ಶಾಲಾ ಮಂತ್ರಿಮಂಡಲಕ್ಕೆ ಪ್ರತಿನಿಧಿಗಳ ಆಯ್ಕೆ


Team Udayavani, Jul 3, 2019, 3:00 AM IST

shala-mantr]

ಕೆ.ಆರ್‌.ನಗರ: ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಅವರಲ್ಲಿ ಸ್ಥಳೀಯ ಆಡಳಿತ ಕುರಿತಾಗಿ ರಾಜಕೀಯ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಪಟ್ಟಣದ ಲಯನ್ಸ್‌ ಪ್ರೌಢಶಾಲೆಯಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲಕ್ಕೆ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆಗಾಗಿ ಚುನಾವಣೆ ನಡೆಯಿತು.

ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿಯೇ ನಡೆದ ಈ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆದಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿ ಮಂತ್ರಿ ಮಂಡಲದ 16 ಸ್ಥಾನಗಳಿಗೆ 42 ಮಂದಿ ಸ್ಪರ್ಧಿಸಿದ್ದರು. 6 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳ ಒಟ್ಟು 373 ಮತದಾರರಿದ್ದು, 347 ಮತಗಳು ಚಲಾವಣೆಯಾದವು.

ಬೆಳಗ್ಗೆ 8 ರಿಂದ 11.20 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಮತದಾನ ಮಾಡಿದರು. ಸೋಮವಾರ ಮಧ್ಯಾಹ್ನ 2ರಿಂದ 4.40ರವರೆಗೆ ಮತ ಎಣಿಕೆ ನಡೆಯಿತು. ಒಟ್ಟು ಚಲಾವಣೆಯಾದ ಮತಗಳಲ್ಲಿ 344 ಮತಗಳು ಕ್ರಮಬದ್ಧವಾಗಿದ್ದು, 3 ಮತಗಳು ತಿರಸ್ಕೃತಗೊಂಡವು.

ಮತ ಎಣಿಕೆಯಲ್ಲಿ 6ನೇ ತರಗತಿಯಿಂದ ನಿಶಾಂತ್‌.ಎನ್‌.ಗೌಡ ಮತ್ತು ಆರ್‌.ಸ್ಪಂದನಾ, 7ನೇ ತರಗತಿಯಿಂದ ಎಚ್‌.ಲಹರಿ ಹಾಗೂ ಡಿ.ಎಸ್‌.ನಿಖೀಲ್‌, 8ನೇ ತರಗತಿ ಎ ವಿಭಾಗದಿಂದ ಎಂ.ಸಿ.ಶರತ್‌ಕುಮಾರ್‌ ಮತ್ತು ಕೆ.ಎನ್‌.ಡೀನಾಶ್ರೀ, ಬಿ ವಿಭಾಗದಿಂದ ಗುರುರಾಜ್‌, ಕೆ.ಎಸ್‌.ರೀತುಪ್ರಿಯ,

9ನೇ ತರಗತಿ ಎ ವಿಭಾಗದಿಂದ ಗುಲಾಮ್‌.ಇ.ರಸೂಲ್‌ ಹಾಗೂ ಜಿ.ಎಲ್‌.ಜೀವಿತಾ, ಬಿ ವಿಭಾಗದಿಂದ ಆರ್‌.ವಿನುತಾ ಮತ್ತು ಎಸ್‌.ಲಿಖೀತ್‌, 10ನೇ ತರಗತಿ ಎ ವಿಭಾಗದಿಂದ ಎಂ.ಎಂ.ಶರತ್‌ಕುಮಾರ್‌ ಹಾಗೂ ವಿ.ಆರ್‌.ಕೃತಿಕಾ, ಬಿ ವಿಭಾಗದಿಂದ ಆರ್‌.ಹೊಯ್ಸಳ ಮತ್ತು ಕೆ.ಎಸ್‌.ಮನುಪ್ರಿಯ ಮಂತ್ರಿಮಂಡಲದ ಪ್ರತಿನಿಧಿಗಳಾಗಿ ಆಯ್ಕೆಯಾದರು.

ಮುಖ್ಯ ಶಿಕ್ಷಕ ಎಲ್‌.ಎಸ್‌.ಲೋಕೇಶ್‌ ಮಾರ್ಗದರ್ಶನದಲ್ಲಿ ಸಮಾಜ ವಿಜ್ಞಾನ ಶಿಕ್ಷಕ ಜಿ.ಕೆ.ನಾಗಣ್ಣ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಚುನಾವಣೆಯಲ್ಲಿ ಹಿರಿಯ ಶಿಕ್ಷಕಿ ಎಂ.ಕೆ.ರುಕ್ಮಿಣಿ ಮತಗಟ್ಟೆಯ ಮುಖ್ಯಾಧಿಕಾರಿಯಾಗಿ, ವಿಜ್ಞಾನ ಶಿಕ್ಷಕ ಎ.ವಿ.ಅನಿಲ್‌ಕುಮಾರ್‌ ಮತ ಎಣಿಕೆಯ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರೆ, ಇತರ ಶಿಕ್ಷಕರು ಸಹಾಯಕರಾಗಿದ್ದರು.

ಈ ವೇಳೆ ಮುಖ್ಯ ಶಿಕ್ಷಕ ಜಿ.ರಮೇಶ್‌, ಶಿಕ್ಷಕರಾದ ಟಿ.ಪಿ.ಸುರೇಂದ್ರ, ಬಿ.ಎಸ್‌.ಹರೀಶ್‌, ಬುಶ್ರಾಬಾನು, ಸಿ.ರಾಮೇಗೌಡ, ಎ.ಎಸ್‌.ಅಶ್ವಿ‌ನಿ, ಎಲ್‌.ತುಂಗೇಶ್ವರ್‌, ಸಿ.ಎಂ.ಪುಷ್ಪಾವತಿ, ಎಂ.ಎಲ್‌.ಅರುಣ್‌ಕುಮಾರ್‌, ಎಚ್‌.ಎಸ್‌.ಸುಮಾ, ಜಿ.ಕೆ.ನಾಗಣ್ಣ, ಎಸ್‌.ಎಸ್‌.ಪಲ್ಲವಿ, ಎಸ್‌.ಯೋಗಾನಂದ, ಟಿ.ಪಿ.ವಸಂತ, ಲಕ್ಷ್ಮೀ, ಸೌಮ್ಯ, ಟಿ.ಎಸ್‌.ಸುರಭಿ, ಸಿಬ್ಬಂದಿಗಳಾದ ಎಂ.ಕೆ.ಬೀಬಿಜಾನ್‌, ಕೆ.ಆರ್‌.ವಿನುತಾ, ಭಾನುಮತಿ, ಲಲಿತ, ಭಾಗ್ಯ, ಪಾರ್ವತಿ ಇತರರಿದ್ದರು.

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.