ವೈಯಕ್ತಿಕ ಪ್ರತಿಷ್ಠೆಯೇ ಸೋಲಿಗೆ ಕಾರಣ
Team Udayavani, May 27, 2019, 9:40 AM IST
ಹುಣಸೂರು: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಮೈತ್ರಿಪಕ್ಷಗಳ ನಡುವಿನ ಸಮನ್ವಯಕ್ಕಿಂತ ವೈಯಕ್ತಿಕ ಪ್ರತಿಷ್ಠೆಯೇ ಹೆಚ್ಚಾಗಿದ್ದರಿಂದ ಮೈತ್ರಿ ಅಭ್ಯರ್ಥಿಗೆ ಕಡಿಮೆ ಪ್ರಮಾಣದ ಲೀಡ್ ಸಿಗಲು ಕಾರಣವಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಹರಳಹಳ್ಳಿ ಮಾದೇಗೌಡ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಟಿಯಲ್ಲಿ ಮೈತ್ರಿ ಅಭ್ಯರ್ಥಿ ಸೋಲಿನ ಪರಾಮರ್ಶೆಮಾಡಿದ ಅವರು ಮೈತ್ರಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಪರ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಈ ಕ್ಷೇತ್ರದ ಶಾಸಕ ಎಚ್.ವಿಶ್ವನಾಥ್ರನ್ನು ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಗಣನೆಗೆ ತೆಗೆದುಕೊಳ್ಳದೆ ಸೋಲನುಭವಿಸು ವಂತಾಗಿದೆ. ಮೈತ್ತಿ ಅಭ್ಯರ್ಥಿಯ ಬೆಂಬಲವಾಗಿ ನಿಂತಿದ್ದ ಕಾಂಗ್ರೆಸ್ ವರಿಷ್ಠರಾದ ಸಿದ್ಧರಾಮಯ್ಯ ಮತ್ತವರ ತಂಡ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದಿರುವುದು ಕೂಡ ಅಭ್ಯರ್ಥಿ ಕೇವಲ 3,798 ಮತಗಳ ಮುನ್ನಡೆ ಪಡೆಯು ವಂತಾಯಿತು ಎಂದರು.
ಪಕ್ಷದ ಮುಖಂಡ ಹಾಗೂ ತಾಲೂಕು ಕುರುಬರ ಕ್ಷೇಮಾಬಿವೃದ್ಧಿ ಸಂಘದ ಅಧ್ಯಕ್ಷ ಡಿ.ಕೆ. ಕುನ್ನೇಗೌಡ ಮಾತನಾಡಿ, ಚುನಾವಣೆಯಲ್ಲಿ ತಾಲೂಕಿನ ಒಕ್ಕಲಿಗ ಸಮುದಾಯದ ಪಕ್ಷದ ಕುರುಬ ಸಮುದಾಯದ ಮತದಾರರು ಮೈತ್ರಿ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಇನ್ನು ಪಕ್ಷದ ಕಾರ್ಯಕರ್ತರು ಮೈತ್ರಿ ಧರ್ಮ ವನ್ನು ಪಾಲಿಸಿದ್ದಾರೆಂದರು.
ಬಿಜೆಪಿ ಭ್ರಮೆ: ಮುಖಂಡ ಹರಿಹರಾ ನಂದಸ್ವಾಮಿ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಯುವ ಮತದಾರರ ಮನಸ್ಸಿನಲ್ಲಿ ಮೋದಿ ಮತ್ತು ಬಿಜೆಪಿ ಎಂಬ ಭ್ರಮೆ ಹೊಕ್ಕ ಪರಿಣಾಮ ಎಲ್ಲ ಸಮುದಾಯದ ಶೇ.30ರಷ್ಟು ಮತಗಳು ಬಿಜೆಪಿಗೆ ಹೋಗಿದೆ. ಮುಂದಿನ ದಿನಗಳಲ್ಲಿ ಮೋದಿ ಯುವ ಮತದಾರರ ಮನಸ್ಸನ್ನು ಅರಿತು ಮುನ್ನಡೆಯಲೆಂದು ಆಶಿಸಿದರು. ಈ ಬಾರಿ ಬಿಜೆಪಿಯವರು ಸಹ ಹಣ ಹಂಚಿದ್ದರು. ಮೈತ್ರಿ ಪಕ್ಷದಲ್ಲಿ ದೈನಂದಿನ ಖರ್ಚಿಗೆ ಹಣದ ಕೊರತೆಯಿಂದಾಗಿ ಜೊತೆಗೆ ಮುಖಂಡರನ್ನು ಕಡೆಗಣಿಸಿದ್ದರಿಂದ ಕೊನೆಗಳಿಗೆಯಲ್ಲಿ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ ಹಾಗೂ ಮೈತ್ರಿ ಅಭ್ಯರ್ಥಿ ತಾಲೂಕಿನಲ್ಲಿ ಮತಯಾಚನೆ ಮಾಡದಿರು ವುದೂ ಕೂಡ ಹಿನ್ನಡೆಗೆ ಕಾರಣವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡ ಹಾಗೂ ನಗರಸಭಾ ಸದಸ್ಯ ಸತೀಶ್ ಕುಮಾರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ