ನಂಜನಗೂಡಿಗೆ ಹೋಗಲು ಒಪ್ಪದ ಸಿಬ್ಬಂದಿ
Team Udayavani, Apr 7, 2020, 3:31 PM IST
ನಂಜನಗೂಡು: ಕೋವಿಡ್ 19 ದಿಂದ ನಂಜನಗೂಡಿಗೆ ಹಣ್ಣು, ತರಕಾರಿ ಮಾರಾಟಕ್ಕೆ ಹೋಗಲು ಹಾಪ್ ಕಾಮ್ಸ್ ಸಿಬ್ಬಂದಿ ನಿರಾಕರಿಸಿದ್ದಾರೆ.
ತಾಲೂಕು ಆಡಳಿತ ಹಾಗೂ ತೊಟಗಾರಿಕೆ ಇಲಾಖೆ ಹಾಪ್ಕಾಮ್ಸ್ ಸಹಯೋಗದಲ್ಲಿ ಹಣ್ಣು, ತರಕಾರಿ ಖರೀದಿಸಿ ಶೇ.5ರಷ್ಟು ಲಾಭದಲ್ಲಿ ನಂಜನಗೂಡಿನಲ್ಲಿ ಗ್ರಾಹಕರ ಮನೆ ಮನೆಗೆ ತಲುಪಿಸುವ ಯೋಜನೆ ಇತ್ತು. ಸೋಮವಾರ ಮೈಸೂರಿನಿಂದ ಹಣ್ಣು, ತರಕಾರಿ ತರಲು ಹೋದ 2 ವಾಹನಗಳು ಸಂಜೆಯಾದರೂ ಬರಲಿಲ್ಲ. ನಂಜನಗೂಡಿಗೆ ಬರಲು ಹಾಪ್ಕಾಮ್ಸ್ ಸಿಬ್ಬಂದಿ ನಿರಾಕರಿಸಿದ ಕಾರಣ, ಹಣ್ಣು, ತರಕಾರಿ ತುಂಬಿಕೊಂಡ ವಾಹನಗಳು ಹಾಪ್ಕಾಮ್ಸ್ ಕಚೇರಿ ಬಳಿಯೇ ಇದ್ದವು.
ಅಸಹಾಯಕರಾದ ಅಧಿಕಾರಿಗಳು: ಉದಯವಾಣಿಯೊಂದಿಗೆ ಹಾಪ್ಕಾಮ್ಸ್ ಉಪ ನಿರ್ದೇಶಕ ಕೆ ರುದ್ರೇಶ ಮಾತನಾಡಿ, ನಮ್ಮಲ್ಲಿ ಸಿಬ್ಬಂದಿ ಕೊರತೆಯಿಲ್ಲ. ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಯಾರೂ ನಂಜನಗೂಡಿಗೆ ಹೊಗಲು ಸಿದ್ಧರಿಲ್ಲ. ನಂಜನಗೂಡಿನ ಜನತೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. ನಾವೇಷ್ಟು ಹೇಳಿದರೂ ನಮ್ಮವರ ನಿರಾಕರಣೆಯಿಂದ ನಾವು ಕೈಚಲ್ಲುವಂತಾಗಿದೆ ಎಂದರು.
ಡೀಸಿ ಇತ್ತ ಗಮನ ಹರಿಸಿ: ತಾಲೂಕು ಅಧಿಕಾರಿಯೇ ಸ್ವತಃ ಮಾರಾಟ ಮಾಡುತ್ತಿರುವಾಗ ಸರ್ಕಾರಿ ಸಂಸ್ಥೆ ಉದ್ಯೋಗಿಗಳು ಈ ಕೆಲಸ ನಿರಾಕರಿಸಿರುವದು ಸರಿಯೇ ತಪ್ಪೇ ಎಂಬ ಕುರಿತು ಡೀಸಿ ಇತ್ತ ಗಮನ ಹರಿಸಿ, ಸಮ ಸ್ಯೆಗೆ ಪರಿಹರಿಸಬೇಕು. ನಂಜನಗೂಡಿನ ಜನರಿಗೆ ಧೈರ್ಯ ತುಂಬಬೇಕು. ಹಾಪ್ಕಾಮ್ಸ್ ಮೈಸೂರಿನಲ್ಲಿ ನೀಡುತ್ತಿರುವ ಬೆಲೆಗಿಂತ ಕಡಿಮೆ ಬೆಲೆಗೆ ಹಣ್ಣು, ತರಕಾರಿ ಪೂರೈಸುತ್ತಿದ್ದೇವೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ಅಧಿಕಾರಿ ಗುರುಸ್ವಾಮಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್