೇವರಿಗೆ ವಿವಿಧ ಅಭಿಷೇಕ, ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು.
ಉಳಿದಂತೆ ಸ್ಟೋರ್ ಬೀದಿ, ಗಣೇಶನಗುಡಿ ಬೀದಿ ರಾಮಮಂದಿರ, ಜೆಎಲ್.ಬಿರಸ್ತೆಯ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಭಜನೆ ನಡೆಸಿದರು. ಗಣೇಶಗುಡಿ ಬೀದಿ ಹಾಗೂ ಹಾರಂಗಿ ಕಚೇರಿ ಆವರಣದ ಗಣೇಶ ದೇವಾಲಯ, ಮುತ್ತುಮಾರಮ್ಮ, ಮಂಜುನಾಥಸ್ವಾಮಿ ದೇವಾಸ್ಥಾನಗಳಲ್ಲಿ ಕೊರೊನಾ ವೀಕ್ ಎಂಡ್ ಕಫ್ಯೂ ಹಿನ್ನೆಲೆಯಲ್ಲಿ ಧ್ವನಿವರ್ಧಕ ಬಳಸದೆ ಸರಳವಾಗಿ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ