ಇಂದಿನಿಂದ ಶ್ರೀಕಂಠೇಶ್ವರ ದೇಗುಲದಲ್ಲಿ ಗಿರಿಜಾ ಕಲ್ಯಾಣ
Team Udayavani, Jun 26, 2021, 6:05 PM IST
ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದಲ್ಲಿವಾರ್ಷಿಕವಾಗಿ ಜರುಗುವ ಗಿರಿಜಾ ಕಲ್ಯಾಣ ಉತ್ಸವಈ ಭಾಗದಲ್ಲಿ ಪ್ರಖ್ಯಾತಿ ಪಡೆದಿದ್ದು, ಸಹಸ್ರಾರುಭಕ್ತರು ಇದನ್ನು ಕಣ್ತುಂಬಿಕೊಳ್ಳಲು ಮುಗಿಬೀಳುತ್ತಿದ್ದರು.
ಆದರೆ,ಈಬಾರಿ ಕೊರೊನಾ ಲಾಕ್ಡೌನ್ನಿಂದ ಭಕ್ತರನ್ನು ಹೊರಗಿಟ್ಟು ವಿವಾಹನಡೆಸಲಾಗುತ್ತಿದೆ.ದೇಗುಲದಲ್ಲಿ ಜೂ.26ರ ಶನಿವಾರದಿಂದ ಜುಲೈ3ರವರೆಗೆ ಒಂದು ವಾರಗಳ ಕಾಲ ಈ ವಿವಾಹನೆರವೇರಲಿದೆ. ವಿಜೃಂಭಣೆ, ಅದ್ಧೂರಿಯಾಗಿ ನಡೆಯಬೇಕಿದ್ದ ಗಿರಿಜಾ-ಶಂಕರರ ಮದುವೆಗೆ ಭಕ್ತರಪ್ರವೇಶವನ್ನು ನಿಷೇಧಿಸಿ ಅರ್ಚಕರು, ಅಧಿಕಾರಿಗಳು ಹಾಗೂ ಅವಶ್ಯಕವಿರುವ ಸಿಬ್ಬಂದಿ ನೇತೃತ್ವದಲ್ಲಿನಡೆಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿರುವುದರಿಂದಮದುವೆಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರತಿವರ್ಷ ಆಷಾಢ ಮಾಸದಲ್ಲಿ ನಡೆಯುತ್ತಿದ್ದ ಈಮದುವೆ ಈ ಬಾರಿ ಬಹು ಬೇಗನೇ ಆರಂಭವಾಗಿಅಷಾಢಕ್ಕೂ ಮುನ್ನವೇ ಪೂರ್ಣಗೊಳ್ಳಲಿದೆ.ಸಹಸ್ರಾರು ಭಕ್ತರು ಹಾಗೂ ಸೇವಾರ್ಥದಾರರಸಮ್ಮುಖದಲ್ಲಿ ಗಿರಿಜೆಗೂ ಶ್ರೀಕಂಠೇಶ್ವರನಿಗೂಮದುವೆ ಮಾಡಿಸಿ ಕಣ್ತುಂಬಿಕ್ಕೊಳ್ಳುವುದೇ ಹಲವರಪಾಲಿಗೆ ಪುಣ್ಯದ ಕೆಲಸ. ಈ ದೇವ ವಿವಾಹವುಬರೋಬ್ಬರಿ 8 ದಿನಗಳ ಕಾಲ ಶುದ್ಧ ವೈದಿಕ ಸಂಪ್ರದಾಯದೊಂದಿಗೆ ಜಾ®ಪದ ಸಾಂÓ¢ತಿ ಯ ಸೊಬಗಿನೊಂದಿಗೆ ಅನಾವರಣಗೊಳ್ಳುವ ವೈಭವದ ಕಲ್ಯಾಣ ಮಹೋತ್ಸವ ಇದಾಗಿದೆ.
ಶ್ರೀಧರ್ ಆರ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ