ದಸರಾ ಆನೆಗಳ ಮೊದಲ ತಂಡ ನಾಳೆ ಮೈಸೂರಿಗೆ
Team Udayavani, Aug 10, 2017, 6:20 AM IST
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸಿದ್ಧತೆ ಆರಂಭವಾಗಿದೆ. ದಸರೆಯ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಪಾಲ್ಗೊಳ್ಳುವ 15 ಆನೆಗಳ ಪೈಕಿ, ಚಿನ್ನದ ಅಂಬಾರಿ ಹೊರುವ ಅರ್ಜುನ ನೇತೃತ್ವದ ಎಂಟು ಆನೆಗಳ ಮೊದಲ ತಂಡ ಶನಿವಾರ ಮೈಸೂರಿಗೆ ಆಗಮಿಸಲಿದೆ.
ದಸರಾ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಟಿಯಿಂದ ಈ ಬಾರಿ ಗಜಪಯಣವನ್ನು ಅದೂಟಛಿರಿಯಾಗಿ ಆಚರಿಸಲಾಗುವುದು. ದಸರಾ ಗಜಪಡೆ ಕುರಿತ ಸಾಕ್ಷ್ಯಚಿತ್ರವನ್ನೂ ತಯಾರಿಸಲಾಗಿದೆ. ಅದರಂತೆ ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ.
ಮೊದಲ ತಂಡದಲ್ಲಿ ಅರ್ಜುನ, ಅಭಿಮನ್ಯು, ಗಜೇಂದ್ರ, ಬಲರಾಮ, ವರಲಕ್ಷ್ಮೀ, ವಿಜಯ, ಕಾವೇರಿ ಹಾಗೂ ಭೀಮಾ ಆನೆಗಳು ಮೈಸೂರಿಗೆ ಬರಲಿವೆ. ಇಲವಾಲದ ಅಲೋಕ ದಲ್ಲಿ ಐದು ದಿನಗಳ ಕಾಲ ಬೀಡು ಬಿಡಲಿವೆ. 17ರಂದು ಅರಮನೆ ಜಯ ಮಾರ್ತಾಂಡ ದ್ವಾರದ ಮೂಲಕ ಜಿಲ್ಲಾಡಳಿತ ಗಜಪಡೆಯನ್ನು ಶಾಸೊOಉ ಕ್ತವಾಗಿ ಬರಮಾಡಿಕೊಳ್ಳಲಿದೆ.
ಆನೆಗೆ ಮೈಕ್ರೋ ಚಿಪ್: ಉತ್ತರ ಭಾರತ ಮತ್ತು ಕೇರಳದಲ್ಲಿ ಆನೆಗಳ ಅಕ್ರಮ ಮಾರಾಟ ನಡೆಯುವ ಹಿನ್ನೆಲೆಯಲ್ಲಿ ಈ ಅಕ್ರಮ ತಡೆಗಟ್ಟುವ ಉದ್ದೇಶದಿಂದ 2014ರಲ್ಲಿ ಶಿಬಿರಗಳಲ್ಲಿರುವ ಆನೆಗಳು, ದೇವಾಲಯ,ಅರಮನೆಯಲ್ಲಿರುವ ಆನೆಗಳಿಗೆ ಮೈಕ್ರೋಚಿಪ್ ಅಳವಡಿಸಲಾಗಿದೆ. ಚಿಪ್ ಅಳವಡಿಸಿರುವ ಆನೆಗಳ ಮೇಲೆ ಮೈಕ್ರೋಚಿಪ್ ರೀಡರ್ ಹಿಡಿದರೆ ಆ ಆನೆಗಳ ಸಂಖ್ಯೆಯನ್ನು ತೋರಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ