ಇಂದಿನಿಂದ ಶ್ರೀದುರ್ಗಮ್ಮ-ಮರ್ಗಮ್ಮ ದೇವಿ ಮಹೋತ್ಸವ


Team Udayavani, Mar 23, 2021, 2:21 PM IST

ಇಂದಿನಿಂದ ಶ್ರೀದುರ್ಗಮ್ಮ-ಮರ್ಗಮ್ಮ ದೇವಿ ಮಹೋತ್ಸವ

ಹುಣಸೂರು: ನಗರದ ಸರಸ್ವತಿಪುರಂ ಬಡಾವಣೆಯ ಮಂದಿಯ ಆರಾಧ್ಯ ದೈವ ಶಕ್ತಿದೇವತೆ ಶ್ರೀದುರ್ಗಮ್ಮ-ಮರ್ಗಮ್ಮ ದೇವಿಯ114ನೇ ವಾರ್ಷಿಕೋತ್ಸವ ಹಾಗೂ ಅಡ್ಡ ಪಲ್ಲಕ್ಕಿಉತ್ಸವವು ಮಂಗಳವಾರದಿಂದ ಮೂರು ದಿನಗಳಕಾಲ ಜರುಗಲಿದೆ.

ಸಾಕಿ ನೈವೇದ್ಯ: ಮಾ.23 ರಿಂದ 25ರವರೆಗೆ ನಡೆಯುವ ಹಬ್ಬಕ್ಕಾಗಿ ಮೊದಲ ದಿನ ಮಾ.23ರಮಂಗಳವಾರದಂದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆ ದೇವಿಗೆತಂಪು ನೀಡುವ ಸಾಕಿ(ಮದ್ಯ)ಯನ್ನುತಂದು ಅಶ್ವತ್ಥಕಟ್ಟೆಗೆ ತಂದು ಪೂಜೆಸಲ್ಲಿಸಿ, ಅಲ್ಲಿಂದ ಹೆಂಗಳೆಯರುಮಡಕೆಯಲ್ಲಿ ಸಾಕಿಮದ್ಯದನೈವೇದ್ಯವನ್ನು ದೇವಸ್ಥಾನಕ್ಕೆತಂದು ದೇವರಿಗೆ ಸಮರ್ಪಿಸುವರು.

ಅಡ್ಡಪಲ್ಲಕ್ಕಿ ಉತ್ಸವ, ಕಟ್ಟು ಅರ್ಪಣೆ: ಅದೇ ದಿನಸಂಜೆ 4 ಗಂಟೆಗೆ ಅಲಂಕರಿಸಿದ ಹೂವಿನಪಲ್ಲಕ್ಕಿ ಯಲ್ಲಿ ದುರ್ಗಮ್ಮ – ಮರ್ಗಮ್ಮ ದೇವಿಯರ ಉತ್ಸವ ಮೂರ್ತಿಯನ್ನು ಲಕ್ಷ್ಮಣತೀರ್ಥನದಿ ತಟಕ್ಕೆ ತಂದು, ಹೋಮ -ಹವನ ನಡೆಸಿದ ನಂತರ ಪೂಜೆ ಸಲ್ಲಿಸಿ,ರಾಜಬೀದಿಗಳಲ್ಲಿ ಮಂಗಳವಾದ್ಯ, ಡೊಳ್ಳುಕುಣಿತ, ನಗಾರಿ, ತಮಟೆ, ಪಟಾಕಿ ಸದ್ದಿನೊಂದಿಗೆಭವ್ಯಮೆರೆವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಲಿದೆ.

ಬಡಾವಣೆ ಮಂದಿ ಪೂಜೆ ಸಲ್ಲಿಸಿದ ನಂತರ ಮದ್ಯರಾತ್ರಿ ಮಾರಮ್ಮದೇವಿಗೆ ನಾಲ್ಕು ಮೂಲೆಗಳಲ್ಲಿ ಬಲಿ ಅನ್ನ ನೈವೇದ್ಯ(ಕಟ್ಟು) ಸಲ್ಲಿಸುವರು. ಮಡಿಯಲ್ಲಿ ತಂಬಿಟ್ಟಿನ

ಆರತಿ: ಮಾ.24ರಂದು ಬುಧವಾರ ಮುಂಜಾನೆ5.30ಕ್ಕೆ ಪ್ರತಿ ಮನೆಯಿಂದಕಣಗಲೆಹೂವಿನಿಂದ ಅಲಂಕರಿಸಿದತಂಬಿಟ್ಟುನ್ನು ತಲೆಮೇಲೆ ಹೊತ್ತುಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಆಗಮಿಸಿ ತಂಪು ಸಲ್ಲಿಸುವರು. ಈ ವೇಳೆ ಸಾಕಿನೈವೇದ್ಯವನ್ನು ಭಕ್ತರಿಗೆ ವಿತರಿಸುವರು.

ನಾಡಿದ್ದು ಓಕುಳಿ ಸಂಭ್ರಮ: ಮಾ.25ಗುರುವಾರ ಬೆಳಗ್ಗೆ 8ರಿಂದ ಸಂಜೆವರೆಗೂ ಬಡಾವಣೆಯಪ್ರತಿಮನೆ ಬಳಿಯೂ ಮಕ್ಕಳು, ಹೆಂಗಸರು-ದೊಡ್ಡವರಾದಿಯಾಗಿ ಬಣ್ಣದ ಓಕುಳಿ ಆಡುವರು.

ಇದೇ ವೇಳೆ ಬಡಾವಣೆಯ ಹೊಸ ಅಳಿಯಂದಿರಿಗೆ ನೀರು ಹಾಕುವ ಪದ್ಧತಿ ಇದೆ.9ನೇ ದಿನಕ್ಕೆ ಮರಪೂಜೆ ಸಲ್ಲಿಸಿ, ಬಡಾವಣೆಮಂದಿಗೆ ಹಾಗೂ ನೆಂಟರು, ಸ್ನೇಹಿತರು, ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಸುವರು.ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿಉತ್ಸವ-ಪೂಜೆಗಳಲ್ಲಿ ಭಾಗವಹಿಸುವ ಎಲ್ಲರೂಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದುಸೇವಾಸಮಿತಿಯ ಮುಖ್ಯಸ್ಥರು ಮನವಿ ಮಾಡಿದ್ದಾರೆ.

ಅಕ್ಕ-ತಂಗಿಯ ಇತಿಹಾಸ: ಶ್ರೀದುರ್ಗಮ್ಮ- ಮರ್ಗಮ್ಮ ದೇವಿಯರು ಅಕ್ಕ-ತಂಗಿಯಾಗಿದ್ದು,ಚಿಕ್ಕಹೆಂಚಿನ ಗುಡಿಯಲ್ಲಿದ್ದ ದೇವಾಲಯವು 12ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡುಭವ್ಯದೇವಾಲಯ ನಿರ್ಮಿಸಿದ್ದಾರೆ. ಇಡೀಬಡಾವಣೆಯ ಮಂದಿ ಒಟ್ಟಾಗಿ ಸೇರಿ ಆಚರಿಸುವಈ ಹಬ್ಬವನ್ನು ಪ್ರತಿವರ್ಷ ಶಿವರಾತ್ರಿ ನಂತರಯುಗಾದಿಗೂ ಮುನ್ನ ಅಡ್ಡಪಲ್ಲಕ್ಕಿ ಉತ್ಸವವನ್ನುಕಳೆದ 113 ವರ್ಷಗಳಿಂದ ಶ್ರದ್ಧೆª-ಭಯ-ಭಕ್ತಿಯಿಂದ ಆಚರಿಸುವರು. ಹಬ್ಬಕ್ಕೆ ತಮ್ಮನೆಂಟರಿಷ್ಟರನ್ನು ಆಹ್ವಾನಿಸಿ, ಆತಿಥ್ಯ ನೀಡುವ ಸಂಪ್ರದಾಯ ಬೆಳೆದು ಬಂದಿದೆ.

ವಾರಕಾಲ ಮಾಂಸದ ಅಡುಗೆ, ಮದ್ಯ ನಿಷೇಧ : ದೇವಿಯ ಉತ್ಸವ ಆಚರಿಸುವ ವಾರದಮೊದಲು ತಾಲೂಕಿನ ರಾಮಪಟ್ಟಣದಮಹದೇಶ್ವರ ದೇವಾಲಯಕ್ಕೆ ತೆರಳಿ ಪೂಜೆಸಲ್ಲಿಸಿ, ವರ ಪಡೆದುಕೊಂಡು ಉತ್ಸವದದಿನವನ್ನು ಬಡಾವಣೆಯ ಯಜಮಾನರು ನಿಗದಿಪಡಿಸುತ್ತಾರೆ. ಅಂದಿನಿಂದ ವಾರಕಾಲ ಇಲ್ಲಿನ ಕುಟುಂಬಗಳು ಅಡುಗೆಯಲ್ಲಿ ಒಗ್ಗರಣೆ ಹಾಕಲ್ಲ, ಮಾಂಸದ ಅಡುಗೆ ಮಾಡುವುದಿಲ್ಲ, ಮದ್ಯ ಸೇವಿಸಲ್ಲ, ಪ್ರತಿ ಮನೆಗೂ ಸುಣ್ಣ-ಬಣ್ಣ ಹೊಡೆಸುತ್ತಾರೆ. ಎಲ್ಲರೂ ಹೊಸಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ಇಡೀ ಬಡಾವಣೆ ಹಾಗೂ ಟಿಎಪಿಸಿಎಂಎಸ್‌ ರಸ್ತೆಯನ್ನು ಜಗಮಗಿಸುವವಿದ್ಯುತ್‌ದೀಪಗಳಿಂದ ಅಲಂಕರಿಸುತ್ತಾರೆ.ಬುಧವಾರದಂದು ಮಾಂಸದ ಅಡುಗೆ ಮಾಡಿ ನೆಂಟರಿಷ್ಟರೊಂದಿಗೆ ಸವಿಯುತ್ತಾರೆ.

 

-ಸಂಪತ್‌ಕುಮಾರ್

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.